Category: ನಮ್ಮೂರು

  • ಧಾರವಾಡಕ್ಕೆ ಎಂಟ್ರಿ ಕೊಟ್ಟಿದೆ ಕಳ್ಳರ ಗ್ಯಾಂಗ್… ಸಿಸಿಟಿವಿ ದೃಶ್ಯ ಬಹಿರಂಗ..!

    ಧಾರವಾಡ: ನಗರದಲ್ಲಿ ಖತರನಾಕ್ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದೆ ಎಂದು ಹೇಳಲಾಗಿದ್ದು, ಕಳ್ಳರ ತಿರುಗಾಡುವ ದೃಶ್ಯಗಳು ಬಹಿರಂಗಗೊಂಡಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ.

    ಧಾರವಾಡದ ಮದಿಹಾಳದ ಸಿದ್ದರಾಮಯ್ಯ ಕಾಲೋನಿಯಲ್ಲಿ ಕಳ್ಳರ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜನರು ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ.

    ನಾಲ್ವರು ಕಳ್ಳರು ವಿವಿಧ ರೀತಿಯ ಪೋಷಾಕು ಹಾಕಿಕೊಂಡಿದ್ದು, ಒಬ್ಬರ ಹಿಂದೆ ಮತ್ತೋಬ್ಬರು ಹೋಗುವ ದೃಶ್ಯಗಳು ದಾಖಲಾಗಿವೆ. ಅದರಲ್ಲಿದ್ದ ಓರ್ವ ಆ ಕಡೆ-ಈ ಕಡೆ ನೋಡುತ್ತ ತೆರಳುತ್ತಿರುವುದು ಕೂಡಾ ಸ್ಪಷ್ಟವಾಗಿ ದಾಖಲಾಗಿದೆ.

    ಈಗಾಗಲೇ ಶಹರ ಠಾಣೆ ಪೊಲೀಸರಿಗೆ ಮಾಹಿತಿಯನ್ನ ಸ್ಥಳೀಯರು ನೀಡಿದ್ದು, ಜನರು ಕೂಡಾ ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನದ ಹಿಂದೆ ಧಾರವಾಡದ ಕೋಳಿಕೇರಿ ಪ್ರದೇಶದಲ್ಲಿ ಮೂರು ಮನೆಗಳ ಕಳ್ಳತನ ನಡೆದಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.

  • ಹಾಲಿ ಸ್ವಾಮಿಗಳು ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ವಿಫಲ: ಹೀಗೆ ಹೇಳಿದ್ದು ಉನ್ನತಮಟ್ಟದಲ್ಲಿ….!

    ಹುಬ್ಬಳ್ಳಿ: ಮೂರುಸಾವಿರ ಮಠದ ಶ್ರೀ ಗುರುಶಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಅವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಉನ್ನತಮಟ್ಟದ ಸಭೆಯಲ್ಲಿದ್ದು ರಾಜೀನಾಮೆ ನೀಡಿರುವ ಮಾಜಿ ಸಂಸದ ವಿಜಯ ಸಂಕೇಶ್ವರ ಹೇಳಿದರು.

    ಮೂರುಸಾವಿರ ಮಠದ ಬಗ್ಗೆ ಎದ್ದಿರುವ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ ಸಂಕೇಶ್ವರ ಅವರು, ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ರಾತ್ರಿ ಹತ್ತೂವರೆಗೆ, ಶ್ರೀ ದಿಂಗಾಲೇಶ್ವರ ಸ್ವಾಮಿಗಳನ್ನ ಕರೆದುಕೊಂಡು ಬಂದಿದ್ದರು. ಅವರೇ, ಬಂದು ಇವರನ್ನ ಉತ್ತರಾಧಿಕಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರೆಂದು ಸಂಕೇಶ್ವರ ಹೇಳಿದರು.

    ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳ ನಿರ್ಧಾರಗಳನ್ನ ಬದಲಿಸಿದರು. ಇದಾದ ನಂತರ ಹೀಗೆಲ್ಲ ಆಗುತ್ತಿದೆ ಎಂದ ಸಂಕೇಶ್ವರ ಅವರು, ಸ್ವಾಮೀಜಿಯವರು ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದರು.

    ಹಲವು ಕಾರಣಗಳಿಂದ ನಾನು ಮಠಕ್ಕೆ ಹೋಗುವುದನ್ನೇ ಬಿಟ್ಟಿದ್ದೇನೆ. ಹಾಲಿ ಸ್ವಾಮೀಜಿಯವರು ಅಳ್ತಾಯಿರೋದು, ಸಾಲದ ದೊಡ್ಡ ಲಿಸ್ಟ್ ಕೊಡೋದು ಮಾಡ್ತಾಯಿದ್ರು. ಹೀಗಾಗಿಯೇ ನಾನು ಮಠಕ್ಕೆ ಕಾಲಿಟ್ಟಿಲ್ಲ. ಸ್ವಾಮೀಜಿಗಳ ಬಗ್ಗೆ ಪೂಜನೀಯ ಭಾವಯಿದೆ ಎಂದು ಹೇಳಿದರು.

  • ಹುಬ್ಬಳ್ಳಿಯಲ್ಲೇ ನಿರ್ಮಾಣವಾಗಲಿದೆ ಪ್ರತಿಷ್ಠಿತ ಏಮ್ಸ್ …!

    ನವದೆಹಲಿ: ದೇಶದ ಕೆಲವೆ ಭಾಗಗಳಲ್ಲಿರುವ ಪ್ರತಿಷ್ಠಿತ ಏಮ್ಸ್  ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೇ ನಿರ್ಮಾಣವಾಗಲಿದ್ದು,ಕೇಂದ್ರ ಸರಕಾರ ಮಹತ್ವದ ನಿರ್ಧಾರವನ್ನ ಪ್ರಕಟಿಸಿದ್ದು, ಕಲಬುರಗಿಗೆ ಕೊಡುವ ವಿಚಾರವನ್ನ ಅಲ್ಲಗೆಳೆದಿದೆ.

    ಆಲ್ ಇಂಡಿಯಾ ಇನ್ಸಿಟ್ಯುಟ್ ಆಪ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣ ಸಂಬಂಧವಾಗಿ ಕರ್ನಾಟಕ ಸರಕಾರ ಈಗಾಗಲೇ ಹುಬ್ಬಳ್ಳಿ-ಧಾರವಾಡದ ಹೆಸರನ್ನ ಕಳಿಸಿದ್ದು, ಅದಕ್ಕಾಗಿ ಕೇಂದ್ರ ಸರಕಾರದ ತಂಡ ಕೂಡಾ ಸ್ಥಳವನ್ನ ಪರಿಶೀಲನೆ ಮಾಡಿದ್ದಾರೆಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಅಶ್ವಿನಕುಮಾರ ಚೌಭೆ ಮಾಹಿತಿಯನ್ನ ನೀಡಿದ್ದಾರೆ.

    ಕರ್ನಾಟಕದ ಸಂಸದೆ ಶೋಭಾ ಕರಂದಾಜ್ಞೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕಲಬುರಗಿ ಇಎಸ್ಐ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಿ ಏಮ್ಸ್ ಮಾಡುವ ಕುರಿತು ಉತ್ತರ ನೀಡಿದ್ದು, ಸಧ್ಯ ಕಲಬುರಗಿಯಲ್ಲಿ ಅಂತಹ ಯಾವುದೇ ಯೋಜನೆಗಳು ಬರುವುದಿಲ್ಲವೆಂದು ಹೇಳಿದ್ದಾರೆ.

