2028ಕ್ಕೆ ನವಲಗುಂದ ಕ್ಷೇತ್ರಕ್ಕೆ “ವಿನೋದ ಅಸೂಟಿ Mla”- ಅಜ್ಮೀರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ “ಮೂಲ ಕಾಂಗ್ರೆಸ್ಸಿಗರು”…
ನವಲಗುಂದ: ವಿನೋದ ಅಸೂಟಿ ಗೆಲುವಿಗಾಗಿ ಅಜ್ಮೀರ್ ದರ್ಗಾದಲ್ಲಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ
ನವಲಗುಂದ: ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಅವರ ಮೇಲಿನ ಜನಾಭಿಮಾನ ಗಡಿ ದಾಟಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಅಭಿಮಾನಿಗಳು ಹಾಗೂ ಮತದಾರರು ಜಗತ್ ಪ್ರಸಿದ್ಧ ಅಜ್ಮೀರ್ನ ಖ್ವಾಜಾ ಗರೀಬ್ ನವಾಜ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ (ದುವಾ) ಸಲ್ಲಿಸಿದ್ದಾರೆ.
ದರ್ಗಾದಲ್ಲಿ ನಾಯಕನ ಭಾವಚಿತ್ರ ಹಿಡಿದು ಭಾವುಕರಾಗಿ ಪ್ರಾರ್ಥಿಸಿದ ಬೆಂಬಲಿಗರು, “ವಿನೋದ ಅಸೂಟಿ ಅವರು ಶಾಸಕರಾಗುವುದು ಕೇವಲ ನಮ್ಮ ಕನಸಲ್ಲ, ಕ್ಷೇತ್ರದ ಪ್ರತಿಯೊಬ್ಬ ಬಡವನ ಹಾರೈಕೆಯಾಗಿದೆ” ಎಂದು ನುಡಿದಿದ್ದಾರೆ. ಜಾತಿ-ಧರ್ಮದ ಬೇಧ ಮರೆತು ನಡೆದ ಈ ವಿಶೇಷ ಪ್ರಾರ್ಥನೆ, ಕ್ಷೇತ್ರದಲ್ಲಿ ಅಸೂಟಿ ಅವರು ಜನಸಾಮಾನ್ಯರ ಹೃದಯದಲ್ಲಿ ಎಷ್ಟು ಆಳವಾಗಿ ಮನೆಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
