Category: ಹುಬ್ಬಳ್ಳಿ- ಧಾರವಾಡ

  • ಬೆಳೆವಿಮೆ “ಪರಿಹಾರ 50-50”- ಕೆಳದರ್ಜೆಯ ನೌಕರನಿಂದ ಕ್ಲಾಸ್ ಒನ್ ಅಧಿಕಾರಿಗಳು ಶಾಮೀಲು… ಸೋಮವಾರದಿಂದ ನೋಟಿಸ್ ಜಾರಿ…!?

    ಬೆಳೆವಿಮೆ “ಪರಿಹಾರ 50-50”- ಕೆಳದರ್ಜೆಯ ನೌಕರನಿಂದ ಕ್ಲಾಸ್ ಒನ್ ಅಧಿಕಾರಿಗಳು ಶಾಮೀಲು… ಸೋಮವಾರದಿಂದ ನೋಟಿಸ್ ಜಾರಿ…!?

    ಧಾರವಾಡ: 2024ರ ಹೆಸರು ಬೆಳೆವಿಮೆ ಪಡೆಯಲು ಮೋಸದ ಜಾಲ ಮಾಡಿಕೊಂಡಿದ್ದ ಕೆಲ ನೀಚ ಶ್ರೀಮಂತ ರೈತರಿಗೆ ಕ್ಲಾರ್ಕಗಳಿಂದ ಹಿಡಿದು ಕ್ಲಾಸ್ ಒನ್ ಅಧಿಕಾರಿಗಳು ಸಾಥ್ ನೀಡಿರುವ ಅಂಶ ಬೆಳಕಿಗೆ ಬರುತ್ತಿದ್ದು, ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

    ಸರಕಾರದ ಹಣ ವಂಚನೆ ಮಾಡುವುದಲ್ಲದೇ ಬಡ ರೈತರ ಬದುಕಿಗೆ ಬೆಂಕಿಯಿಡುವ ಜಾಲದ ಹಿಂದೆ ಗದಗ ತಾಲೂಕಿನ ದುಂದೂರ ಗ್ರಾಮದ ಓರ್ವ ಶ್ರೀಮಂತ ರೈತನಿರುವುದು ಖಾತ್ರಿಯಾಗಿದೆ. ಈತನ ಎರಡನೇಯ ಹೆಂಡತಿ ಇತ್ತೀಚಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಆಸ್ತಿ ಕೊಡುವಂತೆ ಹೇಳಿದ್ದು ರಹಸ್ಯವಾಗಿ ಉಳಿದಿಲ್ಲ.

    ಕರ್ಮ ರಿಟರ್ನ್ಸ್ ಅನ್ನುವ ಹಾಗೇ ಘಟನೆಗಳು ನಡೆದಿವೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ತಾಲೂಕಿನಲ್ಲಿಯೂ “ದಾಡಿ” ಗಿರಾಕಿಯ ಏಜೆಂಟರು ಕಾರ್ಯನಿರ್ವಹಿಸಿದ್ದಾರೆ.

    ಇಂತಹ ಕುಕೃತ್ಯಕ್ಕೆ ಭ್ರಷ್ಟ ಅಧಿಕಾರಿಗಳು ಸಾಥ್ ನೀಡಿ ಕೋಟಿ ಕೋಟಿ ಲೂಟಿ ಹೊಡೆದಿರುವುದನ್ನ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶ ನೀಡುವ ಸ್ಥಿತಿಯಲ್ಲಿದ್ದಾರೆ.

    ಸಾವಿರಾರೂ ಬಡ ರೈತರ ಬಾಯಿಗೆ ಮಣ್ಣು ಹಾಕುವ ನೀಚರಿಗೆ ತಕ್ಕ ಪಾಠವಾಗುವವರೆಗೆ ಈ ಮಾಹಿತಿಗಳು ನಿರಂತರವಾಗಿ ಹೊರಬರಲಿವೆ.

  • ಹುಬ್ಬಳ್ಳಿ: ನವನಗರದ ವಿಜಯಕುಮಾರ ಅಪ್ಪಾಜಿ ಬಂಧನ- Big Impact…

    ಹುಬ್ಬಳ್ಳಿ: ನವನಗರದ ವಿಜಯಕುಮಾರ ಅಪ್ಪಾಜಿ ಬಂಧನ- Big Impact…

    ಹುಬ್ಬಳ್ಳಿ: ಮಗನ ಕಟಿಂಗ್ ಸರಿ ಮಾಡಿಲ್ಲವೆಂದು ಸಲೂನ್‌ಗೆ ನುಗ್ಗಿದ್ದ ವಿಜಯಕುಮಾರ ಅಪ್ಪಾಜಿ, ಮನಬಂದಂತೆ ಮೂವರನ್ನ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.