    ಈ ಉತ್ತರದಿಂದ ಸ್ಪಷ್ಟವಾದ ನಿಲುವು ಸಿಕ್ಕಿದ್ದು, ಹುಬ್ಬಳ್ಳಿಗೆ ಏಮ್ಸ್ ಬರುವುದು ನಿಶ್ಚಿತವಾದಂತೆ. ಯಾವಾಗ, ಜಾಗವನ್ನ ಎಲ್ಲಿ ನೋಡಿ ಹೋಗಿದ್ದಾರೆ ಎಂಬುದು ಇನ್ನೂ ತಿಳಿದು ಬರಬೇಕಿದೆ. ಆದರೆ, ಮೂಲದ ಪ್ರಕಾರ ಸುಮಾರು 200 ಎಕರೆ ಜಮೀನನ್ನ ಏಮ್ಸಗೆ ನೀಡಲು ಸರಕಾರ ಮುಂದೆ ಬಂದಿದ್ದು, ಹುಬ್ಬಳ್ಳಿಯ ಸಮೀಪದರಲ್ಲೇ ಈ ಜಾಗವಿದೆ ಎಂದು ಹೇಳಲಾಗಿದೆ.

  • ನಿಂತ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ನಾಲ್ವರಿಗೆ ಗಾಯ, ಓರ್ವನ ಸ್ಥಿತಿ ಚಿಂತಾಜನಕ..!

    ಹುಬ್ಬಳ್ಳಿ: ಕುಟುಂಬದೊಂದಿಗೆ ಬೈಕಿನಲ್ಲಿ ಹೊರಟಿದ್ದ ನಾಲ್ವರು ಡಿಸೇಲ್ ಖಾಲಿಯಾಗಿ ನಿಂತಿದ್ದ ಟ್ರ್ಯಾಕ್ಟರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ಸೇರಿ ನಾಲ್ವರಿಗೆ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಟೋಲ್ ಗೇಟ್ ಬಳಿ ನಡೆದಿದೆ.

    ಬದಾಮಿ ತಾಲೂಕಿನ ಮಮಟಗೇರಿಗೆ ಹೊರಟಿದ್ದ ಸುನೀಲ ಕಾಳೆ, ಮಂಜು ಕಾಳೆ, ಆಕಾಶ ಹಾಗೂ ಲಕ್ಷ್ಮೀ ಕಾಳೆ ಎನ್ನುವವರಿಗೆ ಗಾಯಗೊಂಡಿದ್ದು, ಬೈಕ್ ಸವಾರ ಸುನೀಲ ಕಾಳೆ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸಗೆ ರವಾನೆ ಮಾಡಿದ್ದಾರೆ.

    ಹುಬ್ಬಳ್ಳಿಯಿಂದ ನವಲಗುಂದ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್ ಚಾಲಕ ಅಶೋಕ ಗುಡಿಸಲಮನಿ ಎಂಬಾತ, ಡಿಸೇಲ್ ಖಾಲಿಯಾಗಿದ್ದರಿಂದ ಟೋಲ್ ಬಳಿ ನಿಲ್ಲಿಸಿದಾಗ ಘಟನೆ ನಡೆದಿದೆ.

    ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಬೈಕಿನಲ್ಲಿದ್ದ ಮೂರು ವರ್ಷದ ಆಕಾಶ ಅದೃಷ್ಟವಶಾತ್ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

  • ನಿವೃತ್ತ ಪೊಲೀಸ್ ಅಧಿಕಾರಿ ಮಗನ ಆಟಾಟೋಪ..!

    ವಿಜಯಪುರ: ತಮ್ಮೀಡಿ ಸೇವೆಯಲ್ಲಿ ಜನರ ರಕ್ಷಣೆಯ ಬಗ್ಗೆ ಕಾನೂನು ಪಾಠ ಮಾಡುತ್ತಲೇ ಬಂದವರ ಮಗನೋರ್ವ, ಕಾನೂನು ಉಲ್ಲಂಘನೆ, ಸುರಕ್ಷತೆಯನ್ನ ಮರೆತು ಆಟಾಟೋಪ ಮೆರೆದ ಪ್ರಕರಣ ಬೆಳಕಿಗೆ ಬಂದಿದೆ.

