Category: ನಮ್ಮೂರು

  • ದೊಡ್ಡ ದೊಡ್ಡ ಮಂದಿ ಬಂದ್ ಮಠಾ ಉದ್ದಾರ್ ಮಾಡ್ತಾರನ್ಕೊಂಡಿದ್ದೆ: ಶ್ರೀ ದಿಂಗಾಲೇಶ್ವರ ಶ್ರೀಗಳು..

    ಹುಬ್ಬಳ್ಳಿ: ಮೂರುಸಾವಿರ ಮಠದಲ್ಲಿ ಉನ್ನತಮಟ್ಟದ ಸಮಿತಿಯಲ್ಲಿ ಪ್ರಮುಖರು ಬಂದಾಗ, ಮಠದ ಉದ್ದಾರ ಆಗತ್ತೆ ಎಂದುಕೊಂಡಿದ್ವಿ. ಆದರೆ, ಅದರಲ್ಲಿನ ಕೆಲವರು ಮಠದ ಆಸ್ತಿಯನ್ನ ಅವರಿಗೆ ಬೇಕಾದವರಿಗೆ ಮಾರಲು ಮುಂದಾದರು ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

    ಏನೇಲ್ಲಾ ಮಾತಾಡಿದ್ರು.. ನೀವೇ ಕೇಳಿ..!

    ಹುಬ್ಬಳ್ಳಿ ತಾಲೂಕಿನ ಬೈರಿದೇವರಕೊಪ್ಪ ಗ್ರಾಮದಲ್ಲಿ ಮಠದ ಆಸ್ತಿ ಉಳಿಸಿ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿ ಸ್ವಾಮೀಜಿಗಳು ಮಾತನಾಡುತ್ತಿದ್ದರು.

    ಸಚಿವ ಜಗದೀಶ ಶೆಟ್ಟರ, ವಿಜಯ ಸಂಕೇಶ್ವರ, ಮೋಹನ ಲಿಂಬಿಕಾಯಿ, ಬಸವರಾಜ ಹೊರಟ್ಟಿ, ಶಂಕರಣ್ಣ ಮುನವಳ್ಳಿ, ಬಸವರಾಜ ಬೊಮ್ಮಾಯಿ ಎಲ್ಲರೂ ಇದ್ದಿದ್ದರಿಂದ ಮಠಕ್ಕೆ ದೊಡ್ಡದೊಂದು ಅನುಕೂಲ ಆಗಲಿದೆ ಎಂದುಕೊಂಡಿದ್ದೆ. ಆದರೆ, ಅದು ಹಾಗಾಗಲಿಲ್ಲ.

    ವಿಜಯ ಸಂಕೇಶ್ವರ ಅವರು ಸಮಿತಿಯಿಂದ ಹೊರಗೆ ಬಂದರು. ಇಲ್ಲಿನವರು ತಮಗೆ ಬೇಕಾದವರಿಗೆ ಆಸ್ತಿಯನ್ನ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆರ್.ಟಿ.ಮಜ್ಜಗಿಯವರ ಅಳಿಯನಿಗೆ 2 ಎಕರೆ ಜಮೀನಿನನ್ನ 10 ಲಕ್ಷ ರೂಪಾಯಿಗೆ ಕೇಶ್ವಾಪುರದಲ್ಲಿನ ಆಸ್ತಿಯನ್ನ ಮಾರಾಟ ಮಾಡಿದ್ದಾರೆಂದು ಹೇಳಿದರು.

  • ಮೈತ್ರಿ ಸಭಾಪತಿ ಸ್ಥಾನಕ್ಕಾಗಿ ಸಿಮೀತ: ಜನವಿರೋಧಿ ನೀತಿಗಳಿಗಲ್ಲ- ಕುಮಾರಸ್ವಾಮಿ

    ರಾಮನಗರ: ಸಭಾಪತಿ ಸ್ಥಾನಕ್ಕಾಗಿ ಮಾತ್ರ ಬಿಜೆಪಿ ಜೊತೆ ಜಾತ್ಯಾತೀತ ಜನತಾದಳ ಮೈತ್ರಿ ಮಾಡಿಕೊಂಡಿದೆ ಹೊರತು ಬೇರೆ ರೀತಿ ಬಿಜೆಪಿ ಜೊತೆ ಹೊಂದಾಣಿಕೆಯಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿಗಾಗಿ ಸಭಾಪತಿ ಸ್ಥಾನಕ್ಕೆ ಮಾತ್ರ ಮೈತ್ರಿ ಹೊರತು ಜನ ವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜಿಯಿಲ್ಲ ಎಂದರು.