    ಈ ಬಗ್ಗೆ ವೈರಲ್ ಆಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಕರ್ನಾಟಕವಾಯ್ಸ್.ಕಾಂ ನಿನ್ನೆ ಹೊರ ಹಾಕಿತ್ತು. ಘಟನೆ ಮತ್ತು ಬಂಧನದ ಕುರಿತು ಪೊಲೀಸ್ ಕಮೀಷನರ್ ಹೇಳಿಕೆ ಇಲ್ಲಿದೆ ನೋಡಿ…

    ವಿಜಯಕುಮಾರ ಅಪ್ಪಾಜಿ ಹಾಗೂ ಗಣೇಶ ಎಂಬುವವರನ್ನ ಬಂಧನ ಮಾಡಲಾಗಿದೆ. ಹೊತ್ತಿನ ಊಟಕ್ಕೆ ಬಂದವರ ಮೇಲೆ ಪೌರುಷ ತೋರಿಸಿ, ಪ್ರಮುಖರೊಂದಿಗೆ ಪೋಟೊ ತೆಗೆಸಿಕೊಳ್ಳುವ ಇಂಥಹ ಮಾನವರಲ್ಲದ ಮನಸ್ಥಿತಿಯವರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.

  • ಬೆಳೆವಿಮೆ “ಪರಿಹಾರ 50-50”- ಸ್ಥಳೀಯ ‘ಹಾಲಿ-ಮಾಜಿ’ ಜನಪ್ರತಿನಿಧಿಗಳೇ ಏಜೆಂಟರು… ಬಡ ರೈತರ ಬೆನ್ನಿಗೆ ಚೂರಿ…!!!

    ಬೆಳೆವಿಮೆ “ಪರಿಹಾರ 50-50”- ಸ್ಥಳೀಯ ‘ಹಾಲಿ-ಮಾಜಿ’ ಜನಪ್ರತಿನಿಧಿಗಳೇ ಏಜೆಂಟರು… ಬಡ ರೈತರ ಬೆನ್ನಿಗೆ ಚೂರಿ…!!!

    ಧಾರವಾಡ: ಗ್ರಾಮೀಣ ಮಟ್ಟದಲ್ಲಿ ಬಡ ರೈತರ ಬೆನ್ನಿಗೆ ಚೂರಿ ಹಾಕಿದ ನೀಚತನ ಮಾಡಿರುವ ಪ್ರಕರಣದಲ್ಲಿ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರು ಮತ್ತು ಮಾಜಿಗಳು ಇರುವುದು ಗೊತ್ತಾಗತೊಡಗಿದೆ.

    ಮುಂಗಾರಿನ ಹೆಸರು ಬೆಳೆಗೆ ವಿಮೆ ಮಾಡಿಸಿರುವ ಪ್ರಮುಖ ವಂಚಕರ ಜೊತೆಗೂಡಿರುವ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಶಿರಹಟ್ಟಿ, ಗದಗ, ನರಗುಂದ, ಶಿಗ್ಗಾಂವ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳು, ರೈತರ ವಿಮೆ ಹಣವನ್ನ ತಾವೇ ಭರಿಸಿ ’50-50’ಗಾಗಿ ಕಾಯತೊಡಗಿದ್ದಾರೆ.

    ಮೂರು ಜಿಲ್ಲೆಯ ಸಾವಿರಾರೂ ಹೆಕ್ಟೇರ್ ಭೂಮಿಗೆ ಹಣ ತುಂಬಿರುವ ರೈತರ ಹೆಸರು ಸಮೇತ ಕರ್ನಾಟಕವಾಯ್ಸ್. ಕಾಂ ಮಾಹಿತಿ ಲಭಿಸಿದೆ. ಕೆಲವು ಗ್ರಾಮದಲ್ಲಿ ಸಾರ್ವಜನಿಕರಿಗೆ ಹಾವು-ಮುಂಗುಸಿ ಎಂದು ತೋರಿಸಿಕೊಳ್ಳುವ ಶ್ರೀಮಂತ ರೈತರು, ವಂಚನೆ ಮಾಡಲು ಒಂದಾಗಿರುವುದು ಕಂಡು ಬರುತ್ತದೆ.

    ಈ ವಂಚನೆಯಲ್ಲಿ ಸ್ಥಳೀಯ ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗವಹಿಸಿದ್ದರಿಂದ ಗ್ರಾಮ ಸೇವಕರು, ಪಿಡಿಓಗಳ ಪಾತ್ರ ಹೆಚ್ಚಾಗಿ ಕಂಡು ಬರುತ್ತಿದೆ.