    ಗುಮ್ಮಟನಗರಿ ವಿಜಯಪುರದಲ್ಲಿ ಯುವಕರು ಡೆಡ್ಲಿ ಡ್ರೈವಿಂಗ್ ಮಾಡಿದ್ದಾರೆ. ಕಾರ ಸ್ಪೀಡಾಗಿ ಹೋಗುವಾಗ ಡ್ರೈವರ್ ಸೀಟ್ ಅದಲು ಬದಲು ಮಾಡಿ ಹುಚ್ಚು ಸಾಹಸಕ್ಕೀಳಿದಿರುವುದನ್ನ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಜಯಪುರ ಯುವಕರ ಹುಚ್ಚಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕಾರಲ್ಲಿ ಪ್ರವಾಸ ಹೊರಟ ವೇಳೆ ಇಂತಹ ಕೃತ್ಯ ಮಾಡಿಕೊಂಡಿದ್ದಾರೆ. ಇದೇಲ್ಲವನ್ನೂ ಫೇಸ್ಬುಕ್ ನಲ್ಲಿ ಅಮನ ರಾಠೋಡ ಎಂಬಾತ ಅಪ್ಲೋಡ್ ಮಾಡಿಕೊಂಡಿದ್ದಾನೆ.

    ವಿಜಯಪುರ ನಗರದ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ್ ಎಂಬುವವರೇ ಸೀಟ್ ಬದಲಾವಣೆ ಮಾಡಿ, ಕಾರು ಚಲಾಯಿಸಿದ್ದು, ಇದರಲ್ಲಿ ವಿನಯ ಹುಲಸಗುಂದ ನಿವೃತ್ತ ಪೊಲೀಸ್ ಅಧಿಕಾರಿಯವರ ಮಗನಾಗಿದ್ದಾರೆ.

  • ಕಲಘಟಗಿ ಡಾಬಾದಲ್ಲಿ ನೂತನ ಗ್ರಾಪಂ ಸದಸ್ಯರಿಗೆ ಹಿಗ್ಗಾಮುಗ್ಗಾ ಥಳಿತ..!

    ಕಾರವಾರ: ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನ ಹಿಗ್ಗಾ ಮುಗ್ಗಾ ಥಳಿಸಿ, ಗಟಾರಿನಲ್ಲಿ ಹಾಕಿ ಹೋದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಡಾಬಾದಲ್ಲಿ ನಡೆದಿದೆ.

    ಯಲ್ಲಾಪುರ ತಾಲೂಕಿನ ಕಿರವತ್ತಿ ಹಾಗೂ ಮುದ್ಮೂರ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂಬಂಧ ಪ್ರವಾಸಕ್ಕೆ ಹೋದಾಗ ಕಲಘಟಗಿಯ ಡಾಬಾವೊಂದರಲ್ಲಿ ಸದಸ್ಯರು ಹೊಡದಾಡಿಕೊಂಡಿದ್ದಾರೆ. ಹೊಡೆದಾಟದ ನಂತರ ಸ್ಥಳದಿಂದ ಪರಾರಿಯಾದ ಕೆಲ ಸದಸ್ಯರ ಗುಂಪು. 5ಕ್ಕೂ ಹೆಚ್ಚು ಸದಸ್ಯರಿಗೆ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದಲೇ ಗಲಾಟೆಯಾಗಿದ್ದು, ಮೂಲ ಬಿಜೆಪಿಗರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ವಿಚಾರಕ್ಕಾಗಿ ಗಲಾಟೆ ನಡೆದಿದ್ದು, ಹೊಡೆದಾಟದ ನಂತರ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸದೇ ಮರಳಿದ್ದು, ಘಟನೆಯ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.

