Category: ನಮ್ಮೂರು

  • ಧಾರವಾಡ ಜಿಪಂ ಇನ್ನೂ ಮುಂದೆ 27 ಸೀಟು, ಚುನಾವಣೆ ಆಯೋಗದ ಆದೇಶ..!

    ಬೆಂಗಳೂರು: ಜನಸಂಖ್ಯೆಯ ಅನುಗುಣವಾಗಿ ಜಿಲ್ಲಾವಾರು ಕ್ಷೇತ್ರಗಳ ವಿಗಂಡಣೆಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಹೆಚ್ಚಾಗಲಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಹೆಚ್ಚಾಗಲಿವೆ.

    ಗ್ರಾಮೀಣ ಪ್ರದೇಶದ ಜನಸಂಖ್ಯೆ ವಿವರವನ್ನ ಪಡೆದಿರುವ ರಾಜ್ಯ ಚುನಾವಣಾ ಆಯೋಜ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನ ಕಳಿಸಿದ್ದು, ಇದರಲ್ಲಿ ಕ್ಷೇತ್ರವಾರು ವಿಗಂಡನೆ ಮಾಡಿ, ವಿವರವಾದ ಮಾಹಿತಿಯನ್ನ ರವಾನೆ ಮಾಡುವಂತೆ ಸೂಚನೆ ನೀಡಿದ್ದಾರೆ.

    ಧಾರವಾಡ ಜಿಲ್ಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಒಟ್ಟು 27 ಕ್ಷೇತ್ರಗಳು ಆಗಲಿವೆ. ಧಾರವಾಡ-07, ಹುಬ್ಬಳ್ಳಿ-05, ನವಲಗುಂದ-5, ಕಲಘಟಗಿ-04, ಕುಂದಗೋಳ-05, ಅಳ್ನಾವರ-01 ಹಾಗೂ ಅಣ್ಣಿಗೇರಿ-02 ಜಿಲ್ಲಾ ಪಂಚಾಯತಿ ಕ್ಷೇತ್ರಗಳಾಗಲಿವೆ.

    ಇದಕ್ಕೆ ಸಂಬಂಧಿಸಿದಂತೆ ನಕ್ಷೆಯನ್ನ ರೂಪಿಸಿ ಕೊಡುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ತಾಲೂಕು ಪಂಚಾಯತಿ ಕ್ಷೇತ್ರಗಳಲ್ಲಿಯೂ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು 87 ತಾಲೂಕು ಪಂಚಾಯತಿ ಕ್ಷೇತ್ರಗಳಾಗಲಿವೆ.

  • ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷಕ್ಕಾಗಿ ದುಡಿಯುವೆ: ಇಮ್ರಾನ ರಾಣೆಬೆನ್ನೂರು

    ಧಾರವಾಡ: ಜಿಲ್ಲೆಯ ಕಲಘಟಗಿ ಮತಕ್ಷೇತ್ರದ ಅಳ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ ರಾಣೆಬೆನ್ನೂರು ಕರ್ನಾಟಕವಾಯ್ಸ್.ಕಾಂ ಗೆ ಕಳಿಸಿರುವ ವೀಡಿಯೋದಲ್ಲಿ, ನಾನು ಯಾವುದೇ ವ್ಯಕ್ತಿಯ ಪೂಜೆ ಮಾಡೋದಿಲ್ಲ. ಪಕ್ಷದ ಸಂಘಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ, ಕೆಲವರು ಇವರಿಂದ ತಮ್ಮ ಹೆಸರು ಹೇಳಿಸಿಕೊಳ್ಳುವ ಪ್ರಯತ್ನಕ್ಕೆ ಇಳಿದಿರುವುದನ್ನ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.

    ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

    ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಯಾರನ್ನೂ ಪೂಜೆ ಮಾಡುವ ಪ್ರಮೇಯ ಬರುವುದಿಲ್ಲ. ಪಕ್ಷದ ಪೂಜೆ ಮಾಡುತ್ತೇನೆ ಎನ್ನುವ ಮೂಲಕ, ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ದುಡಿಯುವುದಾಗಿ ಇಮ್ರಾನ ರಾಣೆಬೆನ್ನೂರು ಹೇಳಿದ್ದಾರೆ.

  • ಹುಬ್ಬಳ್ಳಿ ಇನ್ಸಪೆಕ್ಟರುಗಳು ವರ್ಗಾವಣೆ: ಇಲ್ಲಿದ್ದವರು ಇಲ್ಲೇ ಸ್ಟೇಶನ್ ಮಾತ್ರ ಅದಲು-ಬದಲು…!