    ರೈತರು ಕಳೆದ 70 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ರೈತರ ಬಗ್ಗೆ ಗೌರವ ಇದ್ದರೆ ಸಭೆ ಮಾಡಬೇಕಿತ್ತು. ರೈತರ ಗೊಂದಲಗಳಿಗೆ ಖುದ್ದು ಪ್ರಧಾನಿ ಮನವರಿಕೆ ಮಾಡಿಕೊಡಲಿ. ಕೃಷಿ ಮಂತ್ರಿಗಳನ್ನು ಬಿಟ್ಟು ಸಭೆ ಮಾಡುವ ಬದಲು ಇವರೇ ಸಭೆ ಕರೆದು ಕಾಯ್ದೆಗಳಿಂದ ರೈತರಿಗೆ ಆಗುವ ಅನುಕೂಲದ ಬಗ್ಗೆ ತಿಳಿಸಬೇಕಿತ್ತು ಎಂದು ಹೇಳಿದರು.

    ವಿಧಾನಪರಿಷತ್ ಚುನಾವಣೆಯಲ್ಲಿ ಸಭಾಪತಿ ಹುದ್ದೆ ಜೆಡಿಎಸ್ ಗೆ ಲಭಿಸಲಿದ್ದು, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಭಾಪತಿಗಳಾಗಿ ಆಯ್ಕೆಯಾಗಲಿದ್ದಾರೆ.

  • ಗದಗ ಜಿಮ್ಸ್ ಅಕೌಂಟ್ ವಿಭಾಗದ ಮಹಿಳೆ ನೇಣಿಗೆ ಶರಣು..!

    ಗದಗ: ನಗರದ ಜಿಮ್ಸ್ ಕಾಲೇಜಿನಲ್ಲಿ ಅಕೌಂಟ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ನೇಣಿಗೆ ಶರಣಾದ ಘಟನೆ ಹುಲಕೋಟಿಯ ಹುಡ್ಕೋ ಕಾಲನಿಯಲ್ಲಿ ನಡೆದಿದೆ.

    ಕಳೆದ ಐದು ವರ್ಷಗಳಿಂದ ಜಿಮ್ಸನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಸ್ರೀನಭಾನು ಎಂಬ 26 ವಯಸ್ಸಿನ ಮಹಿಳೆಯೇ ನೇಣಿಗೆ ಶರಣಾದ ದುರ್ಧೈವಿಯಾಗಿದ್ದಾರೆ. ನಿನ್ನೆ ಕೂಡಾ ಕೆಲಸಕ್ಕೆ ಹಾಜರಾಗಿ, ಮನೆಗೆ ಮರಳಿದ್ದರು.

    ಘಟನೆಯ ಬೆಳಕಿಗೆ ಬರುತ್ತಿದ್ದ ಹಾಗೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಡೆತ್ ನೋಟ್ ಹುಡುಕಾಟ ನಡೆಸಿದ್ದರೂ, ಯಾವುದೇ ರೀತಿಯ ಡೆತ್ ನೋಟ್ ಸಿಕ್ಕಿಲ್ಲ. ಇದರಿಂದ ಸಾವಿಗೆ ಹಲವು ಅನುಮಾನಗಳು ಮೂಡಿವೆ.