  • ಕೋವಿಡ್ ಲಸಿಕೆ ಹಾಕಿಸಿಕೊಂಡ ಪೊಲೀಸ್ ಕಮೀಷನರ್ ಲಾಬುರಾಮ್..!

    ಹುಬ್ಬಳ್ಳಿ: ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಇಂದು ಕೋವಿಡ್ ಲಸಿಕೆಯನ್ನ ಹಾಕಿಸಿಕೊಂಡರು.

    ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನ ಲಾಬುರಾಮ್ ಅವರು ಹಾಕಿಸಿಕೊಂಡರು. ಈ ಸಮಯದಲ್ಲಿ ಧಾರವಾಡ ಎಸಿಪಿ ಜೆ.ಅನುಷಾ ಉಪಸ್ಥಿತರಿದ್ದರು.

    ಕೋವಿಡ್ ಲಸಿಕೆಯನ್ನ ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಮುಖ ವೈಧ್ಯರು ಹಾಗೂ ಸಿಬ್ಬಂದಿಗಳು ಹಾಕಿಸಿಕೊಂಡಿದ್ದು, ಮೊದಲ ಬಾರಿಗೆ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಇದನ್ನ ಲಸಿಕೆಯನ್ನ ಹಾಕಿಸಿಕೊಂಡರು.

  • ಪೊಲೀಸ್ ಇಲಾಖೆಯಲ್ಲಿದ್ದರೂ ಸಾಹಿತಿಯಾದ “ಹಂಶ ಕವಿ”….!

    ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಬೀದರ್ ನ ಹನುಮಂತಪ್ಪ ವಲ್ಲೇಪುರೆ (ಹಂಶ ಕವಿ) ರಚಿತ ಕೃತಿಯನ್ನ ಮಾಜಿ ಸಂಸದ ಹಾಗೂ ವಿಆರ್ ಆಲ್ ಸಮೂಹ ಸಂಸ್ಥೆಗಳ ಚೇರಮನ್ ರಾದ ವಿಜಯ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು.

    ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಹನುಮಂತಪ್ಪ ವಲ್ಲೇಪುರೆಯವರ  ಶ್ರೀದತ್ತ ಭಾಗವತ ಎಂಬ ಕೃತಿಯನ್ನ ಬಿಡುಗಡೆ ಮಾಡಲಾಯಿತು. ಹನುಮಂತಪ್ಪ ವಲ್ಲೇಪುರೆ ಅವರು ರಚಿಸಿರುವ 108 ನೇ ಕೃತಿ ಶ್ರೀದತ್ತ ಭಾಗವತವಾಗಿದ್ದು, 120 ಕ್ಕೂ ಹೆಚ್ಚು ಕೃತಿಯನ್ನ ರಚಿಸಿದ್ದಾರೆ. ಭಗವಾನ್ ದತ್ತಾತ್ರೇಯ ಮಹಾಪುರಾಣ ಸತ್ಯ ಕತೆಯ ಕುರಿತು ರಚಿಸಿರುವ ಕೃತಿ ಇದಾಗಿದ್ದು, ಮೂಲ ದತ್ತಾತ್ರೇಯ ಕೃತಾಯುಗದಿಂದ ಸತ್ಯಯುಗದ ಆರಂಭದವೆರೆಗೆ ದತ್ತಾತ್ರೇಯನ ಅವತಾರಗಳ ಕುರಿತು ನಮೂದಿಸಲಾಗಿದೆ.

