ವ್ಯವಸ್ಥೆಯ ಕುಟಿಲತೆಗೆ ಗರಗ ಠಾಣೆಯ ಪ್ರಾಮಾಣಿಕ ಇನ್ಸಪೆಕ್ಟರ್ ಅಮಾನತ್ತು…!!!
ಧಾರವಾಡ: ಓರ್ವ ಅಧಿಕಾರಿಯನ್ನ ಹೇಗಾದರೂ ಮಾಡಿ ಅಮಾನತ್ತು ಮಾಡಬಹುದು ಎನ್ನುವುದಕ್ಕೆ ಧಾರವಾಡ ಜಿಲ್ಲೆಯ ಘಟನೆ ಸಾಕ್ಷಿಯಾಗಿ ನಿಂತಿದ್ದು, ವ್ಯವಸ್ಥೆಯ ಕುಟಿಲತೆಗೆ ಗರಗ ಠಾಣೆಯ ವೃತ್ತ ನಿರೀಕ್ಷಕರನ್ನ ಅಮಾನತ್ತು ಮಾಡಲಾಗಿದೆ.
ಶಿವಯೋಗಿ ಲೋಹಾರ ಎಂಬ ಪ್ರಾಮಾಣಿಕ ಇನ್ಸಪೆಕ್ಟರ್ ಗರಗ ಗ್ರಾಮದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾನತ್ತಾಗಿದ್ದಾರೆ. ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರಿಗೆ ಸಿಕ್ಕ ಪ್ರತಿಫಲವಿದು.
ಗರಗ ಠಾಣೆಗೆ ಬಂದ ನಂತರ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಹಾರ ಅವರು, ಸಿನೀಮಯ ರೀತಿಯಲ್ಲಿ ಮದ್ಯ ಮತ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನ ಪತ್ತೆ ಹಚ್ಚಿ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದ್ದರು.
ಗರಗ ಪ್ರಕರಣದಲ್ಲಿ ಹೋರಾಟ ಮಾಡಿದ ಸಂಘಟನೆಯವರು ಕೂಡ, ಎಂದೂ ಇನ್ಸಪೆಕ್ಟರ್ ಕುರಿತು ಯಾವುದೇ ಆರೋಪ ಮಾಡಿರಲಿಲ್ಲ. ಆದರೂ, ಅವರನ್ನ ಅಮಾನತ್ತು ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕೆಳವರ್ಗದಿಂದ ಬಂದ ಮತ್ತೋರ್ವ ಅಧಿಕಾರಿ ವ್ಯವಸ್ಥೆಯ ಕುಟಿಲತೆಗೆ ಬಲಿಯಾಗಿದ್ದಾರೆ.
