Karnataka Voice

Latest Kannada News

ಮೈತ್ರಿ ಸಭಾಪತಿ ಸ್ಥಾನಕ್ಕಾಗಿ ಸಿಮೀತ: ಜನವಿರೋಧಿ ನೀತಿಗಳಿಗಲ್ಲ- ಕುಮಾರಸ್ವಾಮಿ


Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
Spread the love

ರಾಮನಗರ: ಸಭಾಪತಿ ಸ್ಥಾನಕ್ಕಾಗಿ ಮಾತ್ರ ಬಿಜೆಪಿ ಜೊತೆ ಜಾತ್ಯಾತೀತ ಜನತಾದಳ ಮೈತ್ರಿ ಮಾಡಿಕೊಂಡಿದೆ ಹೊರತು ಬೇರೆ ರೀತಿ ಬಿಜೆಪಿ ಜೊತೆ ಹೊಂದಾಣಿಕೆಯಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿಗಾಗಿ ಸಭಾಪತಿ ಸ್ಥಾನಕ್ಕೆ ಮಾತ್ರ ಮೈತ್ರಿ ಹೊರತು ಜನ ವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜಿಯಿಲ್ಲ ಎಂದರು.

ರೈತರು ಕಳೆದ 70 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ರೈತರ ಬಗ್ಗೆ ಗೌರವ ಇದ್ದರೆ ಸಭೆ ಮಾಡಬೇಕಿತ್ತು. ರೈತರ ಗೊಂದಲಗಳಿಗೆ ಖುದ್ದು ಪ್ರಧಾನಿ ಮನವರಿಕೆ ಮಾಡಿಕೊಡಲಿ. ಕೃಷಿ ಮಂತ್ರಿಗಳನ್ನು ಬಿಟ್ಟು ಸಭೆ ಮಾಡುವ ಬದಲು ಇವರೇ ಸಭೆ ಕರೆದು ಕಾಯ್ದೆಗಳಿಂದ ರೈತರಿಗೆ ಆಗುವ ಅನುಕೂಲದ ಬಗ್ಗೆ ತಿಳಿಸಬೇಕಿತ್ತು ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಸಭಾಪತಿ ಹುದ್ದೆ ಜೆಡಿಎಸ್ ಗೆ ಲಭಿಸಲಿದ್ದು, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಭಾಪತಿಗಳಾಗಿ ಆಯ್ಕೆಯಾಗಲಿದ್ದಾರೆ.


Spread the love

Leave a Reply

Your email address will not be published. Required fields are marked *