ಬೆಳಗಾವಿ: 2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದವರು ಹೋರಾಟ ನಡೆಸುತ್ತಿದ್ದ ಸ್ಥಳದಲ್ಲಿ ಕಿಸೆಗಳಿಗೆ ಕತ್ತರಿ ಹಾಕುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಹುಬ್ಬಳ್ಳಿ ಮೂಲದ ಪ್ರಕಾಶ ಎಂಬಾತ, ತನಗೆ ಸಂಬಂಧವೇ ಇಲ್ಲದ ಹೋರಾಟದ ಸ್ಥಳಕ್ಕೆ ಹೋಗಿ, ಕಿಸೆಗಳ್ಳತನ ಮಾಡುತ್ತಿದ್ದ. ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವಿರಾರೂ ಜನ ಭಾಗವಹಿಸಿದ್ದಾರೆ.
ಧಾರವಾಡ: ಬಡ ರೈತಾಪಿ ವರ್ಗವನ್ನ ದೂರಿಟ್ಟು ಶ್ರೀಮಂತ ರೈತರು ಬೆಳೆವಿಮೆ ಪಡೆಯುವಲ್ಲಿ ಮಾಡುತ್ತಿರುವ ಸರ್ಕಸ್ ಇದೀಗ ಬಟಾಬಯಲಾಗುತ್ತ ಬಂದಿದ್ದು, ಮೋಸದಿಂದ ಹಣ ಗಳಿಸುವ ಪಡೆ ಮೂಲೆ ಮೂಲೆ ಅಲೆದಾಡುತ್ತಿದೆ.
ಅಖಂಡ ಧಾರವಾಡ ಜಿಲ್ಲೆಯ ಮೂಲ ಕರ್ತೃ ಗದಗ ಮೂಲದವರಾಗಿದ್ದು, ಓರ್ವ ಈಗಾಗಲೇ ನಾನೇ ಮುಂದಿನ ಶಾಸಕ ಎಂದು ಫೋಸು ಕೊಡಲಾರಂಭಿಸಿದ್ದಾನೆ. ಕಾಳು ತುಂಬಿಸುವ ಗಿರಾಕಿ, ಹೆಸರು ಕಾಳಿನಿಂದಲೇ ಕೋಟಿ ಕೋಟಿ ಹೊಡೆಯುವ ಲೆಕ್ಕಾಚಾರದಲ್ಲಿದ್ದಾನೆ.
ಸೋಜಿಗ ಅಂದರೇ, ಈ ಆಸಾಮಿ ಮೊನ್ನೆ ಮೊನ್ನೆ ಬರ್ತಡೇಯನ್ನ ಪುಕ್ಕಟ್ಟೆ ಹಣದಲ್ಲಿ ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಆಚರಿಸಿಕೊಂಡ. ಆ ಹಣ ಬೇರೆ ಯಾರದ್ದೂ ಅಲ್ಲ, ಇದೇ ರೈತರದ್ದು, “50-50” ಮಾದರಿಯದ್ದು.
ಇಂತಹ ಎಂಎಲ್ಎ ಕನಸು ಕಾಣುವವನ ಜೊತೆಗೆ ಮೊದಲಿಂದಲೂ ಸಾವಿರಾರೂ ಬಡ ರೈತರಿಗೆ ಅನ್ಯಾಯ ಮಾಡಿ ಶ್ರೀಮಂತ ರೈತರ ಜೊತೆಗೂಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದ ‘ದಾಡಿಯ ಚಿಕ್ಕಹಂದಿ’ ಎಂಬುದು ರಹಸ್ಯವಾಗಿ ಉಳಿದಿಲ್ಲ.
ಮುಂಗಾರಿನ ಹೆಸರು ಬೆಳೆಯ ಬೆಳೆವಿಮೆ ಪಡೆಯಲು ಯಾರು ಯಾರು ಯಾವ್ಯಾವ ಐಪಿ ಅಡ್ರೇಸ್ನಿಂದ ಹಣ ಕಳಿಸಿದ್ದಾರೆ. ಅಲ್ಲಿರುವ ಕೇಂದ್ರಗಳನ್ನ ನಡೆಸುವವರು ಯಾರೂ ಎಂಬುದು ಕೂಡಾ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯಿದೆ.
