ನರೇಂದ್ರದ ಯುವಕ ಯಾದವಾಡ ರಸ್ತೆ ಬಳಿ ನೇಣಿಗೆ ಶರಣು…!!!

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ 21 ವಯಸ್ಸಿನ ಹರೆಯದ ಯುವಕನೋರ್ವ ಯಾದವಾಡ ರಸ್ತೆ ಪಕ್ಕದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನರೇಂದ್ರ ಗ್ರಾಮದ ಭೀಮಪ್ಪ ಶಂಕರಪ್ಪ ಮಸೂತಿ ಎಂಬ ಯುವಕನೇ ಸಾವಿಗೀಡಾದ ದುರ್ಧೈವಿಯಾಗಿದ್ದಾನೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದು ಬಂದಿಲ್ಲವಾಗಿದ್ದರೂ, ಯುವಕ ಅಲ್ಪಮಟ್ಟದಲ್ಲಿ ಮದ್ಯ ಸೇವಿಸುತ್ತಿದ್ದ ಎಂದು ಗೊತ್ತಾಗಿದೆ.
ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ಲಾಸ್ಟಿಕ್ ಟೇಬಲ್ ಮೂಲಕ ಹಗ್ಗು ಕಟ್ಟಿಕೊಂಡು ನೇಣು ಬಿಗಿದುಕೊಂಡಿರುವ ಕುರಿತು ಸ್ಥಳದಲ್ಲಿ ಕುರುಹುಗಳಿವೆ.