Category: ನಮ್ಮೂರು

  • ಧಾರವಾಡದಲ್ಲಿ ವಿಕಲಚೇತನರಿಂದ ಬೇಡಿಕೆ ಈಡೀರಿಕೆಗಾಗಿ ಪ್ರತಿಭಟನೆ..!

    ಧಾರವಾಡ: ತಮ್ಮ ಹಲವು ಬೇಡಿಕೆಗಳನ್ನ ರಾಜ್ಯ ಸರಕಾರ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನದ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪನರ್ವಸತಿ ಕಾರ್ಯಕರ್ತರ ಒಕ್ಕೂಟ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿತು.

    ಪ್ರತಿಭಟನೆಯ ವೀಡಿಯೋ ಇಲ್ಲಿದೆ ನೋಡಿ…

    ಧಾರವಾಡ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ವಿಕಲಚೇತನರು, ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

    ವಿವಿದೋದ್ದೇಶ ಗ್ರಾಮೀಣ ಮತ್ತು ನಗರ ಪನರ್ವಸತಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ ಡಬ್ಲೂ ಅವರನ್ನ ತಾಲೂಕ ಅಂಗವಿಕಲ ಅಧಿಕಾರಿಯನ್ನಾಗಿ ವಿಆರ್ ಡಬ್ಲೂ ಅವರನ್ನ ಗ್ರಾಮ ಮಟ್ಟದ ಅಭಿವೃದ್ಧಿ ಸಹಾಯಕರನ್ನಾಗಿ ಹಾಗೂ ಯುಆರ್ ಡಬ್ಲೂ ರವರನ್ನ ನಗರ ವಿಕಲಚೇತನರ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನ ಸೃಷ್ಟಿಸಿ ಖಾಯಂಗೊಳಿಸಬೇಕೆಂದು ಆಗ್ರಹಿಸಿದರು.

    ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಬೆಳಾರದ, ರಾಜ್ಯ ನಿರ್ದೇಶಕ ರವೀಂದ್ರ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಸರೋಜ ಮಾವಿನಕಾಯಿ, ಜಿಲ್ಲಾ ಕಾರ್ಯದರ್ಶಿ  ಶಿದ್ದನಗೌಡ ಜೀವನಗೌಡ್ರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

  • ಯೂಥ್ ಕಾಂಗ್ರೆಸ್: ಇಮ್ರಾನ ಯಲಿಗಾರ- ವಿನೋದ ಅಸೂಟಿ ಗೆಲುವು

    ಬೆಂಗಳೂರು: ರಾಜ್ಯದಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಕೊನೆಗೂ ಪ್ರಕಟಗೊಂಡಿದ್ದು ಹುಬ್ಬಳ್ಳಿ-ಧಾರವಾಡ ಶಹರ ಯುವ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಇಮ್ರಾನ ಯಲಿಗಾರ ಹಾಗೂ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ವಿನೋದ ಅಸೂಟಿ ಆಯ್ಕೆಯಾಗಿದ್ದಾರೆ.

    ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಕೊನೆಗೂ ಹಳಬರೇ ಮತ್ತೆ ಗೆಲುವು ಸಾಧಿಸಿದ್ದು, ಕೆಲವರಿಗೆ ಸಾಕಷ್ಟು ನೋವನ್ನುಂಟು ಮಾಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

    ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ವಿನೋದ ಅಸೂಟಿ 2469 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ. ನವೀನ ಸೋನಾರ ಕೇವಲ 442 ಮತಗಳನ್ನ ಪಡೆದಿದ್ದು, ಮತ್ತೋರ್ವ ದೇವರಾಜ ಪರಸಪ್ಪನವರ 33 ಮತಗಳನ್ನ ಪಡೆದು ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

    ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇಮ್ರಾನ ಯಲಿಗಾರ ಅತ್ಯಧಿಕ 2652 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ. ಎದುರಾಳಿ ಚೈತನ್ಯ ಬಿಜವಾಡ ಕೇವಲ 1307 ಮತಗಳನ್ನ ಪಡೆದು ಹೀನಾಯವಾಗಿ ಸೋತಿದ್ದಾರೆ. ಇನ್ನುಳಿದಂತೆ ಫಾರೂಕ ಕಾಲೆಬುಡ್ಡೆ 179, ಆತ್ಮಾನಂದ ತಳವಾರ 168, ಶ್ರೇಯಾ ಹಿರೇಕೆರೂರ 68, ಅಬ್ದುಲಖಾದರ ಸಾವಂತನವರ 62, ಸದಾನಂದ ಕುಲಕರ್ಣಿ 32, ಸಂಗಮೇಶ ಕ್ಯಾತಣ್ಣನವರ 21, ಪೂರ್ಣಿಮಾ ಸವದತ್ತಿ 9 ಹಾಗೂ ಮೇಘನಾ ಗೊರವನಕೊಳ್ಳ 7 ಮತಗಳನ್ನ ಪಡೆದಿದ್ದಾರೆ.

  • ಮಿಶನ್ ಮೋದಿ ಕಾರ್ಯಾಧ್ಯಕ್ಷರಾಗಿ ಶೆಟ್ಟರ್

    ಹುಬ್ಬಳ್ಳಿ: ಡೆಮೊಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್‌ನ ’ಮಿಶನ್ ಮೋದಿ’  ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರಾಗಿ ನಗರದ ಹಿರಿಯ ಮುಖಂಡ ವೀರಣ್ಣ ಶೆಟ್ಟರ್ ನೇಮಕಗೊಂಡಿದ್ದಾರೆ.