    ಮೊದಲಿಂದಲೂ ನಸ್ರೀನ್ ಭಾನು ಅಕೌಂಟ್ ಸೆಕ್ಷನ್ ದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

  • ಶೀಘ್ರದಲ್ಲಿ 1ರಿಂದ 8ನೇ ತರಗತಿ ಆರಂಭ: ಸಚಿವ ಸುರೇಶಕುಮಾರ

    ಬೆಂಗಳೂರುರಾಜ್ಯದಲ್ಲಿ ಈಗಾಗಲೇ 9, 10 ಹಾಗೂ ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು ಶೀಘ್ರದಲ್ಲೇ ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ತರಗತಿ ಆರಂಭಿಸುವ ಕುರಿತು ಫೆಬ್ರವರಿ ಎರಡನೇ ವಾರ ಇಲ್ಲವೇ ಮೂರನೇ ವಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಪ್ರಾಥಮಿಕ ಶಾಲಾ ಮಕ್ಕಳನ್ನು ಶಾಲೆಗೆ ಆಹ್ವಾನಿಸುವ ಮೊದಲು ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಭೆ ನಡೆಸಿ ದೀರ್ಘವಾಗಿ ಚರ್ಚೆ ನಡೆಸಿದ ಬಳಿಕವೇ ಒಂದರಿಂದ ಎಂಟನೇ ತರಗತಿಗಳನ್ನುಪ್ರಾರಂಭಿಸುವ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.

    ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ  9, 10 ಹಾಗೂ ಪಿಯುಸಿ (PUC) ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶೇಕಡ 80 ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಇದಲ್ಲದೆ 6ರಿಂದ ಎಂಟನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಲಿಕೆ ಮುಂದುವರೆದಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡರು.

  • ತಾಲೂಕು ಪಂಚಾಯತಿ ರದ್ಧತಿ ಸಾಧ್ಯವೇ ಇಲ್ಲಾ: ಸಚಿವರ ಹೇಳಿಕೆ

    ಶಿರಸಿ: ತಾಲೂಕು ಪಂಚಾಯತ್ ರದ್ಧತಿ ಕೇವಲ ಊಹಾಪೋಹ. ಅದನ್ನು ರದ್ದು ಮಾಡಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಆದ ಕಾರಣ ಈ ಬಾರಿಯೂ ಮೂರು ವಿಭಾಗದ ಪಂಚಾಯತ್ ರಾಜ್ ವ್ಯವಸ್ಥೆಯಡಿಯಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಕಾರ್ಮಿಕ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್, ತಾಲೂಕು ಪಂಚಾಯತ್ ರದ್ಧತಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಇದನ್ನು ಗ್ರಾಮೀಣಾಭಿವೃದ್ಧಿ ಸಚಿವರೂ ತಿಳಿಸಿದ್ದಾರೆ ಎಂದರು.

    ಈಗಾಗಲೇ ತಾಲೂಕು ಪಂಚಾಯತ್ ರದ್ಧತಿ ಬಗ್ಗೆ ಮಾತುಗಳು ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ, ಆದರೆ ಇದ್ಯಾವ ಚಿಂತನೆಯೂ ಇಲ್ಲ ಎಂದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್‌ಗೆ ಚುನಾವಣೆ ನಡೆಯಲಿದೆ ಎಂದರು.

    ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷವಾದ ಕುರಿತು ಮಾತನಾಡಿದ ಅವರು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇನ್ನೂ ಹಲವು ಕೆಲಸಗಳನ್ನು ಮಾಡಬೇಕಾಗಿದೆ. ಜನ ನಮ್ಮಿಂದ ಬಹಳ ಅಪೇಕ್ಷೆ ಇಟ್ಟುಕೊಂಡಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.

  • ಮೂರುಸಾವಿರ ಮಠದ ಬಗ್ಗೆ ಹಾದಿ ಬೀದಿಯೊಳಗೆ ಮಾತಾಡ್ತಿದ್ದಾರೆ: ನಾಗರಾಜ ಛಬ್ಬಿ

    ಹುಬ್ಬಳ್ಳಿ: ಮೂರುಸಾವಿರ ಮಠದ ಆಸ್ತಿಯನ್ನ ಯಾವ ಉದ್ದೇಶಕ್ಕಾಗಿ ಕೊಡಲಾಗಿದೆ ಎಂಬುದನ್ನ ಯಾರೋಬ್ಬರು ಹೇಳುತ್ತಿಲ್ಲ. ಹೀಗಾಗಿ ಮಠದ ಬಗ್ಗೆ ಹಾದಿ ಬೀದಿಯಲ್ಲಿ ನಿಂತು ಮಾತನಾಡುವ ಹಾಗಾಗಿದೆ. ಇದಕ್ಕೊಂದು ತಾರ್ಕಿಕ ಅಂತ್ಯವನ್ನ ನೀಡಲು ಶ್ರೀ ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮುಂದಾಗಬೇಕೆಂದು ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಬೇಸರದಿಂದ ಹೇಳಿದರು.