    ಬೆಂಗಳೂರು: ರಾಜ್ಯ ಸರಕಾರ 86 ಪೊಲೀಸ್ ಇನ್ಸಪೆಕ್ಟರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿಯ ಮೂರು ಠಾಣೆಗಳ ಇನ್ಸಪೆಕ್ಟರುಗಳ ವರ್ಗಾವಣೆಯಾಗಿದ್ದು, ಇಲ್ಲಿದ್ದವರೇ ಬೇರೆ ಬೇರೆ ಠಾಣೆಗಳಿಗೆ ಮರಳಿದ್ದಾರೆ.

    ಹುಬ್ಬಳ್ಳಿ ವಿದ್ಯಾನಗರ ಠಾಣೆಯ ಇನ್ಸಪೆಕ್ಟರ್ ಆನಂದ ಒನಕುದ್ರೆ ಅವರು ಹುಬ್ಬಳ್ಳಿ ಶಹರ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಘಂಟಿಕೇರಿ ಪೊಲೀಸ್ ಠಾಣೆಗಿದ್ದ ಮಹಾಂತೇಶ ಹೊಳಿಯವರು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ.

    ರಾಜ್ಯ ಗುಪ್ತವಾರ್ತೆಯಲ್ಲಿದ್ದ ಜ್ಯೋತಿಬಾ ನಿಕ್ಕಂ ಅವರು ಘಂಟಿಕೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇದರ ಜೊತೆಗೆ 20 ಡಿವೈಎಸ್ಪಿಗಳ ವರ್ಗಾವಣೆಯನ್ನು ಮಾಡಿ ಆದೇಶ ನೀಡಲಾಗಿದೆ.

    ಇನ್ನುಳಿದಂತೆ ಎಲ್ಲರ ಲಿಸ್ಟ್ ಇಲ್ಲಿದೆ ನೋಡಿ..

    ಇನ್ಸಪೆಕ್ಟರ್ ಲಿಸ್ಟ್..

    PI Trf 10.02.2021

    ಡಿವೈಎಸ್ಪಿ ವರ್ಗಾವಣೆ ಲಿಸ್ಟ್..

    DySP TRF 10.02.2021

  • ಕಿಮ್ಸನ್ ಡಾ.ಪೂಜಾ ಭಟ್ ರ ಚಿಕಿತ್ಸೆ ಫಲಿಸಲಿಲ್ಲ: ಕಣ್ಣೀರಾದ ಕಿಮ್ಸ್ ಹೊರಾಂಗಣ..!

    ಹುಬ್ಬಳ್ಳಿ: ಗೆಳೆಯರೊಂದಿಗೆ ಕಾರವಾರ ಮತ್ತು ಗೋವಾಗೆ ಪ್ರವಾಸಕ್ಕೆ ಹೊರಟಿದ್ದ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಿಮ್ಸನ ವೈಧ್ಯ ವಿದ್ಯಾರ್ಥಿನಿಯೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

    ಪ್ರವಾಸಕ್ಕೆ ಹೊರಟಿದ್ದ ಕಾರೊಂದು ವಿಶ್ವೇಶ್ವರ ಭಟ್ ಎನ್ನುವವರಿಗೆ ಸೇರಿದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಡಾ.ಪೂಜಾ ಭಟ್ ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾದರು.

    ವೈಧ್ಯ ವಿದ್ಯಾರ್ಥಿನಿಯ ಸಾವಾದ ಹಿನ್ನೆಲೆಯಲ್ಲಿ ಪಾರ್ಥಿವ್ ಶರೀರವನ್ನ ಹುಬ್ಬಳ್ಳಿ ಕಿಮ್ಸನ ಮುಂಭಾಗದಲ್ಲಿಟ್ಟು ಅಂತಿಮ ನಮನ ಸಲ್ಲಿಸಲಾಯಿತು. ಎಲ್ಲರೊಂದಿಗೆ ಲವಲವಿಕೆಯಿಂದಿದ್ದ ಡಾ.ಪೂಜಾ, ಇನ್ನಿಲ್ಲವೆನ್ನುವುದನ್ನ ಅರಗಿಸಿಕೊಳ್ಳಲಾಗದ ಹಲವರು, ಅಲ್ಲಿಯೇ ಕಣ್ಣೀರಾದರು.