ಬಡ ರೈತರಿಗೆ ಅನ್ಯಾಯ ಸರಿಯಾಗುವವರೆಗೆ ಮತ್ತೂ ನೀಚರಿಗೆ ಸರಕಾರ ತಕ್ಕ ಪಾಠ ಕಲಿಸುವವರೆಗೆ ಮಾಹಿತಿಗಳು ನಿಲ್ಲುವುದಿಲ್ಲವೆಂಬ ಸತ್ಯ ಈ ವಂಚನೆಯಲ್ಲಿರುವ ಕೆಲವು ಶ್ರೀಮಂತ ರೈತರು ಮತ್ತೂ ನೀಚ ವಂಚಕರಿಗೆ ತಿಳಿದಿರಲಿ.
ಧಾರವಾಡ: ರೈತರು ದೇಶದ ಬೆನ್ನೆಲಬು ಎನ್ನುವುದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಕೆಲ ನೀಚ ಶ್ರೀಮಂತ ರೈತರು, ಕೋಟಿ ಕೋಟಿ ಲೂಟಿಯನ್ನ ಬೆಳೆವಿಮೆಯಲ್ಲಿ ಹೊಡೆಯುತ್ತಿರುವುದು ರಹಸ್ಯವಾಗಿ ಉಳಿದಿಲ್ಲ ಎಂಬುದು ಕರ್ನಾಟಕವಾಯ್ಸ್.ಕಾಂ ಮೂಲಕ ಗೊತ್ತಾಗುತ್ತಿದೆ.
ಧಾರವಾಡ ಗ್ರಾಮೀಣದಿಂದ ಹಿಡಿದು ಆರಂಭವಾಗುವ ಈ ಶ್ರೀಮಂತ ರೈತ ಏಜೆಂಟರು ಹುಬ್ಬಳ್ಳಿ ತಾಲೂಕಿನಲ್ಲಿ ಹೆಚ್ಚಾಗಿದ್ದಾರೆ. ಕುಂದಗೋಳ, ಶಿರಹಟ್ಟಿ, ಗದಗ ಗ್ರಾಮೀಣದ ಜೊತೆಗೆ ಹಾವೇರಿಯ ಜಿಲ್ಲೆಯ ಶಿಗ್ಗಾಂವ ಮೂಲ ಮಾಡಿಕೊಂಡಿದ್ದಾರೆ. ಅವರವರ ಗ್ರಾಮದಲ್ಲಿ ಅವರೇ, ಬೇರೆ ರೈತರ ಹೆಸರಿನಲ್ಲಿ ಬೆಳೆವಿಮೆ ತುಂಬಿ ಹಣಕ್ಕಾಗಿ ‘ಬಕ’ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಈ ಶ್ರೀಮಂತ ಏಜೆಂಟರು ಮತ್ತು ಅವರು ಯಾರ ಯಾರ ಹೆಸರಿನಲ್ಲಿ ಹಣ ತುಂಬಿರುವುದರ ಲಿಸ್ಟ್ ‘ಕೆವಿ’ಗೆ ಲಭಿಸಿದೆ. ಹುಬ್ಬಳ್ಳಿ ತಾಲೂಕಿನ ಲಿಂಕ್ ಪಾಣಿಗಟ್ಟಿವರೆಗೆ ಇದ್ದರೇ, ಪಾಣಿಗಟ್ಟಿಯ ಲಿಂಕ್ ಗದಗ ತಾಲೂಕಿನ ಮೂಲ ಹಳ್ಳಿಯಲ್ಲಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗತೊಡಗಿದೆ.
ರೈತರ ಖಾತೆ ಮೂಲಕ ಮುಂಗಾರಿನ ಹೆಸರು ಬೆಳೆವಿಮೆ ತುಂಬಿರುವ ಖದೀಮರು ಈ ತಿಂಗಳ ಬದಲಿಗೆ ಜನೇವರಿ ಕೊನೆಯ ವಾರ ಅಥವಾ ಫೆಬ್ರುವರಿಯಲ್ಲಿ ಬಂದೇ ಬರತ್ತೆ ಎಂದು ಜಪಿಸತೊಡಗಿದ್ದಾರೆ. ಹೆಸರು ಬೆಳೆ ಪರಿಶೀಲನೆಗೆ ಬಂದಾಗ ರಾತ್ರೋರಾತ್ರಿ ಹೆಸರು ಬಿಡಿಸಿ, ಪರಿಶೀಲನೆ ಮಾಡಲು ತಂಡ ಬಂದಾಗ ಎರಡ್ಮೂರು ಹೆಸರು ಕಾಯಿ ಇರುವಂತೆ ಮಾಡಿದ ಶ್ರೀಮಂತ ರೈತರ ಪಟ್ಟಿಯೂ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಕುಂದಗೋಳ ತಾಲೂಕಿನಲ್ಲಿ ಎಲ್ಲಿ ತಮ್ಮ ಬಂಡವಾಳ ಹೊರಬರತ್ತೋ ಅಂದುಕೊಂಡು ಕಂಪನಿಯ ಓರ್ವನನ್ನ ಥಳಿಸಿ, ಆತನ ವಿರುದ್ಧ ರೇಪ್ ಕೇಸ್ ಹಾಕಿಸುವ ತಂತ್ರ ರೂಪಿಸಿದ್ದು, ಸಂಬಂಧಿಸಿದ ಇಲಾಖೆಯ ಸ್ಮರಣೆಯಲ್ಲಿದೆ.
ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಸಿಗುವವರೆಗೆ ಕರ್ನಾಟಕವಾಯ್ಸ್.ಕಾಂ ಈ ಕುರಿತು ನಿಖರವಾದ ಮಾಹಿತಿಯನ್ನು ನಿರಂತರವಾಗಿ ಹೊರ ಹಾಕುತ್ತಲೇ ಇರುತ್ತದೆ.
ಹುಬ್ಬಳ್ಳಿ: ವಾಣಿಜ್ಯನಗರಿಯಿಂದ ವಿದ್ಯಾಕಾಶಿಯತ್ತ ಹೊರಟಿದ್ದ ಬಿಆರ್ಟಿಎಸ್ ಚಿಗರಿ ಬಸ್ನ ಸ್ಟೇರಿಂಗ್ ಕಟ್ ಆದ ಪರಿಣಾಮ, ಬೈರಿದೇವರಕೊಪ್ಪದ ಬಳಿಯ ಭಜರಂಗ ಗ್ರ್ಯಾನೈಟ್ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಸಂಭವಿಸಿದೆ.
ಘಟನೆ ನಡೆಯುತ್ತಿದ್ದ ಹಾಗೇ, ಕೆಲವರು ಚಾಲಕನನ್ನ ಹೊರಗೆ ತೆಗೆದಿದ್ದಾರೆ. ಪ್ರಯಾಣಿಕರಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನೂ ಹೊರಗೆ ತೆಗೆಯಲಾಗಿದೆ.
ವೀಡಿಯೋ….
ಗ್ರ್ಯಾನೈಟ್ ಅಂಗಡಿಯ ಬಳಿಯೇ ಬಾರ್ಯಿದ್ದ ಪರಿಣಾಮ ಕುಡಿದ ಅಮಲಿನಲ್ಲಿದ್ದ ಕೆಲವರು, ಕಲ್ಲು ತೂರಾಟ ನಡೆಸಿದ್ದಾರೆ. ಬಾರ್ನಲ್ಲಿದ್ದ ಓರ್ವ ಜನರಿಗೆ ಹೊಡೆಯಲು ಉತ್ತೇಜಿಸುತ್ತಿದ್ದ ವೀಡಿಯೋ ಕೂಡಾ ವೈರಲ್ ಆಗಿದೆ.
ಬಿಆರ್ಟಿಎಸ್ ವ್ಯವಸ್ಥೆಯ ಬಗ್ಗೆ ನೂರೆಂಟು ಕಲ್ಪನೆಗಳು ಜನರಲ್ಲಿದ್ದು, ಇದೀಗ ಬಸ್ನ ತಾಂತ್ರಿಕ ಸಮಸ್ಯೆಗಳು ಆರಂಭಗೊಂಡಿವೆ. ಚಿಗರಿ ಬಸ್ನ ಬಗ್ಗೆ ಈ ಘಟನೆಯಿಂದ ಮತ್ತಷ್ಟು ಆತಂಕ ಹೆಚ್ಚಲಿದೆ. ಹಾಗಾಗದಂತೆ ತಡೆಯಲು ಈ ವ್ಯವಸ್ಥೆಯನ್ನ ‘ಬ್ಯಾನ್’ ಮಾಡುವಂತೆ ಕೂಗು ಮತ್ತಷ್ಟು ಹೆಚ್ಚಾಗಿದೆ.