    ಈ ವಂಚನೆಯ ಭ್ರಷ್ಟಾಚಾರದಲ್ಲಿ ಓರ್ವ ಬಿಎಎಂಎಸ್ ಎಂಡಿ ಮಾಡಿರುವ ವೈದ್ಯನೋರ್ವ ತನ್ನ ಕರ್ತವ್ಯ ಮರೆತು, ವಂಚನೆಯ ಕೇಂದ್ರ ಬಿಂದುವಾಗಿದ್ದಾನೆ. ಆತನ ಬಗ್ಗೆಯೂ ‘ಕೆವಿ’ ವಿವರವನ್ನ ಬಹಿರಂಗ ಮಾಡಲಿದೆ.

  • ಧಾರವಾಡ ಗ್ರಾಮೀಣ “ಧಣಿ”ಯ ಪಾದಯಾತ್ರೆ ಆರಂಭ- ಸಾಥ್ ನೀಡಿದ ಜನಸಾಗರ…!!!

    ಧಾರವಾಡ ಗ್ರಾಮೀಣ “ಧಣಿ”ಯ ಪಾದಯಾತ್ರೆ ಆರಂಭ- ಸಾಥ್ ನೀಡಿದ ಜನಸಾಗರ…!!!

    ಧಾರವಾಡ: ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಇಂದಿನಿಂದ ಉಳವಿ ಪಾದಯಾತ್ರೆ ಆರಂಭಿಸಿದ್ದು, ಸಾವಿರಾರೂ ಸಂಖ್ಯೆಯಲ್ಲಿ ಅಭಿಮಾನಿಗಳು ಸಾಥ್ ನೀಡಿದರು.

    ಹುಟ್ಟೂರು ಹಂಗರಕಿಯಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಅಮೃತ ದೇಸಾಯಿಯವರ ಧರ್ಮಪತ್ನಿಯೂ ಭಾಗವಹಿಸಿದ್ದು, ಜನರು ಓಂ ನಮಃ ಶಿವಾಯದ ಮೂಲಕ ಪಾದಯಾತ್ರೆಯಲ್ಲಿ ಭಾಗವಹಿಸಿದರು.

    ವೀಡಿಯೋ…

    ಗರಗದ ಶ್ರೀ ಮಡಿವಾಳೇಶ್ವರ ಗದ್ದುಗೆಯ ಆಶೀರ್ವಾದ ಪಡೆದ ಅಮೃತ ದೇಸಾಯಿಯವರಿಗೆ ಹಲವು ಮಠದ ಶ್ರೀಗಳು, ಶುಭ ಕೋರಿದರು. ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ನವನಗರದಲ್ಲಿ “ಅಟ್ಟಹಾಸ ಮೆರೆದ” ವಿಜಯಕುಮಾರ ಅಪ್ಪಾಜಿ- ಸಿಸಿಟಿವಿ ದೃಶ್ಯಗಳು ವೈರಲ್….

    ನವನಗರದಲ್ಲಿ “ಅಟ್ಟಹಾಸ ಮೆರೆದ” ವಿಜಯಕುಮಾರ ಅಪ್ಪಾಜಿ- ಸಿಸಿಟಿವಿ ದೃಶ್ಯಗಳು ವೈರಲ್….

    ಹುಬ್ಬಳ್ಳಿ: ತನ್ನ ಮಗನ ಕಟಿಂಗ್ ಮಾಡುವ ಸಂಬಂಧವಾಗಿ ಸಲೂನ್‌ದಲ್ಲಿನ ಮೂವರನ್ನ ನವನಗರದ ಪ್ರಮುಖ ವ್ಯಕ್ತಿಯೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

    ಕಳೆದ ತಿಂಗಳಷ್ಟೇ ಪೊಲೀಸ್ ಕಮೀಷನರ್ ಸಮೇತ ಬಹುತೇಕ ನಾಯಕರನ್ನ ಕರೆದು ಕಾರ್ಯಕ್ರಮ ನಡೆಸಿದ್ದ ವಿಜಯಕುಮಾರ ಅಪ್ಪಾಜಿ ಎಂಬುವವರೇ, ಸಲೂನ್‌ದಲ್ಲಿನ ಕಾರ್ಮಿಕರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿರುವುದನ್ನ ಸಲೂನ್ ಮಾಲೀಕ ದೃಢಪಡಿಸಿದ್ದಾರೆ.