    ನಾಗರಾಜ ಛಬ್ಬಿಯವರು ಹೇಳಿದ್ದೇನು.. ಇಲ್ಲಿದೆ ನೋಡಿ ವೀಡಿಯೋ..

    ಹುಬ್ಬಳ್ಳಿಯಲ್ಲಿ ಮಾತನಾಡಿದ ನಾಗರಾ ಛಬ್ಬಿಯವರು, ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿ ಪರಿಪೂರ್ಣವಾಗಿದ್ದಲ್ಲ. ಲಕ್ಷಾಂತರ ಭಕ್ತರು ಅಲ್ಲಿ ನಡೆದುಕೊಳ್ಳುತ್ತಿದ್ದಾರೆ. ಅಳಿದುಳಿದ ಆಸ್ತಿಯನ್ನ ಕೊಡುವುದರ ಹಿನ್ನೆಲೆಯಲ್ಲಿ ಯಾಕೆ ಹೇಳುತ್ತಿಲ್ಲವೆಂದರು.

    ಉನ್ನತಮಟ್ಟದ ಸಮಿತಿಯವರ ಜವಾಬ್ದಾರಿಯಿತ್ತು. ಆದರೆ, ಅವರು ಹೇಳೋಕೆ ತಯಾರಿಲ್ಲ. ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಆಸ್ತಿ ಕೊಡುವುದರಿಂದ ಮಠಕ್ಕೆ ಒಳ್ಳೆಯದಾಗತ್ತಾ..? ಆಗಿದ್ರೇ ಹೇಳಿ.. ಎಂದು ಒತ್ತಾಯಿಸಿದರು.

    ಸಮಾಜದ ಮುಂದೆ ಸತ್ಯವನ್ನ ಹೇಳಿ. ಏನಾಗಿದೆ ಹಣ ಪಡೆದಿದ್ದೀರಾ..? ಇಡೀ ಪ್ರಕರಣವನ್ನ ಸಮಾಜದ ಮುಂದೆ ಹೇಳುವ ಪ್ರಯತ್ನವನ್ನ ಸ್ವಾಮೀಜಿಯವರು ಮಾಡಬೇಕೆಂದು ನಾಗರಾಜ ಛಬ್ಬಿ ಕೋರಿದರು.

  • ನವಲಗುಂದಲ್ಲಿ ನರಗೋಗ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ..!

    `ನವಲಗುಂದ: ಗುರುವಂದನಾ ಸ್ವಾಗತ ಸಮಿತಿ ಮಾಡೆಲ್ ಹೈಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ನರರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನ ನವಲಗುಂದ ಪಟ್ಟಣದ ದೇಸಾಯಿ ಪೇಟೆಯ ಉರ್ದು ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.

    ಪುರಸಭೆ ಸದಸ್ಯ ಅಪ್ಪಣ್ಣ ಹಳ್ಳದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಯನಗೌಡ ಪಾಟೀಲ, ಮಂಜುನಾಥ ಸುಬೇದಾರ, ನಾಗಪ್ಪ ಸಂಗಟಿ, ಖ್ಯಾತ ನರ ತಜ್ಞರು ವೈದ್ಯ ಡಾ.ವಿಜಯಮಹಾಂತೇಶ ಕೆ.ಪಿ ಆಗಮಿಸಿದ್ದರು.

    ಪಟ್ಟಣದ ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜನೆ ಮಾಡಿದ್ದ ಶಿಬಿರಕ್ಕೆ ನೂರಾರು ಜನರು ಆಗಮಿಸಿ, ಪ್ರಯೋಜನ ಪಡೆದುಕೊಂಡರು. ನರರೋಗಗಳು ಬರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಡಾ.ವಿಜಯಮಹಾಂತೇಶ ಸುಬೇದಾರ ಸಮಗ್ರವಾಗಿ ಮಾಹಿತಿ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಅಪ್ಪಣ್ಣ ಹಳ್ಳದ ಮಾತನಾಡಿ, ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಲು ಬಡವರಿಗೆ ಆಗುವುದಿಲ್ಲ. ಹೀಗಾಗಿ ಈ ಶಿಬಿರವನ್ನ ಆಯೋಜನೆ ಮಾಡಲಾಗಿದ್ದು, ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

    ಗುರುವಂದನ ಸ್ವಾಗತ ಸಮಿತಿಯ ಮಾಡೆಲ್ ಹೈಸ್ಕೂಲಿನ ಸದಸ್ಯರು ಉಪಸ್ಥಿತರಿದ್ದರು.