ಹುಬ್ಬಳ್ಳಿ: 26 ಸಾವಿರ ನಿವೃತ್ತ ನೌಕರರ ಸಮಸ್ಯೆಗೆ ರಾಜ್ಯ ಸರಕಾರ ಸ್ಪಂದಿಸದ ಕಾರಣ ಡಿಸೆಂಬರ್ 16 ರಂದು ಚಳಿಗಾಲದ ಅಧಿವೇಶನದ ಅವಧಿಯಲ್ಲಿ ಸುವರ್ಣ ಸೌಧ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ.
ನಿವೃತ್ತ ನೌಕರರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಇಲ್ಲಿದೆ ನೋಡಿ ವೀಡಿಯೋ…
ಸಿಎಂ ಸಿದ್ಧರಾಮಯ್ಯ ಅವರನ್ನ ಹನ್ನೆರಡು ಬಾರಿ ಭೇಟಿಯಾದರೂ ಪ್ರಯೋಜನವಾಗಿಲ್ಲ. ಈಗಲೂ ಹಾಗೇ ಮುಂದುವರೆದರೇ, ನಿವೃತ್ತ ನೌಕರರು ಬೇರೆ ದಾರಿಯನ್ನ ಹಿಡಿಯಬೇಕಾತ್ತೆ ಎಂದು ಎಚ್ಚರಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕನ ಮನೆಗೆ ತೆರಳಿ ಸಾಂತ್ವನ ಹೇಳಿದ ಕಾರ್ಮಿಕ ಸಚಿವರು ಮೃತ ಕಾರ್ಮಿಕನ ಕುಟುಂಬದ ಕಷ್ಟಕ್ಕೆ ಹೆಗಲಾದ ಸಚಿವ ಲಾಡ್
ಹುಬ್ಬಳ್ಳಿ: “ಕಷ್ಟ ಬಂತು ಅಂತ ಯಾರೂ ಹೀಗೆ ಮಾಡಿಕೊಳ್ಳಬೇಡಿ. ನಾನು ನಿಮ್ಮ ಜೊತೆ ಸದಾ ಇದ್ದೇನೆ” ಹೀಗೆ ಸಾಂತ್ವನ ಹೇಳಿದ್ದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಬಿಡಿಕೆ ವಾಲ್ವ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಮಿಕ ನಿಂಗನಗೌಡ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮನೆಗೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಕಂಪನಿಯು, ಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಕಂಪನಿಯ ಆಡಳಿತ ಮಂಡಳಿ ವಿರುದ್ಧ ನೌಕರರು ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಅಹವಾಲುಗಳನ್ನು ಲಾಡ್ ಅವರು ಆಲಿಸಿದ್ದರು. ಆದರೆ ಪ್ರತಿಭಟನೆ ನಡೆಸಿದ್ದ ಕಾರ್ಮಿಕರನ್ನು ಇತ್ತೀಚೆಗೆ ಕಂಪನಿ ಕೆಲಸದಿಂದ ತೆಗೆದುಹಾಕಿತ್ತು. ಇದರಿಂದ ಮನನೊಂದ ನಿಂಗನಗೌಡ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಲಾಡ್ ಅವರು ನಿಂಗನಗೌಡ ಅವರ ಮನೆಗೆ ಭೇಟಿ ನೀಡಿದ್ದರು. ಲಾಡ್ ಅವರು ಮನೆಗೆ ಭೇಟಿ ನೀಡುತ್ತಿದ್ದಾಗಲೇ ನಿಂಗನಗೌಡ ಕುಟುಂಬದವರು ದುಃಖದ ಮಡುವಿನಲ್ಲಿದ್ದರು. ಮನೆ ಮಗನನ್ನು ಕಳೆದುಕೊಂಡು ಅವರೆಲ್ಲ ನೋವಿನಲ್ಲಿದ್ದರು. ಅವರ ನೋವನ್ನು ಆಲಿಸಿದ ಸಚಿವರು ನೆಲದ ಮೇಲೆ ಕುಳಿತು ಎಲ್ಲವನ್ನೂ ಕೇಳಿಸಿಕೊಂಡು ಮಮ್ಮುಲ ಮರುಗಿದರು.