    ಇಲ್ಲಿದೆ ನೋಡಿ ಹಲ್ಲೆಯ ವೀಡಿಯೋ…

    https://youtube.com/shorts/Qf3p_eDBEgc?si=18OSFyrzZSxbSquV

    ಇಷ್ಟೊಂದು ಅಮಾನವೀಯ ಘಟನೆ ಪೊಲೀಸ್ ಕಮೀಷನರ್ ಕಚೇರಿಯ ಕೂಗಳತೆ ದೂರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ನವನಗರದ ಎಪಿಎಂಸಿ ಪೊಲೀಸ್ ಠಾಣೆಗೂ ಗೊತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಆಗಿಲ್ಕವೆಂದು ಹೇಳಲಾಗಿದೆ.

  • ಹಳೇಹುಬ್ಬಳ್ಳಿ “ಅಭಿಷೇಕ-ಸುವರ್ಣ” ಗುಸುಗುಸು- ಪಿಸುಮಾತನಾಡಿದ “ಪಲ್ಲವಿ” ಆಸ್ಪತ್ರೆ ಪಾಲು…!!!

    ಹಳೇಹುಬ್ಬಳ್ಳಿ “ಅಭಿಷೇಕ-ಸುವರ್ಣ” ಗುಸುಗುಸು- ಪಿಸುಮಾತನಾಡಿದ “ಪಲ್ಲವಿ” ಆಸ್ಪತ್ರೆ ಪಾಲು…!!!

    ಹಾಡುಹಗಲೇ ಮಹಿಳೆಯ ಕೊಲೆಗೆ ಯತ್ನ; ನಾಲ್ಕು ಜನರನ್ನು ಕಂಬಿ ಹಿಂದೆ ತಳ್ಳಿದ ಹಳೇಹುಬ್ಬಳ್ಳಿ ಠಾಣೆ ಪೊಲೀಸರು

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಬ್ಯಾಂಕರ್ಸ್ ಕಾಲೊನಿಯಲ್ಲಿ ಬುಧವಾರ ಮಧ್ಯಾಹ್ನ ಹಾಡು ಹಗಲೇ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಜನರನ್ನು ಬಂಧನ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.

    ಹೆಗ್ಗೇರಿಯ ಅಭಿಷೇಕ ಎಂಬ ಯುವಕ ಬ್ಯಾಂಕರ್ಸ್ ಕಾಲೋನಿಯಲ್ಲಿನ ಪಲ್ಲವಿ ಹಾಗೂ ಸುವರ್ಣಾ ಎಂಬ ಇಬ್ಬರು ಮಹಿಳೆಯರಿಗೆ ಫೈನಾನ್ಸ್ ಮಾಡಿದ್ದ. ಈ ನಡುವೆ ಸುವರ್ಣಾ ಎಂಬ ಮಹಿಳೆಯ ಜೊತೆ ಅಭಿಷೇಕ್ ಅತಿಯಾದ ಸಲುಗೆ ಸ್ನೇಹ ಬೆಳೆದಿತ್ತು. ಹೀಗಾಗಿ ಇವರಿಬ್ಬರ ವಿಚಾರವನ್ನು ಹಲ್ಲೆಗೊಳಗಾದ ಪಲ್ಲವಿ, ಸುವರ್ಣಾಳ ಮನೆಯವರಿಗೆ ತಿಳಿಸಿದ್ದಳು.

    ವೀಡಿಯೋ… ಎಕ್ಸಕ್ಲೂಸಿವ್…

    ಹೀಗಾಗಿ ಸುವರ್ಣಾಳ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗಿ ಗಲಾಟೆಯಾಗಿತ್ತು. ಇದೇ ಕಾರಣದಿಂದ ಪಲ್ಲವಿಗೆ ಬುದ್ದಿ ಕಲಿಸಬೇಕು ಎಂದು ಸುವರ್ಣಾ ಹಾಗೂ ಅಭಿಷೇಕ್ ಪ್ಲ್ಯಾನ್ ಮಾಡಿದ್ದರು. ಅಭಿಷೇಕ್ ತನ್ನ ಇಬ್ಬರು ಸ್ನೇಹಿತರಾದ ಅಭಿಷೇಕ ಹಾಗೂ ಪ್ರಜ್ವಲ್ ಎಂಬುವರಿಂದ ಮಚ್ಚನ್ನು ತರಿಸಿದ್ದ ಎಂಬ ಮಾಹಿತಿ ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲವನ್ನು ಪಡೆದುಕೊಂಡಿದ್ದ ಪಲ್ಲವಿ ಎಂಬ ಮಹಿಳೆ ತಣ್ಣಗೆ ಇರೋದು ಬಿಟ್ಟು, ಅವರಿಬ್ಬರ ವಿಚಾರದ ಬಗ್ಗೆ ಬಾಯ್ಬಿಟ್ಟ ತಪ್ಪಿಗೆ ಆಸ್ಪತ್ರೆ ಪಾಲಾದ್ರೆ, ಈತ್ತ ಸಿಟ್ಟಿನ ಭರದಲ್ಲಿ ಕೊಲೆ ಮಾಡಲು ಯತ್ನಿಸಿದ ಅಭಿಷೇಕ ತನ್ನ ಗೆಳತಿ ಹಾಗೂ ಗೆಳೆಯರ ಜೊತೆ ಜೈಲು ಪಾಲಾಗಿದ್ದಾನೆ.