    ಮೂಲ ದತ್ತಾತ್ರೇಯ ಶಿಷ್ಯನ ನವನಾತನ ಕಥೆಯನ್ನ ಶ್ರೀದತ್ತ ಭಾಗವತ ಒಳಗೊಂಡಿದ್ದು, ಕಥೆ ಉಪಕಥೆಗಳು ಸೇರಿ 168 ಅಧ್ಯಾಯಗಳನ್ನೊಳಗೊಂಡ ಪುರಾಣ ಕೃತಿಯಿದ್ದಾಗಿದೆ. ಜಗತ್ತಿನ 52 ಭಾಷೆಗಳಲ್ಲಿ ಕೃತಿ ಅನುವಾದಿಸುವ ಸಂಕಲ್ಪ ಹೊಂದಿರುವ ಹನುಮಂತಪ್ಪ ವಲ್ಲೇಪುರೆ ಅವರು, ಈಗಾಗಲೇ ಮರಾಠಿ, ತೆಲುಗು, ಇಂಗ್ಲಿಷ್, ಹಿಂದಿ, ನೇಪಾಳಿ, ಉರ್ದು, ತಮಿಳು, ಗುಜರಾತಿ ಭಾಷೆಗಳಲ್ಲಿ ಅನುವಾದ ಕಾರ್ಯ ನಡೆದಿದೆ.

    ಬೀದರ್ ನ ಖ್ಯಾತ ಉದ್ಯಮಿ ಮಹೇಶ ಸ್ವಾಮಿ, ಧಾರವಾಡ ಸಾಹಿತಿ ಆರ್.ಬಿ.ಚಿಲುಮೆ, ಪೊಲೀಸ್ ಸಾಹಿತಿ ಸೋಮುರೆಡ್ಡಿ,  ಬೀದರ್ ನ ಉದ್ಯಮಿ ಗುರುಸಿದ್ಧಪ್ಪ ಬಿರಾದಾರ, ನ್ಯಾಯವಾದಿ ಶೇಷಾದ್ರಿ ಜಯಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರ್.ಬಿ.ಚಿಲುಮೆಯವರ ಸರ್ವಜ್ಞ ಕವಿ ಚರಿತಾಮೃತ, ಡಾ ಪುಟ್ಟರಾಜ ಗವಾಯಿಗಳ ಚರಿತಾಮೃತ ಮತ್ತು ವಚನ ವೈಭವ ಕೃತಿಗಳ ಬಿಡುಗಡೆಯನ್ನ ಮಾಡಲಾಯಿತು.

  • ಮೂರುಸಾವಿರ ಮಠದ ಆಸ್ತಿ ಪರಭಾರೆ: ಮಹತ್ವದ ಸಭೆ ನಡೆಸಿದ ಪ್ರಮುಖರು..!

    ಹುಬ್ಬಳ್ಳಿ:  ಮೂರುಸಾವಿರ ಮಠದ ಆಸ್ತಿಯನ್ನ ಕೆಎಲ್‌ಇ ಸಂಸ್ಥೆಗೆ ಪರಭಾರೆ ಮಾಡಿರುವುದಕ್ಕೆ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಇದೀಗ  ಎಚ್ಚರಗೊಂಡಿದ್ದಾರೆ.

    ಕೋಟ್ಯಂತರ ರೂಪಾಯಿ ಬೆಲೆಬಾಳುವ ಮಠದ ಆಸ್ತಿಯನ್ನು ಮರಳಿ ಪಡೆಯಬೇಕೆಂಬ ಉದ್ದೇಶದಿಂದ ಲಿಂಗಾಯತ ಮುಖಂಡರು ಗೋಕುಲ ರಸ್ತೆಯಲ್ಲಿರುವ ವಿಧಾನಪರಿಷತ್ ನ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರ ಕಾರ್ಯಾಲಯದಲ್ಲಿ ವಿಶೇಷ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

