Karnataka Voice

Latest Kannada News

ತನ್ನ ಪತ್ನಿಯ “ಆ” ವೀಡಿಯೋ ಶೇರ್ ಮಾಡಿ, ನೇಣಿಗೆ ಶರಣಾಗುವ ವೀಡಿಯೋ ಮಾಡಿದ ದೂರ್ತ‌ ಪತಿ..!

Spread the love

ಗಲಗಲಿ: ಅನೈತಿಕ ಸಂಬಂಧದ ಅನುಮಾನದಿಂದ ಪತಿಯೊಬ್ಬ ಪತ್ನಿಗೆ ಕಟ್ಟಿಗೆಯಿಂದ ಹೊಡೆದು, ಬಳಿಕ ನೇಣಿಗೇರಿಸಿ ಕೊಲೆ ಮಾಡಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ​ಮಹಾಲಿಂಗಪುರದ ಭಾಗ್ಯಶ್ರೀ ಜಿಗಳೂರು (೨೩) ಕೊಲೆಯಾದ ದುರ್ದೈವಿ. ಪತಿ ಪ್ರವೀಣ ಜಿಗಳೂರ ಕೊಲೆ ಮಾಡಿದ ಆರೋಪಿ ಎಂಬ ಮಾಹಿತಿಯನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದರು.

ಜಗಳವಾಡಿಕೊಂಡು ಎರಡು ತಿಂಗಳಿಂದ ತವರ ಮನೆಯಲ್ಲಿದ್ದ ಪತ್ನಿಯನ್ನು “ಚೆನ್ನಾಗಿ ಬಾಳೋಣ” ಎಂದು ಹೇಳಿ ಪ್ರವೀಣ ಇಂದಷ್ಟೇ ಮನೆಗೆ ಕರೆತಂದಿದ್ದ. ಸಂಜೆ ವೇಳೆ ಮತ್ತೆ ಜಗಳ ತೆಗೆದು, ಆಕೆಯ ಮೇಲೆ ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಿ ನೇಣು ಹಾಕಿದ್ದಾನೆಂಬ ಬಗ್ಗೆ ಮಾಹಿತಿಯಿದೆ ಎಂದರು.

​ಪತ್ನಿ ನೇಣಿನ ಕುಣಿಕೆಯಲ್ಲಿ ಉಸಿರುಗಟ್ಟಿ ನರಳಾಡುವಾಗ, ಆಕೆಯ ತಂದೆ-ತಾಯಿಗೆ ವಿಡಿಯೋ ಕಾಲ್ ಮಾಡಿ ತೋರಿಸಿ ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೆ, ಆ ವಿಕೃತ ವಿಡಿಯೋವನ್ನು ಕೆಲವರಿಗೆ ಶೇರ್ ಮಾಡಿದ್ದಾನೆಂದರು.

​ಸ್ಥಳಕ್ಕೆ ಬೀಳಗಿ ಪೊಲೀಸರು ಹಾಗೂ ಎಸ್‌ಪಿ ಸಿದ್ದಾರ್ಥ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪ್ರವೀಣನನ್ನು ವಶಕ್ಕೆ ಪಡೆದಿದ್ದಾರೆ.


Spread the love

Leave a Reply

Your email address will not be published. Required fields are marked *