Karnataka Voice

Latest Kannada News

33ವರ್ಷದ ಸರ್ಕಲ್ ಪೊಲೀಸ್ ಇನ್ಸಪೆಕ್ಟರ್ “ಚಾಲಕ ಪೊಲೀಸ್” ಹೃದಯಾಘಾತದಿಂದ ಸಾವು… CCTV ವೈರಲ್…

Spread the love

ರಾಯಚೂರು: ಜಿಲ್ಲೆಯ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯದ ವೇಳೆಯಲ್ಲೇ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೇವದುರ್ಗ ಸಿಪಿಐ ಕಾರು ಚಾಲಕ, ಹೆಡ್ ಕ್ವಾರ್ಟರ್ಸ್ ರಿಸರ್ವ್ ಪೊಲೀಸ್ (ಎಚ್‌ಆರ್‌ಪಿ) ಸಿಬ್ಬಂದಿ ರೇಣುಕಾರಾಜ್ (33) ಮೃತ ದುರ್ದೈವಿ.

​ಕರ್ತವ್ಯದ ಅವಧಿಯಲ್ಲಿ ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೇಣುಕಾರಾಜ್ ಅವರು ಅರಕೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಆಸ್ಪತ್ರೆಯ ಕುರ್ಚಿಯ ಮೇಲೆ ಕುಳಿತಿದ್ದ ಕೆಲವೇ ಕ್ಷಣಗಳಲ್ಲಿ ತೀವ್ರ ಹೃದಯಾಘಾತ ಸಂಭವಿಸಿ ಕೆಳಗೆ ಉರುಳಿ ಬಿದ್ದಿದ್ದಾರೆ. ವೈದ್ಯರು ಪರೀಕ್ಷಿಸುವಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

​ಅವರು ಕುರ್ಚಿಯಿಂದ ಕೆಳಗೆ ಬೀಳುವ ಭೀಕರ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. 33 ವರ್ಷದ ಯುವ ಪೊಲೀಸ್ ಸಿಬ್ಬಂದಿಯ ಹಠಾತ್ ಸಾವು ಇಲಾಖೆ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.


Spread the love

Leave a Reply

Your email address will not be published. Required fields are marked *