  • “ಬೆಳೆವಿಮೆ ಪರಿಹಾರ 50-50”- ಮಾಜಿ ಶಾಸಕರ ಬೆಂಬಲಿಗನೇ ಕಿಂಗ್‌ಪಿನ್… ಶ್ರೀಮಂತ ರೈತರ ಮೋಸದಾಟ…!!!

    “ಬೆಳೆವಿಮೆ ಪರಿಹಾರ 50-50”- ಮಾಜಿ ಶಾಸಕರ ಬೆಂಬಲಿಗನೇ ಕಿಂಗ್‌ಪಿನ್… ಶ್ರೀಮಂತ ರೈತರ ಮೋಸದಾಟ…!!!

    ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ಸಾವಿರಾರೂ ಬಡ ರೈತರಿಗೆ ಮೋಸ ಮಾಡಿ ಕೆಲ ಶ್ರೀಮಂತ ರೈತರೊಂದಿಗೆ ಶಾಮೀಲಾಗಿ ಬೆಳೆವಿಮೆ ಪರಿಹಾರವನ್ನ ’50-50′ ಮಾಡುವುದರಲ್ಲಿ ಮಾಜಿ ಶಾಸಕನ ಬೆಂಬಲಿಗನೇ ಕಿಂಗ್‌ಪಿನ್ ಎಂಬುದು ಮಾಹಿತಿಯಿಂದ ಬಹಿರಂಗವಾಗತೊಡಗಿದೆ.

    ಹೌದು… ಕರ್ನಾಟಕವಾಯ್ಸ್.ಕಾಂ ಬೆಳೆವಿಮೆ ಹಣದ ಬಗ್ಗೆ ನಡೆದಿರುವ ವಂಚನೆಯನ್ನ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ ಹಾಗೇ ಇದರ ಇಂದಿನ ರೂವಾರಿಯಾಗಿರುವ ಮಾಜಿ ಶಾಸಕನ ಬೆಂಬಲಿಗ ‘ದಾಡಿ’ ಕೆರೆದುಕೊಂಡು ಗದಗ ಸುತ್ತಮುತ್ತಲೂ ಅಲೆದಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.

    ಕೆಲ ಶ್ರೀಮಂತರು ಕೂಡಾ ಈತನೊಂದಿಗೆ ಹಣವನ್ನ ಹಾಕಿದ್ದು, ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಬಡ ರೈತರ ಶಾಪ ಇವರನ್ನ ಬಿಡಲ್ಲ ಎಂಬುದು ವಂಚಕರಿಗೆ ಅರ್ಥವಾಗಬೇಕಿದೆ. ಕೆಲ ಶ್ರೀಮಂತ ರೈತರು ತಾವೂ ಹಾಕಿರುವ ಹಣವಾದರೂ ಮರಳಿ ಬರಲಿ ಎಂದು ಹುಬ್ಬಳ್ಳಿ ತಾಲೂಕಿನ ದೇವರ ಮೊರೆ ಹೋಗಿದ್ದಾರೆ.

    ಕಿಂಗ್‌ಪಿನ್ ವ್ಯಕ್ತಿಯ ವಯಕ್ತಿಕ ಜೀವನದಲ್ಲಿ ಈಗಾಗಲೇ ಬಿರುಗಾಳಿ ಎದ್ದಿದೆ. ಇರುವ ನೂರಾರು ಎಕರೆ ಜಮೀನು ಎರಡನೇಯ ಹೆಂಡತಿ ಹೊಡೆಯುವ ಉಮೇದಿಯಲ್ಲಿದ್ದಾಳೆ. ಪಾಪಿ ಪೀಡ ಪರದೇಶಿ ಪಾಲು ಎಂಬತಾಗಿದೆ.

