Posts Slider

Karnataka Voice

Latest Kannada News

ನವಲಗುಂದ ಚೆಂದದ ಹುಡುಗಿ ಭೀಮಾ ನದಿಗೆ ಹಾರಿದ್ಯಾಕೆ..? ಕ್ವಾಯಿನ್ ಹಾಕುವ ನೆಪದಲ್ಲಿ ಜೀವಕ್ಕೆ ಕುತ್ತು..

1 min read
Spread the love

ವಿಜಯಪುರ: ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಯುವತಿಯೋರ್ವಳು ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವಣಗಾಂವ್ ಅಫಜಲಪುರ ಮಧ್ಯದ ಬ್ರಿಡ್ಜ್ ನಲ್ಲಿ ನಡೆದಿದೆ..

ಧಾರವಾಡ ಜಿಲ್ಲೆಯ ನವಲಗುಂದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ ಎಂಬ ಯುವತಿಯೇ ನೀರಿಗೆ ಹಾರಿದ್ದು, ಶವಕ್ಕಾಗಿ ಹುಡುಕಾಟ ಆರಂಭಗೊಂಡಿದೆ. ನೀರಿನಲ್ಲಿ ಹಾರಿದ ಯುವತಿಯು, ವಿಜಯಪುರದ ಇಂಡಿ ನಿವಾಸಿಯಾಗಿರುವ ಅಕ್ಕನ ಮನೆಗೆ ಬಂದಿದ್ದರು.

ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಐಶ್ವರ್ಯ ವಾಹನ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾಳೆ. ಇನ್ನು ಹರಕೆಗೆ ತಂದಿದ್ದ ಕ್ವಾಯಿನ್(ರೊಕ್ಕ) ನದಿಗೆ ಹಾಕಲು ವಾಹನ ಇಳಿದ ಕೂಡಲೇ ಐಶ್ವರ್ಯ ಕ್ವಾಯಿನ್ ಜೊತೆಗೆ ಭೀಮಾನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗತಿ ಆಗಿದ್ದಾಳೆ.‌

ಸಣ್ಣ ವಯಸ್ಸಿನ ಐಶ್ವರ್ಯ ಮನೆಯಲ್ಲಿಯೂ ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದಳು. ಅಕ್ಕನ ಮನೆಗೆ ಹೋದಾಗಲೂ ಲವಲವಿಕೆಯಿಂದಲೇ ಇದ್ದಳು. ಆದರೆ, ಇನ್ನೂ ದೂರದ ಕಲಬುರಗಿ ಹೋಗಬೇಕಾಗಿದ್ದರಿಂದ ಯಾರೂ ಇಂತಹ ನಿರೀಕ್ಷೆ ಮಾಡಿರಲಿಲ್ಲ. ಸಡನ್ನಾಗಿ ಈ ಘಟನೆ ನಡೆದಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಶವಕ್ಕಾಗಿ ಹುಡುಕಾಟ ನಡೆದಿದೆ.


Spread the love

Leave a Reply

Your email address will not be published. Required fields are marked *