ಯಾರಿಗಾದರೂ ಕಷ್ಟವಾದರೆ, ಸಮಸ್ಯೆ ಇದ್ದರೆ ನನಗೆ ತಿಳಿಸಿ, ನನ್ನ ಕೈಲಿ ಎಷ್ಟಾಗುತ್ತೆ ಅಷ್ಟು ಸಹಾಯ ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ನಾನು ಬದುಕಿ ಉಳಿದವನು, ಕಷ್ಟವನ್ನು ಎದುರಿಸುವುದನ್ನು ಎಲ್ಲರೂ ಕಲಿಯಬೇಕು. ಬಡವ, ಸಾಹುಕಾರ ಯಾರೇ ಇರಲಿ. ಕಷ್ಟ ಸುಖ ಎಲ್ಲರಿಗೂ ಬಂದೇ ಬರುತ್ತದೆ. ಜೀವ ತೆಗೆದುಕೊಳ್ಳುವುದೇ ಪರಿಹಾರವಾಗಬಾರದು. ಇದೆಲ್ಲ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತಿದ್ದಾಗ ಅವರನ್ನು ಭೇಟಿ ಮಾಡಿ ಮಾತನಾಡಿದ್ದೆ. ಏನಾದರೂ ಕಷ್ಟವಿದ್ದರೆ ಬನ್ನಿ ಎಂದು ತಿಳಿಸಿದ್ದೆ ಎಂದರು.
ಸಚಿವರ ಈ ಮಾನವೀಯ ನಡೆಗೆ ಅಲ್ಲಿ ಸೇರಿದ್ದ ಜನರು ಮೌನವಾಗಿದ್ದರು. ಇಂತಹ ಜನಪ್ರತಿನಿಧಿಯನ್ನು ಪಡೆದ ನಾವೇ ಪುಣ್ಯವಂತರು ಎಂಬ ಭಾವನೆ ಅವರಲ್ಲಿತ್ತು.
ಬಿಸಿ ಬಿಸಿ ಚಪಾತಿ ಮಾಡಿದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್: ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಹುಬ್ಬಳ್ಳಿ: ಅವಳಿ ನಗರದ ಪೊಲೀಸ್ ಕಮೀಷನರ್ ಆದ ನಂತರ ಎನ್.ಶಶಿಕುಮಾರ್ ಅವರು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಹತ್ತಿರ ಆಗುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Viral Video….
ಈ ನಡುವೆ ಡ್ಯೂಟಿ ಜಂಜಾಟದಿಂದ ದೂರ ಸರಿದ ಕಮೀಷನರ್ ಶಶಿಕುಮಾರ್ ಅವರು ಮೊನ್ನೆ ಮೊನ್ನೆ ಪೊಲೀಸ್ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸತತ 1 ಗಂಟೆಯ ವರೆಗೂ ಹಾಡನ್ನು ಹಾಡಿ ರಿಲ್ಯಾಕ್ಸ್ ಮೂಡಿಗೆ ತಾವು ಜಾರಿ ಸಿಬ್ಬಂದಿಗಳನ್ನು ಖುಷಿಯ ಕಡಲಲ್ಲಿ ತೇಲಿಸಿದ್ದರು.
ಇದರ ನಡುವೆಯೇ ಸ್ವತಃ ಕಮಿಷನರ್ ಎನ್. ಶಶಿಕುಮಾರ್ ಅವರು ಬಿಸಿ ಬಿಸಿ ಚಪಾತಿ ಮಾಡುವುದರ ಮೂಲಕ ನಾನು ಸಿಂಗಿಂಗ್ ಗೂ ಸೈ, ಕುಕಿಂಗ್ ಗೂ ಸೈ ಎಂದು ಚಪಾತಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಸ್ತ್ ವೈರಲ್ ಆಗುತ್ತಿದೆ.
ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಸೈಕೋ ಕಳ್ಳ ಲಾಕ್
ಹುಬ್ಬಳ್ಳಿ: ಮಧ್ಯರಾತ್ರಿ ಮನೆಗೆ ನುಗ್ಗಿ ಹಣ ಹಾಗೂ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಸೈಕೋನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ….