    ಮಹಾವಿದ್ಯಾಲಯದ ನೂರಾರೂ ವಿದ್ಯಾರ್ಥಿಗಳು, ಉಪನ್ಯಾಸಕರು ಎಲ್ಲರೂ ಸೇರಿ ಅಂತಿಮ ನಮನ ಸಲ್ಲಿಸಿದರು. ಡಾ.ಪೂಜಾ ಭಟ್ ಸಾವು, ಕಿಮ್ಸ್ ನಲ್ಲಿ ನೀರವಮೌನವನ್ನ ಮೂಡಿಸಿತ್ತು.

  • ಹುಬ್ಬಳ್ಳಿಯಲ್ಲಿ ಬೃಹತ್ ಅಕ್ಕಿ ರೇಡ್…!

    ಹುಬ್ಬಳ್ಳಿ: ಪಡಿತರ ಅಕ್ಕಿಯನ್ನ ಸಾಗಾಟ ಮಾಡುತ್ತಿದ್ದ ಬೃಹತ್ ಲಾರಿಯೊಂದನ್ನ ಪೊಲೀಸರು ದಾಳಿ ಮಾಡಿ, ಪತ್ತೆ ಹಚ್ಚಿದ್ದು ದೊಡ್ಡದೊಂದು ಜಾಲದ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.

    ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರತನಕುಮಾರ ಜಿರಗ್ಯಾಳ ಅವರು ಹಾವೇರಿಯಿಂದ ಬರುತ್ತಿದ್ದ ಪಡಿತರ ಅಕ್ಕಿಯನ್ನ ಪತ್ತೆ ಹಚ್ಚಿರುವ ಪೊಲೀಸರು, ಲಾರಿಯು ಸಚಿನ್ ಎನ್ನುವವರಿಗೆ ಸೇರಿದ ಲಾರಿಯಂದು ಹೇಳಲಾಗಿದೆ.

    ಈಗಾಗಲೇ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲ ಇರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಸಂಬಂಧಿಸಿದ ದಾಖಲಾತಿಗಳನ್ನ ಪರಿಶೀಲನೆ ಮಾಡಲಾಗುತ್ತಿದೆ.

    ಲಾರಿಯೊಂದರಲ್ಲಿ ಸುಮಾರು 400 ಕ್ವಿಂಟಾಲ್ ಅಕ್ಕಿಯಿದೆ ಎನ್ನಲಾಗಿದೆ. ಆದರೆ, ಕೆಲವು ದಾಖಲಾತಿಗಳು ಅಕ್ಕಿಗೆ ಸಂಬಂಧಪಟ್ಟಂತೆ ಇವೆಯಂದು ಹೇಳಲಾಗಿದೆ. ಆದರೆ, ಅವುಗಳು ಕೆಲವು ಹಳೆಯ ದಾಖಲಾತಿಗಳು ಇವೆ ಎಂದು ಹೇಳಲಾಗಿದ್ದು, ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಪಡಿತರ ಅಕ್ಕಿ ಕಳ್ಳನನ್ನ ಮೀರಿಸುವ ದಂಧೆಯಾತನೇ ಈ ಲಾರಿಯ ಮಾಲೀಕ ಇರಬಹುದೆಂದು ಶಂಕಿಸಲಾಗಿದೆ.

  • ಪಿಸ್ತೂಲ್ ತೋರಿಸಿ ಹಣ ದೋಚಿದ್ದ ಕಲಘಟಗಿಯವನ ಬಂಧನ..!

    ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ಮಲ್ಲಿಕಾ ಹೊಟೇಲ್ ಬಳಿ‌ ಬೈಕ್ ನಲ್ಲಿ ಬರುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಮೂವರು ಆರೋಪಿಗಳನ್ನ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

    ಕಲಘಟಗಿಯ ಮೌಲಾಲಿ ತಂದೆ ಮಹ್ಮದ ಸಾಬ ( 34 ), ಸಾಗರದ ಮಹ್ಮದ ಆಸೀಪ್  ಮಹ್ಮದ ಇಲಿಯಾಸ್ (37) ಮತ್ತು ಅತಾವುಲ್ಲಾ  ಇಸ್ಮಾಯಿಲ್‍ಸಾಬ ಮಕಾಂದರ (36) ಬಂಧಿತ ಆರೋಪಿಗಳಾಗಿದ್ದಾರೆ.