  • ಹುಬ್ಬಳ್ಳಿ ಖೋಟಾ ನೋಟು ಪ್ರಕರಣ: ಆರೋಪಿಗಳನ್ನ ಕಸ್ಟಡಿಗೆ- ಪೊಲೀಸ್ ಕಮೀಷನರ್ ಲಾಬುರಾಮ್…

    ಹುಬ್ಬಳ್ಳಿ: ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಆರೋಪಿಗಳನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಮತ್ತಷ್ಟು ಮಾಹಿತಿಯನ್ನ ಸಂಗ್ರಹಿಸಿ, ತನಿಖೆಯನ್ನ ಮುಂದುವರೆಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹೇಳಿದರು.

    ಕಮೀಷನರ್ ಲಾಬುರಾಮ್ ಅವರ ಹೇಳಿಕೆ..

    ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ನಾಲ್ವರನ್ನ ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಖೋಟಾ ನೋಟನ್ನ ವಶಕ್ಕೆ ಪಡೆದಿದ್ದಾರೆ. ಇವರು ಹುಬ್ಬಳ್ಳಿಯಲ್ಲಿ ನಾಲ್ಕೈದು ತಿಂಗಳಿಂದ ಈ ದಂಧೆಯನ್ನ ನಡೆಸುತ್ತಿದ್ದರೆಂದು ಗೊತ್ತಾಗಿದ್ದು, ಹಾಗಾಗಿ, ಆರೋಪಿಯನ್ನ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗುವುದೆಂದು ಹೇಳಿದರು.

    ಈಗಾಗಲೇ ಪ್ರಕರಣದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಹಿಂಭಾಗದ ಗುರುಶಿದ್ದೇಶ್ವರನಗರದ  ಗೋಪಿನಾಥ ಹಬೀಬ, ಟಿಪ್ಪುನಗರ ಮಾಳೇಕಾರ ಪ್ಲಾಟನ ಶ್ರೀನಿವಾಸ ವಾಸಪ್ಪ ತಟ್ಟಿ, ದೇವರಗುಡಿಹಾಳದ ಮೌಲಾಸಾಬ ಮಕ್ತುಮಸಾಬ ಗುಡಿಹಾಳ ಹಾಗೂ ಹಳೇಹುಬ್ಬಳ್ಳಿ ಸದರಸೋಫಾ ಕೋಳೇಕರ ಪ್ಲಾಟನ ಸಲೀಂ ಇಮಾಮಸಾಬ ಮುಲ್ಲಾ ಬಂಧನ ಮಾಡಲಾಗಿದೆ ಎಂದರು. ಬಂಧಿತ ಗೋಪಿನಾಥ ಹಬೀಬ ನೋಟನ್ನ ಪ್ರಿಂಟ್ ಮಾಡಿ ಇನ್ನುಳಿದ ಆರೋಪಿಗಳಿಗೆ ಮಾರಾಟ ಮಾಡಲು ಹಚ್ಚುತ್ತಿದ್ದ. ಇದೇಲ್ಲವನ್ನೂ ಗಮನಿಸಿಯೇ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದೆಂದು ಪೊಲೀಸ್ ಕಮೀಷನರ್ ಲಾಬುರಾಮ್ ಅವರು ತಿಳಿಸಿದರು.

  • ಧಾರವಾಡದಲ್ಲಿ ಸರಣಿಗಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ಹಣ ಕಳ್ಳತನ..!