    ಬೆಳೆವಿಮೆ ಪರಿಹಾರವನ್ನ ರೈತರ ಅಕೌಂಟಿಗೆ ಬಂದ ತಕ್ಷಣವೇ ಹಣ ಪಡೆಯುವ ಹುನ್ನಾರದ ಪ್ರತಿಯೊಂದು ಮಾಹಿತಿಯನ್ನ ಅಖಂಡ ಧಾರವಾಡ ಜಿಲ್ಲೆಯ ಮೂವರು ಜಿಲ್ಲಾ ಉಸ್ತುವಾರಿ ಸಚಿವರು ಪಡೆದುಕೊಂಡಿರುವುದು ಖಾತ್ರಿಯಾಗಿದೆ.

  • ಪಂಚಮಸಾಲಿ ಹೋರಾಟ: 23 ಜನರ ಮೇಲೆ “ಗಂಭೀರ ಪ್ರಕರಣ” ದಾಖಲು….

    ಪಂಚಮಸಾಲಿ ಹೋರಾಟ: 23 ಜನರ ಮೇಲೆ “ಗಂಭೀರ ಪ್ರಕರಣ” ದಾಖಲು….

    ಬೆಳಗಾವಿ: ಪಂಚಮಸಾಲಿ ಹೋರಾಟದ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪದ ಕೇಸ್ ದಾಖಲು ಮಾಡಲಾಗಿದೆ.


    ಪಂಚಮಸಾಲಿ ಮೀಸಲಾತಿ ಹೋರಾಟದ 23 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸುವರ್ಣಸೌಧಕ್ಕೆ ಮುತ್ತಿಗೆ ಯತ್ನಕ್ಕೆ ಜನರಿಗೆ ಪ್ರಚೋದನೆ, ಬಳಿಕ ರಾಷ್ಟ್ರೀಯ ಹೆದ್ದಾರಿ ಬಳಿ ಹಾಕಿ ಬ್ಯಾರಿಕೇಡ್ ತಳ್ಳಿ ಗಲಾಟೆ, ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಗಲಭೆ, ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಜಖಂಗೆ ಸಂಬಂಧಿಸಿದಂತೆ ವಿವಿಧ ಕಲಂನಲ್ಲಿ ಹೋರಾಟಗಾರರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

    ಬಿಎನ್‌ಎಸ್ ಅಡಿಯಲ್ಲಿ ಒಟ್ಟು ಹನ್ನೊಂದು ಕಲಂಗಳನ್ನ ಹಾಕಿ ಪ್ರಕರಣ ದಾಖಲು ಮಾಡಲಾಗಿದೆ.

     

  • “2A ಮೀಸಲಾತಿ ಹೋರಾಟ” ರಣಾಂಗಣವಾದ ‘NH-4’- ಯತ್ನಾಳ, ಮುನೇನಕೊಪ್ಪ, ಬೆಲ್ಲದ ಸೇರಿ ಹಲವರು ಪೊಲೀಸ್ ವಶಕ್ಕೆ…!!!!

    “2A ಮೀಸಲಾತಿ ಹೋರಾಟ” ರಣಾಂಗಣವಾದ ‘NH-4’- ಯತ್ನಾಳ, ಮುನೇನಕೊಪ್ಪ, ಬೆಲ್ಲದ ಸೇರಿ ಹಲವರು ಪೊಲೀಸ್ ವಶಕ್ಕೆ…!!!!

    ಬೆಳಗಾವಿ: 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ಹೋದ ಪರಿಣಾಮ, ಸುವರ್ಣಸೌಧದ ಮುಂಭಾಗ ರಣಾಂಗಣ ನಿರ್ಮಾಣವಾಗಿದ್ದು, ಹಲವರನ್ನ ಪೊಲೀಸರು ಬಂಧಿಸಿದ್ದಾರೆ.

    ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…

    ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು, ಅವರುಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿಯೇ  ಹಿರಿಯ ದಲಿತ ಅಧಿಕಾರಿಗೆ  ಅಪಮಾನ…!!!

    ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿಯೇ ಹಿರಿಯ ದಲಿತ ಅಧಿಕಾರಿಗೆ ಅಪಮಾನ…!!!

    ಧಾರವಾಡ: ಡಾ.ಬಿ.ಕೆ.ಎಸ್. ವರ್ಧನ, ನಿರ್ದೇಶಕರು, ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್)ಕರ್ನಾಟಕ, ಧಾರವಾಡ ಇಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಅಪರ ಆಯುಕ್ತರ ಕಚೇರಿಯೂ, ಇದೇ ಡಯಟ್ ಆವರಣ, ಧಾರವಾಡದಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಈ ಅಪರ ಆಯುಕ್ತರ ಕಚೇರಿ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿದೆ.