    ಫೆಬ್ರುವರಿ  08 ರಂದು ರಾತ್ರಿ 10-45ರ  ಸುಮಾರಿಗೆ  ಹಾವೇರಿಯ ಕೃಷ್ಣಾಜಿ ಎಂಬುವವರು  ತಮ್ಮ‌ಬೈಕ್ನಲ್ಲಿ ಆಕಾಶ ಹಾಗೂ ತಮ್ಮ ಹೇಮಂತ ಇವರೊಂದಿಗೆ ತೆರಳುತ್ತಿದ್ದಾಗ ಅಡ್ಡಗಟ್ಟಿ   ಪಿಸ್ತೂಲ್ ಮತ್ತು ರಾಡ್ ಹಿಡಿದುಕೊಂಡು ಪಿರ್ಯಾದಿಯವರಿಗೆ ಹೊಡೆಯಲು ಮೈಮೇಲೆ ಏರಿ ಬಂದು ಅವರಿಗೆ ಹಲ್ಲೆ ಮಾಡಿದ್ದರಲ್ಕದೇ,  820 ರೂಪಾಯಿ ನಗದು,  ಕೊರಳಲ್ಲಿದ್ದ ಬೆಳ್ಳಿಯ ಚೈನ್‍ನ್ನು ಹಾಗೂ  ಹಿರೋ ಹೊಂಡಾ ಬೈಕನ್ನ ದರೋಡೆ ಮಾಡಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು.

    ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ಆರೋಪಿಯನ್ನ ಬಂಧಿಸಲು ಯಶಸ್ವಿಯಾಗಿದ್ದಾರೆ. ಪ್ರಕರಣವನ್ನ ಎಸ್ಪಿ ಶಿವಪ್ರಕಾಶ ದೇವರಾಜು  ಅಡಿಷನಲ್ ಎಸ್ಪಿ ಬದರಿನಾಥ ಎಸ್, ಶಿರಸಿ ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ‌ ಸಿಪಿಐ  ಸುರೇಶ ಯಳ್ಳೂರ, ಪಿಎಸ್ಐ  ಮಂಜುನಾಥ ಗೌಡರ ,  ಭೀಮಸಿಂಗ್ ಜಿ ಪಿ,ಎಸ್,ಐ, ಯಲ್ಲಾಪುರ ಪೊಲೀಸ್ ಠಾಣೆ ಹಾಗೂ ಎ.ಎಸ್.ಐ ಮಂಜುನಾಥ ಮನ್ನಂಗಿ ಮತ್ತು ಸಿಬ್ಬಂದಿಯವರಾದ ಸಿ.ಎಚ್ ಸಿ  ಮಹ್ಮದ ಶಫಿ, ಬಸವರಾಜ ಹಗರಿ, ಗಜಾನನ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಹಾಗೂ ಸಿಪಿಸಿ-ಮುತ್ತಪ್ಪ ಬೋವಿ, ಚಿದಾನಂದ, ಮ.ಪಿ,ಸಿ ಶೋಭಾ ನಾಯ್ಕ ರವರು ಆರೋಪಿತರನ್ನು ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

  • ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿ ರಸ್ತೆಗಿಳಿದ ಡಿಸಿಪಿ ಬಸರಗಿ…!

    ಹುಬ್ಬಳ್ಳಿ: ಅವಳಿನಗರದಲ್ಲಿ ರಸ್ತೆ ಸಂಚಾರ ನಿಯಮಗಳನ್ನ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಡಿಸಿಪಿ ಬಸರಗಿ ಅವರು ಇಂದು ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಯ ರಸ್ತೆಗಿಳಿದಿದ್ದರು.

    ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹುಬ್ಬಳ್ಳಿ ಪೂರ್ವ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಆಯೋಜನೆಯೊಂಡ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಬೈಕ್ ಜಾಥಾ ನಡೆಸಿದರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದನ್ನ ಮಾಡಿದರು. ಕಡ್ಡಾಯವಾಗಿ ಹೆಲ್ಮೇಟ್ ಹಾಕಿಕೊಂಡು ಸಂಚಾರ ಮಾಡುವುದರಿಂದ ಜೀವ ಉಳಿಸಿಕೊಳ್ಳಬಹುದು. ಸ್ವಲ್ಪ ಯಾಮಾರಿದರೂ, ಜೀವಕ್ಕೆ ಕುತ್ತು ಬರುತ್ತದೆ ಎಂಬುದನ್ನ ತಿಳಿಸುವ ಪ್ರಯತ್ನವನ್ನ ಮಾಡುತ್ತಿದ್ದರು.

