‘ಕಿರಣ’ ಎಂಬ ಯುವಕ ಪೋನ್ ಮಾಡಲಿಲ್ಲವೆಂದು “ನೇಣಿಗೆ ಕೊರಳೊಡ್ಡಿದ” ಎರಡು ಮಕ್ಕಳ ತಾಯಿ ‘ಮೆಹಬೂಬಿ’…
ಎರಡು ಮಕ್ಕಳ ತಾಯಿಯ ದುರಂತ ಅಂತ್ಯ
ಬಾಗಲಕೋಟೆ: ನವನಗರದ ವಾಂಬೆ ಕಾಲೊನಿಯಲ್ಲಿ ಎರಡು ಮಕ್ಕಳ ತಾಯಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ.
ಮಹೆಬೂಬಿ (27) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಕಿರಣ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದ ಮಹೆಬೂಬಿ, ಆತ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆಗೂ ಮುನ್ನ ಮಹಿಳೆ ವಿಡಿಯೋವೊಂದನ್ನು ಹರಿಬಿಟ್ಟಿದ್ದಾಳೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