    ಈಗ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಹುದ್ದೆಯು ಕಳೆದ ಹಲವಾರು ತಿಂಗಳುಗಳಿಂದ ಖಾಲಿಯಿದ್ದು ಹಿರಿಯ ಅಧಿಕಾರಿಯಾದ, ಇದೇ ಆವರಣದಲ್ಲಿರುವ ರಾಜ್ಯ ಮಟ್ಟದ, ಇಲಾಖಾ ಹುದ್ದೆಯ ಸಮಾನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಬಿ.ಕೆ.ಎಸ್. ವರ್ಧನ, ಇವರ ಸೇವಾ ಜೇಷ್ಟತೆ ಕಡೆಗಣಿಸಿ ಈ ಹುದ್ದೆಯಲ್ಲಿ ಈಶ್ವರ.ಹೆಚ್. ನಾಯ್ಕ ಎಂಬ ಜೂನಿಯರ್ ಅಧಿಕಾರಿಗೆ ನಿರ್ದೇಶನ ಹುದ್ದೆಯ ಪ್ರಭಾರ ವಹಿಸಲಾಗಿದೆ.


    ಈಗ ಒಬ್ಬ ಪರಿಶಿಷ್ಟ ಜಾತಿಯ ಹಿರಿಯ ಅಧಿಕಾರಿಗೆ ಅಪರ ಆಯುಕ್ತರು ಆಯುಕ್ತರಾದ ಜಯಶ್ರೀ ಶಿಂತ್ರಿ ಇವರು ಅಪಮಾನ ಮಾಡುವುದರ ಜೊತೆಗೆ ಅವರ ಕಚೇರಿಯ ಸಹ ನಿರ್ದೇಶಕ ಈಶ್ವರ ನಾಯಕ ಅವರು ಈಗ ಸಿಸ್ಲೆಪ್ ನಿರ್ದೇಶಕರಾದ ಡಾ.ವರ್ಧನ ಇವರಿಗೆ ನಿಯಮಬಾಹಿರವಾಗಿ “ಜ್ಞಾಪನ” ಹೊರಡಿಸಿ ಆಡಳಿತ ದುರುಪಯೋಗ ಹಾಗೂ ಇಲಾಖೆಯ ಶಿಷ್ಟಾಚಾರ ಮುರಿದು ಹಾಕಿದ್ದಾರೆ. ಈ ರೀತಿ ಆಡಳಿತಾತ್ಮಕವಾಗಿ ಅನನುಭವಿ ಅಧಿಕಾರಿಯು ಹಿರಿಯ ಅಧಿಕಾರಿಗೆ ಜ್ಞಾಪನ ನೀಡುವುದು ಶಾಲಾ ಶಿಕ್ಷಣ ಇಲಾಖೆಯ ಅವ್ಯವಸ್ಥೆಯನ್ನು ಕಣ್ಣಿಗೆ ರಾಚುವಂತೆ ಎತ್ತಿ ತೋರಿಸುತ್ತದೆ.