    ಈ ಸಮಯದಲ್ಲಿ ಮಾತನಾಡಿದ ಡಿಸಿಪಿ ಆರ್.ಬಿ.ಬಸರಗಿ ಅವರು, ಜನತೆ ಸಂಚಾರ ನಿಯಮಗಳನ್ನ ಪಾಲನೆ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.

    ಸಂಚಾರಿ ಠಾಣೆಯ ಇನ್ಸಪೆಕ್ಟರುಗಳಾದ ಶ್ರೀಕಾಂತ ತೋಟಗಿ, ಕಾಡದೇವರಮಠ ಹಾಗೂ ಮಹಾಂತೇಶ ಹೊಸಪೇಟೆ ಸೇರಿದಂತೆ ಸಿಬ್ಬಂದಿಗಳಾದ ಆರ್.ಬಿ. ಚಲವಾದಿ, ಎಂ.ಜಿ. ಬೆಂಗೇರಿ, ಜೆ.ಎಸ್. ಚೆನ್ನಪ್ಪಗೌಡ್ರ, ರಾಜು ಕೊರವರ, ಶಾಂತೇಶ ಶಿರಸಂಗಿ, ಶಂಭು ರೆಡ್ಡಿ, ಮಂಜುನಾಥ ಕುರಿಯವರ, ಎಸ್.ಎಚ್. ಕೊಣ್ಣೂರ, ಬಡಿಗೇರ, ಜಗದೀಶ ಮ್ಯಾಗಿನಮಣಿ, ಬಿ ಎಂ ಡಾಸ್ಕೊನ, ಸಿ ಕೆ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಹುಬ್ಬಳ್ಳಿ ಕಿಮ್ಸನಿಂದ ಯುವಕನ ಶವ ನಾಪತ್ತೆ…!

    ಧಾರವಾಡ: ಹೊಸದಾಗಿ ಬೈಕ್ ತೆಗೆದುಕೊಂಡು ಖುಷಿಯಲ್ಲಿ ಬೈಕ್ ಚಲಾಯಿಸುತ್ತಿದ್ದ ಸಮಯದಲ್ಲಿ ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡು, ಹುಬ್ಬಳ್ಳಿಯ ಕಿಮ್ಸಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಶವವನ್ನ ಯಾರೂ ತೆಗೆದುಕೊಂಡು ಹೋಗಿದ್ದಾರೆಂದು ಹುಡುಕಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

    ಮುಳಗುಂದ ಬಳಿಯ ಚಿಂಚಲಿ ವಡ್ಡರಗೇರಿ ಪ್ರದೇಶದ ವೀರೇಶ ಗಿಡ್ಡಪ್ಪ ಬಂಡಿವಡ್ಡರ ಎಂಬ ಯುವಕ ಮೊನ್ನೆ ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಇದೇ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, 25 ವಯಸ್ಸಿನ ಯುವಕ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಯುವಕನ ಶವವನ್ನ ಯಾರಿಗೂ ಗೊತ್ತಾಗದೇ ಹಾಗೇ ತೆಗೆದುಕೊಂಡು ಹೋಗಲಾಗಿದೆ.

    ಮೃತ ಯುವಕನ ಶವವನ್ನ ಕಿಮ್ಸನ ಶವಾಗಾರದಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುಳಗುಂದ ಪೊಲೀಸ್ ಠಾಣೆಗೆ ಮಾಹಿತಿಯನ್ನ ರವಾನೆ ಮಾಡಲಾಗಿದೆ. ಅಲ್ಲಿಯೂ ಕೂಡಾ ಗೊಂದಲ ಸೃಷ್ಠಿಯಾಗಿದೆ.

    ಗ್ರಾಮದ ಜನರನ್ನ ಕೇಳಿದರೇ, ಆ ಯುವಕನ ಶವಸಂಸ್ಕಾರ ನಡೆಯಿತು ಎನ್ನುತ್ತಿದ್ದಾರೆ. ಆದರೆ, ಮುಳಗುಂದ ಪಿಎಸ್ಐ ಮಾತ್ರ ನಾವೂ ಗದಗನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಶವವನ್ನ ತೆಗೆದುಕೊಂಡು ಹೋಗಿದ್ದು, ಯಾಕೆ, ಹುಬ್ಬಳ್ಳಿಯಲ್ಲಿ ಹುಡುಕಾಟ ನಡೆಸಿದ್ದು ಯಾಕೆ ಎಂಬುದರ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ. ಕಿಮ್ಸನಲ್ಲಿ ಏನಾದರೂ ನಡೆಯಬಹುದು ಎನ್ನುವುದಕ್ಕೆ ಶವ ನಾಪತ್ತೆಯಾಗಿರೋ ಪ್ರಕರಣವೂ ಸಾಕ್ಷಿಯಾಗಿದೆ.