ನೇಕಾರ ನಗರದಲ್ಲಿ ಕಳೆದ ಹಲವು ದಿನಗಳಿಂದ ಮನೆಯ ಹೊರಗಡೆ ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಹಾಕಿದ ಒಳ ಉಡುಪುಗಳು ಕಳ್ಳತನ ಆಗುತ್ತಿದ್ದವು. ಅದೇ ರೀತಿ ಕೆಲವು ಮನೆಗಳಲ್ಲಿ ಹಣ ಕೂಡಾ ಕಳ್ಳತನ ಆಗುತ್ತಿತ್ತು. ಈ ನಿಟ್ಟಿನಲ್ಲಿ ಕೆಲವು ಸಾರ್ವಜನಿಕರು ತಮ್ಮ ತಮ್ಮ ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದರು.
ಗುರುವಾರ ಮಧ್ಯರಾತ್ರಿ ಈ ಸೈಕೋ ಕಳ್ಳ ಮನೆಯೊಂದಕ್ಕೆ ಮನೆಯ ಮುಂದಿನ ಗೇಟ್ ಹಾರಿ ಬಂದು ಮಹಿಳೆಯರು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದ. ಆಗ ಮನೆಯವರು ಸಿಸಿ ಕ್ಯಾಮರಾದಲ್ಲಿ ಈ ದೃಶ್ಯವನ್ನು ನೋಡಿ ಏರಿಯಾ ನಿವಾಸಿಗಳಿಗೆ ಕಳ್ಳ ಬಂದಿರೋ ಮಾಹಿತಿಯನ್ನು ನೀಡಿ ಎಲ್ಲರೂ ಸೇರಿ ಹಿಡಿದು ಥಳಿಸಿದ್ದಾರೆ.
ನಂತರ ಆತನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಸದ್ಯ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರ ಕೈಗೆ ಒಪ್ಪಿಸಿದ ಹಿನ್ನೆಲೆ ನೇಕಾರ ನೇಕಾರದ ಸುತ್ತಮುತ್ತಲಿನ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದು. ಹಳೇ ಹುಬ್ಬಳ್ಳಿ ಪೊಲೀಸರು ಈತನನ್ನು ವಶಕ್ಕೇ ಪಡೆದು ಈತನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಧಾರವಾಡ: ಬೆಳೆವಿಮೆ ಪರಿಹಾರದ “50-50” ವಂಚನೆಯಲ್ಲಿ ಹೆಚ್ಚಾಗಿ ಶ್ರೀಮಂತ ರೈತರು ಪಾಲು ಪಡೆಯಲು ಮುಂದಾಗಿರುವ ಸತ್ಯ ದಾಖಲೆಗಳಲ್ಲಿ ಕಂಡು ಬಂದಿದ್ದು, ಹೋರಾಟ ನಡೆಸಲು ರೈತ ಸಂಘಟನೆಗಳು ಮುಂದಾಗುತ್ತಿವೆ.
ಬಡ ರೈತರನ್ನ ಕಡೆಗಣಿಸಿ ತಮಗೆ ಬೇಕಾದವರ ಹೆಸರಿಗೆ ಹಣ ಭರಿಸಿ 50-50 ದಂಧೆಯಲ್ಲಿ ಮುಳುಗಿದವರ ವಿರುದ್ಧ ರೈತಪರ ಹೋರಾಟಗಾರ ಶ್ರೀಶೈಲಗೌಡ ಕಮತರಪಾಟೀಲ ಆಕ್ರೋಶ ಹೊರಹಾಕಿದ್ದಾರೆ.
ಬೆಳೆವಿಮೆ ಹಣ ರೈತರ ಹೆಸರಿನಲ್ಲಿ ಭರಿಸಿ 50-50 ಪಡೆಯಲು ಮುಂದಾಗಿರುವ ವಂಚಕರು ಗದಗ ತಾಲೂಕಿನ ಗ್ರಾಮವೊಂದರ ‘ವಂಚಕ’ ಎನ್ನುವುದು ಗೊತ್ತಾಗಿದೆ. ಈ ಕುರಿತು ಸರಕಾರ ತನಿಖೆ ಮಾಡಬೇಕೆಂದು ಆಗ್ರಹಿಸಲಾಗಿದೆ.