    ಮೂರುಸಾವಿರ ಮಠದ ಆಸ್ತಿ ಕೆಎಲ್‌ಇ ಸಂಸ್ಥೆಗೆ ಪರಭಾರೆ ಮಾಡುವುದರಿಂದ ಶ್ರೀಮಠಕ್ಕೆ ಆಗುವ ಒಳಿತಾದರೂ ಏನು ಎಂಬುದರ ಬಗ್ಗೆ ಮುಖಂಡರು ವಿಸ್ತೃತವಾಗಿ ಚರ್ಚಿಸಿದರು. ಶ್ರೀಮಠದ ಆಸ್ತಿ ಉಳಿಸಿಕೊಂಡು ಹೋಗುವುದು ಕೇವಲ ಮಠಾಧಿಪತಿಗಳಿಗೆ ಸೇರಿದ ವಿಷಯ ಮಾತ್ರವಲ್ಲ. ಇದಕ್ಕೆ ಎಲ್ಲ ಭಕ್ತರ ಸಹಕಾರ ಅತ್ಯವಶ್ಯ. ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೈಂಕರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದೆ. ಇದಕ್ಕೆ ಶ್ರೀ ಮಠದ ಆಸ್ತಿಪಾಸ್ತಿಗಳಿಂದ ಸಂದಾಯವಾಗುವ ಹಣದಿಂದ ಈ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅನೇಕರು ಅನಿಸಿಕೆ ವ್ಯಕ್ತಪಡಿಸಿದರು.

    ಯಾವುದೇ ಒಂದು ಸಂಸ್ಥೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನದ ರೂಪದಲ್ಲಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಅನೇಕರು ಮುಂದಿಟ್ಟರೆ, ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರೀಮಠದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಬದುಕು ಕಟ್ಟಿಕೊಡುವ ಕೆಲಸ ಮುಂಬರುವ ದಿನಗಳಲ್ಲಿ ಶ್ರೀಮಠದಿಂದ ಮಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸದ್ಯ ಕೆಎಲ್‌ಇ ಸಂಸ್ಥೆಗೆ ದಾನದ ರೂಪದಲ್ಲಿ ನೀಡಿರುವ ಕೋಟ್ಯಾಂತರ ರೂಪಾಯಿ  ಬೆಲೆಬಾಳುವ ಮೂರುಸಾವಿರ ಮಠದ ಆಸ್ತಿಯನ್ನು ಮರಳಿ ಮಠಕ್ಕೆ ಹಸ್ತಾಂತರಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಒತ್ತಾಯಿಸಿದರು.

    ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಾಜಿ ಶಾಸಕ ಎಂ.ಎಸ್.ಅಕ್ಕಿ, ಪಪ್ಪಿ ರಾಯನಗೌಡ, ರಜತ ಉಳ್ಳಾಗಡ್ಡಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಅಗ್ರಿ ಯೂನಿವರ್ಸಿಟಿ ಬಳಿ ಪಲ್ಟಿಯಾಗಿದ್ದು ಸಿಮೆಂಟ್ ಮಿಕ್ಸರ್ ಲಾರಿ..!

    ಧಾರವಾಡ: ನಗರದ ಬೆಳಗಾವಿ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮುಂಭಾಗ ಸಿಮೆಂಟ್ ತುಂಬಿದ ಮಿಕ್ಸರ್ ಲಾರಿಯು ಡಿವೈಡರಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

    ಹೊಸಪೇಟೆ ಮೂಲದ ಮೊಹ್ಮದಜಾಫರ ಬಡೇಸಾಬ ಎಂಬ ಚಾಲಕ ಮಧ್ಯರಾತ್ರಿ  2 ಗಂಟೆ ಸುಮಾರಿಗೆ ಲಾರಿಯ ಹ್ಯಾಂಡಲ್ ಲಾಕ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಲಾರಿಯು ರಸ್ತೆಯಲ್ಲೇ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು, ರಸ್ತೆಯ ಮಾರ್ಗವನ್ನ ಬದಲಾವಣೆ ಮಾಡಿ, ಬೇರೆ ವಾಹನಗಳಿಗೆ ಅನುಕೂಲ ಮಾಡಿದ್ದಾರೆ.

    ಈಗಾಗಲೇ ವಾಹನವನ್ನ ಕ್ರೇನ್ ಮೂಲಕ ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಪ್ರಯತ್ನವನ್ನ ಮಾಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.