    ಧಾರವಾಡ: ನಗರದ ಕೋಳಿಕೇರಿ ಪ್ರದೇಶದಲ್ಲಿ ಮೂರು ಮನೆಗಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಹಣವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

    ಶಬಾ ಆಕಾಶ ಕಲಾಲ ಎಂಬುವವರ ಮನೆಯಲ್ಲಿ 3 ತೊಲೆ ಬಂಗಾರ, 50 ಸಾವಿರ ರೂಪಾಯಿ ಹಾಗೂ ಬೆಳ್ಳಿಯ ಆರತಿಗಳನ್ನ ಕದ್ದು ಪರಾರಿಯಾಗಿದ್ದಾರೆ. ಇನ್ನುಳಿದ ಎರಡು ಮನೆಗಳಲ್ಲೂ ಕಳ್ಳತನ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಅಲ್ಮೇರಾವನ್ನ ಒಡೆದು, ವಸ್ತುಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

    ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಧಾರವಾಡಕ್ಕೆ ಆಗಮಿಸಿದ್ದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಘಟನೆಯ ಬಗ್ಗೆ ಪೊಲೀಸರಿಗೆ ಖಡಕ್ಕಾಗಿ ವಾರ್ನಿಂಗ್ ಮಾಡಿದ್ದಾರೆ.

    ಸರಣಿ ಕಳ್ಳತನದಿಂದ ಪ್ರದೇಶದ ಜನರು ಆತಂಕದಲ್ಲಿ ಮುಳುಗಿದ್ದು, ಶಹರ ಠಾಣೆಯ ಪೊಲೀಸರು ಮಾಹಿತಿಯನ್ನ ಕಲೆ ಹಾಕುವ ಯತ್ನ ಮಾಡುತ್ತಿದ್ದಾರೆ. ಸ್ಥಳೀಯ ಪ್ರದೇಶದಿಂದ ಕಳ್ಳತನ ಮಾಡಿ ಹೋಗಿರಬಹುದಾದ ಸ್ಥಳದಲ್ಲಿ ಸಿಸಿಟಿವಿ ಇವೇಯಾ ಎಂಬುದರ ಬಗ್ಗೆಯೂ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

  • ಹುಬ್ಬಳ್ಳಿ ಯುವತಿ ಮನೆಗೆ ಬಂದಿಲ್ಲಾ.. ನೀವೂ ಎಲ್ಲಿಯಾದರೂ ನೋಡಿದ್ದೀರಾ..?

    ಹುಬ್ಬಳ್ಳಿ: ಯುವತಿಯೊಬ್ಬಳು ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಅತ್ತ  ಕಾಲೇಜಿಗೂ ಹೋಗದೆ, ಇತ್ತ ಮನೆಗೂ ಬಾರದ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

    ಕಳೆದ ಗುರುವಾರ ಭಾಗ್ಯಲಕ್ಷ್ಮಿ ನೀಲಪ್ಪನವರ ಎಂಬ 20 ವಯಸ್ಸಿನ ಯುವತಿ ಕೃಷಿ ಕಾರ್ಮಿಕ ನಗರದಲ್ಲಿರುವ ತನ್ನ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಕಾಲೇಜಿಗೂ ಹೋಗದೇ, ಗಬ್ಬೂರ ಬೈ ಪಾಸ್ ಬಳಿಯಲ್ಲಿನ ಗಾಳಿ ದುರ್ಗಮ್ಮನ ಗುಡಿಯ ಕಡೆಗೆ ತೆರಳಿ ಅಲ್ಲಿಂದ ಬೇರೆಡೆ ಹೋಗಿದ್ದಾಳೆ ಎಂದು ಕಾಣೆಯಾದ ಯುವತಿಯ ತಂದೆ ಭೀಮರಾವ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

    ದೂರನ್ನು ದಾಖಲು ಮಾಡಿಕೊಂಡಿರುವ ಬೆಂಡಿಗೇರಿ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಯುವತಿಯನ್ನ ಎಲ್ಲಿಯಾದರೂ ಕಂಡರೇ, ಸಮೀಪದ ಪೊಲೀಸ್ ಠಾಣೆಗೆ ಅಥವಾ ಬೆಂಡಿಗೇರಿ ಪೊಲೀಸ್ ಠಾಣೆಯನ್ನ ಸಂಪರ್ಕಿಸಿ, ಮನೆಯವರ ನೆಮ್ಮದಿಗೆ ಕಾರಣವಾಗಬೇಕೆಂದು ಕೋರಿದ್ದಾರೆ.