  • ಸಂತೋಷ ಲಾಡ ಆಪ್ತರನ್ನ ಭೇಟಿಯಾದ ಅಳ್ನಾವರ ಬ್ಲಾಕ್ ಅಧ್ಯಕ್ಷ…!

    ಧಾರವಾಡ: ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲವು ಸಾಧಿಸಿರುವ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಅಳ್ನಾವರ ಬ್ಲಾಕ್ ನ ಯುವ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಚಿವ ಸಂತೋಷ ಲಾಡ ಅವರ ಆಪ್ತರನ್ನ ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.

    ಮಾಜಿ ಸಚಿವ ಸಂತೋಷ ಲಾಡ ಅವರ ಆಪ್ತರಾಗಿರುವ ಆನಂದ ಕಲಾಲ ಅವರ ಧಾರವಾಡದ ನಿವಾಸಕ್ಕೆ ಆಗಮಿಸಿದ್ದ ಇಮ್ರಾನ ರಾಣೆಬೆನ್ನೂರ, ಯುವ ಕಾಂಗ್ರೆಸ್ ಸಂಘಟನೆಯನ್ನ ಮತ್ತಷ್ಟು ಚುರುಕು ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು.

    ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಮತ್ತಷ್ಟು ಬೆಳೆಸುವ ಉದ್ದೇಶವನ್ನ ವ್ಯಕ್ತಪಡಿಸಿದ ಇಮ್ರಾನ್ ಅವರಿಗೆ, ಆನಂದ ಕಲಾಲ ಅವರು ಕೂಡಾ ಬೆಂಬಲ ನೀಡುವುದಾಗಿ ಹೇಳಿದರು.

    ಇದೇ ಸಮಯದಲ್ಲಿ ಮಾತನಾಡಿದ ಆನಂದ ಕಲಾಲ ಅವರು, ಮಾಜಿ ಸಚಿವ ಸಂತೋಷ ಲಾಡ ಅವರನ್ನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಕೂಡಿಕೊಂಡು ಮುಂದೆ ನಡೆಯೋಣ ಎಂದರು.

  • ಹೊರಟ್ಟಿ ಮಾಸ್ತರ್ ಎರಡನೇಯ ಬಾರಿ ಸಭಾಪತಿ..!

    ಬೆಂಗಳೂರು: ವಿಧಾನಪರಿಷತ್‍ನ ಸಭಾಪತಿ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಸವರಾಜ್ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಇಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಸವರಾಜ್ ಹೊರಟ್ಟಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರು.  ಅಂತಿಮ ಹಂತದಲ್ಲಿ  ನಜೀರ್ ಅಹ್ಮದ್ ಕಣದಿಂದ ಹಿಂದೆ ಸರಿದ ಹಿನ್ನೆಲೆ ಬಸವರಾಜ್ ಹೊರಟ್ಟಿ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ವಿಧಾನಪರಿಷತ್ ನೂತನ ಸಭಾಪತಿಯಾಗಿ ಆಯ್ಕೆಯಾದ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅಭಿನಂದಿಸಿದರು.

    ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ದೇಶಕ್ಕೆ ಮಾದರಿ ಮೇಲ್ಮನೆ ಎನಿಸಿದ ವಿಧಾನಪರಿಷತ್‍ನ ಸಭಾಪತಿಯಾಗಿ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಹಿರಿತನಕ್ಕೆ ಸಂದ ಗೌರವವಾಗಿದೆ. ಸತತ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿರುವ ಹೊರಟ್ಟಿ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದಾರೆ. ಅವರ ಅವಧಿಯಲ್ಲಿ ಬುದ್ದಿವಂತರ ಸದನವೆಂದೇ ಹೇಳಲಾಗುವ ಮೇಲ್ಮನೆಯಲ್ಲಿ ಅರ್ಥಪೂರ್ಣ ಚರ್ಚೆಯಾಗಿ ಸರ್ಕಾರಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ ಸಿಗುವಂತಾಗಲಿ. ಅವರ ಅವಧಿಯಲ್ಲಿ ಸದನದ ಘನತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.