ಧಾರವಾಡ-71 ಕ್ಷೇತ್ರದಲ್ಲೀಗ ಕಾಂಗ್ರೆಸ್ ಲೀಡರ್ “ತವನಪ್ಪ ಅಷ್ಟಗಿ” ಫುಲ್ ಆ್ಯಕ್ಟಿವ್…
ಧಾರವಾಡ: ತಾಲೂಕಿನ ಸಿಂಗನಳ್ಳಿ ಕೆರೆಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಜಲಸಮಾಧಿಯಾದ ಮೂವರು ಮುಗ್ಧ ಬಾಲಕರ ಕುಟುಂಬಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ದುರಂತದಿಂದ ಕಂಗಾಲಾಗಿದ್ದ ಪೋಷಕರಿಗೆ ಧೈರ್ಯ ತುಂಬಿದ ಅಷ್ಟಗಿಯವರು, ಕೇವಲ ಸಾಂತ್ವನಕ್ಕೆ ಸೀಮಿತವಾಗದೆ ಮೃತ ಮೂರೂ ಬಾಲಕರ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿಗಳ ಆರ್ಥಿಕ ನೆರವು ಹಸ್ತಾಂತರಿಸಿದರು.
”ಮನೆಯ ದೀಪ ಆರಿಹೋದಾಗ ಆ ಕುಟುಂಬ ಅನುಭವಿಸುವ ನರಕಯಾತನೆಗೆ ಯಾವುದೂ ಸಾಟಿಯಿಲ್ಲ. ಹಣದಿಂದ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಈ ಕಷ್ಟದ ಕಾಲದಲ್ಲಿ ಅವರ ಕೈಹಿಡಿಯುವುದು ನಮ್ಮ ಕರ್ತವ್ಯ.”
— ತವನಪ್ಪ ಅಷ್ಟಗಿ
ಮನೆಯ ಕುಡಿಯನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿದ್ದ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸಿದ ತವನಪ್ಪ ಅಷ್ಟಗಿಯವರ ಈ ಮಾನವೀಯ ನಡೆಗೆ ಸಿಂಗನಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