    ಆಡಳಿತಾತ್ಮಕ ಶಿಸ್ತು ಮೂಡಿಸಲು ಮಾದರಿಯಾಗಬೇಕಾದ ಅಧಿಕಾರಿಯೇ ತನ್ನ ಇಲಾಖೆಯ ಮೇಲಾಧಿಕಾರಿಗೆ ಜ್ಞಾಪನ ನೀಡುವ ಮೂಲಕ ಅಪಮಾನ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆದರೆ, ಶಾಲಾ ಮುಖ್ಯ ಶಿಕ್ಷಕರು ಡಿಡಿಪಿಐ ಗೆ ಜ್ಞಾಪನ ಪತ್ರ ನೀಡುವ ಪರಿಪಾಟವೂ ಬೆಳೆಯಬಹುದು.
    ಬೆಳಗಾವಿ ವಿಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪರಿಶ್ರಮ ವಹಿಸಬೇಕಾದ ಅಪರ ಆಯುಕ್ತರು ತಮಗೆ ತಿಳಿದಂತೆ ಕಡತ ವಿಲೇವಾರಿ ಮಾಡುವ ಕೆಲಸದಲ್ಲಿ ಇದ್ದು ಪಕ್ಕದ ಕಟ್ಟಡಲ್ಲೇ ಇರುವ ಹಿರಿಯ ನಿರ್ದೇಶಕರಾದ ಡಾ.ವರ್ಧನ ಇವರಿಗೆ ಅಪರ ಆಯುಕ್ತಾಲಯದ ನಿರ್ದೇಶಕ ಹುದ್ದೆಯ ಪ್ರಭಾರ ವಹಿಸಿ ಹಿರಿಯ ಅಧಿಕಾರಿಯಿಂದ ವಿಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸಹಭಾಗಿತ್ವ ಪಡೆಯಬೇಕೆ ಹೊರತು ಈ ರೀತಿ ಆಡಳಿತಾತ್ಮಕ ಅಶಿಸ್ತಿನಿಂದ ವರ್ತಿಸುವ ಈಶ್ವರ ನಾಯ್ಕ ಅವರಿಗೆ ಶಾಸಕರೊಬ್ಬರ ದೂರದ ಸಂಬಂಧಿ ಎಂಬ ಕಾರಣದಿಂದ ಉನ್ನತ ಹುದ್ದೆಯ ಪ್ರಭಾರ ವಹಿಸಬಾರದು.
    ಇದು ಒಬ್ಬ ಪರಿಶಿಷ್ಟ ಅಧಿಕಾರಿಗೆ ಮಾಡಿದ ಅಪಮಾನ, ಅನ್ಯಾಯ ಹಾಗೂ ಅಶಿಸ್ತಿನ ಬೆಳವಣಿಗೆಯಾಗಿದೆ .
    ಗೆಳತಿಯರೊಂದಿಗೆ ಹಾರೋಣ ಎಂಬ ಹೊಸ ಕಾರ್ಯಕ್ರಮ ತಂದಿರುವ ಶಾಲಾ ಶಿಕ್ಷಣ ಸಚಿವರು ಅಪರ ಆಯುಕ್ತರ ದುರಾಡಳಿತ, ಸಹ ನಿರ್ದೇಶಕ ಆಡಳಿತ ಇವರ ಅಹಂಕಾರ ಹಾರಾಟ ನಿಲ್ಲಿಸಲು ಮುಂದಾಗುವರೇ?!.
    ಈ ಮೊದಲು ಧಾರವಾಡ ಜಿಲ್ಲೆಯು ಶೈಕ್ಷಣಿಕ ಕಾಶಿ ಎಂದು ಪ್ರಸಿದ್ಧವಾಗಿತ್ತು ,ಆದರೆ ಅನನುಭವಿ ಉಪನಿರ್ದೇಶಕರು, ಆಡಳಿತಾತ್ಮಕ ಜ್ಞಾನ ಇಲ್ಲದ ಸಹ ನಿರ್ದೇಶಕರು ,ಆಡಳಿತ, ಸೂಕ್ತ ಮೇಲ್ವಿಚಾರಣಾ ಕುಶಲತೆ ಇಲ್ಲದ ಅಪರ ಆಯುಕ್ತರು ವಿಭಾಗದ ಶಿಕ್ಷಣದ ಅಧೋಗತಿಗೆ ಕಾರಣರಾಗಿದ್ದಾರೆ.
    ಹಿರಿಯ ಅಧಿಕಾರಿಗೆ ಜ್ಞಾಪನ ನೀಡಿ ಅಪಮಾನ ಮಾಡಿದ ಸಹ ನಿರ್ದೇಶಕ ಹುದ್ದೆಯಲ್ಲಿರುವ ಈಶ್ವರ ನಾಯ್ಕ ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಅವರನ್ನು ನಿರ್ದೇಶಕ ಹುದ್ದೆಯಿಂದ ಬಿಡುಗಡೆಗೊಳಿಸಿ ನಿಯಮಾನುಸಾರ ಹಿರಿಯ ಅಧಿಕಾರಿಗೆ ಪ್ರಭಾರ ವಹಿಸಲು ಮತ್ತು ಈ ಅಶಿಸ್ತಿನ ಆಡಳಿತಕ್ಕೆ ಅವಕಾಶ ನೀಡಿರುವ ಅಪರ ಆಯುಕ್ತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.
    ಅಧಿಕಾರ ವಿಕೇಂದ್ರೀಕರಣ ಕ್ಕೆ ಒತ್ತಾಯಿಸಿದ ಈ ಭಾಗದ ಜನ ಪ್ರತಿಧಿಗಳೂ ಕೂಡ ಈ ವಿಭಾಗೀಯ ಕಚೇರಿಯ ಆಡಳಿತವನ್ನು ಸರಿ ದಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕಾಗಿದೆ.
    ಅಸಂಖ್ಯಾತ ಮಕ್ಕಳು ಶಾಲೆ ಬಿಡುತ್ತಿರುವ, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನುಸಾರ ಗುಣಾತ್ಮಕ ಶಿಕ್ಷಣದಿಂದ ವಂಚಿರಾಗುತ್ತಿರುವ ಈ ಸಂದರ್ಭದಲ್ಲಿ ವಿಭಾಗದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸದಿದ್ದರೆ ಈ ಭಾಗದ ಅಭಿವೃದ್ಧಿ ನೆಲ ಕಚ್ಚುತ್ಟದೆ.