ಸಂಕನೂರಗಿಂತ ಗುರಿಕಾರ ಹೋರಾಟಗಾರ: ಬಸವರಾಜ ಹೊರಟ್ಟಿ
1 min readಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಅವರಿಗೆ ಯಾವುದೇ ಷರತ್ತು ಹಾಕದೇ ಜಾತ್ಯಾತೀತ ಜನತಾದಳ ಬೆಂಬಲ ನೀಡಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಮೊದಲಿನಿಂದಲೂ ನಾನು ಶಿಕ್ಷಕನಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ಬಸವರಾಜ ಗುರಿಕಾರ ಕೂಡಾ ಶಿಕ್ಷಕ ವರ್ಗದಿಂದಲೇ ಬಂದಿರುವುದು ಮುಂದೆ ನಮಗೆಲ್ಲ ಅನುಕೂಲವಾಗತ್ತೆ ಎಂದುಕೊಂಡು ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದ ಬಸವರಾಜ ಹೊರಟ್ಟಿ, ಮತ್ತೋಬ್ಬರನ್ನ ಟೀಕೆ ಮಾಡುವುದಕ್ಕಿಂತ ನಮ್ಮನ್ನ ನಾವೂ ನೋಡಿಕೊಳ್ಳಬೇಕಿದೆ ಎಂದರು.
ಬಿಜೆಪಿ ಅಭ್ಯರ್ಥಿ ಸಂಕನೂರಗಿಂತ ಬಸವರಾಜ ಗುರಿಕಾರ ಒಳ್ಳೆಯ ಹೋರಾಟಗಾರ. ಅವರಿಗೆ ಗೆಲವು ಲಭಿಸಿದೆ ಎಂದು ಹೊರಟ್ಟಿ ಹೇಳಿದರು.
ಇದೇ ಸಮಯದಲ್ಲಿ ಮಾತನಾಡಿದ ಬಸವರಾಜ ಗುರಿಕಾರ, ಜೆಡಿಎಸ್ ಬೇಷರತ್ತಾಗಿ ಬೆಂಬಲ ನೀಡಿದೆ. ಇದರಿಂದ ನನಗೆ ಸಾಕಷ್ಟು ಅನುಕೂಲವಾಗಿದೆ. ನಾಲ್ಕು ಜಿಲ್ಲೆಯಲ್ಲಿ ಸಾಕಷ್ಟು ಸಂಚಾರ ಮಾಡಿ ಮತಯಾಚನೆ ಮಾಡಿದ್ದು, ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ರಾಜಣ್ಣ ಕೊರವಿ, ಸಿದ್ದು ತೇಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.