    ಈ ನೇಮಕವನ್ನು ರಾಷ್ಟ್ರೀಯ ಅಧ್ಯಕ್ಷ ರಾಮಗೋಪಾಲ ಕಾಕಾ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೀತಿಯನ್ನು ಉಜ್ವಲಗೊಳಿಸಲು ಹಾಗೂ ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪವನ್ನು ’ಮಿಶನ್ ಮೋದಿ’ ಹೊಂದಿದ್ದು ತಮಗೆ ನೀಡಿರುವ  ಮಹತ್ವದ ಜವಾಬ್ದಾರಿಯನ್ನು ರಾಜ್ಯಾದ್ಯಂತ ರಾಜ್ಯಾಧ್ಯಕ್ಷ ಜಿ.ಕೆ.ಕುಲಕರ್ಣಿ ಹಾಗೂ ಇತರ ಪದಾಧಿಕಾರಿಗಳ ಜತೆ ಸಂಚರಿಸಿ ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಶೆಟ್ಟರ್ ಹೇಳಿದ್ದಾರೆ.

  • ಶಿವಳ್ಳಿ ಗ್ರಾಮ ಪಂಚಾಯತಿ “ಕೈ” ಪಾಲು..!

    ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿದಂತಾಗಿದೆ.

    ಶಿವಳ್ಳಿ ಗ್ರಾಮದ ಮೂರನೇಯ ವಾರ್ಡಿನಲ್ಲಿ ಜಯ ಗಳಿಸಿದ ವಿಜಯಮಹಾಂತೇಶ ಶಿವಲಿಂಗಯ್ಯ ವಸ್ತ್ರದ ಅವರು ಅಧ್ಯಕ್ಷರಾಗಿಯೂ, ಉಪಾಧ್ಯಕ್ಷರಾಗಿ ಶಂಕರೆವ್ವ ಈಶ್ವರಪ್ಪ  ಸಣ್ಣಮುದ್ದಿಯವರು ಅವಿರೋಧವಾಗಿ ಆಯ್ಕೆಯಾದರು.

    ಶಿವಳ್ಳಿ ಪಂಚಾಯತಿಯಲ್ಲಿ ಒಟ್ಟು ಒಂಬತ್ತು ಸದಸ್ಯರ ಬಲ ಹೊಂದಿದ್ದು, ಅತೀ ಹೆಚ್ಚು ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದಾರೆ. ಕಳೆದ ಬಾರಿಯೂ ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ವಿಜಯ ಮಹಾಂತೇಶ ವಸ್ತ್ರದ ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಶಿವಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ರವಿ.ಎಸ್.ಅರಸಿಕೇರಿ ಕಾರ್ಯನಿರ್ವಹಿಸಿದರು. ಪಿಡಿಓ ಖಲೀಲಅಹ್ಮದ ಹಾವೇರಿಪೇಟೆ ಸೇರಿದಂತೆ ಇನ್ನುಳಿದ ಸದಸ್ಯರು, ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಮಾಜಿ ಸಚಿವ ವಿನಯ ಕುಲಕರ್ಣಿ-ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನ ವಿಸ್ತರಣೆ..!

    ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಮಾವನವರಾದ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನವನ್ನ ಮತ್ತೆ ಹದಿನಾಲ್ಕು ದಿನಗಳವರೆಗೆ ಮುಂದೂಡಿ ಆದೇಶ ಮಾಡಲಾಗಿದೆ.

    ನವೆಂಬರ್ 5ರಂದು ಬಂಧನವಾಗಿರುವ ವಿನಯ ಕುಲಕರ್ಣಿ ಹಾಗೂ ಕೆಲವು ದಿನಗಳ ಹಿಂದೆ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಚಂದ್ರಶೇಖರ ಇಂಡಿಯವರನ್ನ ಕಾರಾಗೃಹದಲ್ಲಿ ಇಡಲಾಗಿದ್ದು, ಇಂದು ಮತ್ತೆ 14 ದಿನದ ನ್ಯಾಯಾಂಗ ಬಂಧನವನ್ನ ಮುಂದೂಡಿ ಆದೇಶಿಸಲಾಗಿದೆ.

    ಧಾರವಾಡ ಜಿಲ್ಲೆಯ ಮೂರನೇಯ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಗಂಗಾಧರ ಅವರು ಇಂದು  ಆದೇಶ ನೀಡಿದ್ದಾರೆ. ಈ ಆದೇಶದಿಂದ ಮತ್ತೆ ಫೆಬ್ರುವರಿ 19ರ ವರೆಗೆ ನ್ಯಾಯಾಂಗ ಬಂಧನ ಮುಂದುವರಿದೆ.

    ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಗ್ಗೆ ಈಗಾಗಲೇ ಸಿಬಿಐ ಜಾರ್ಜಸೀಟ್ ಸಲ್ಲಿಕೆ ಮಾಡಿದ್ದು, ಜಾರ್ಜಸೀಟಿನಲ್ಲಿ ಯಾವ ಯಾವ ಅಂಶಗಳನ್ನ ದಾಖಲು ಮಾಡಲಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

  • ಹುಬ್ಬಳ್ಳಿ ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿರುವುದೇನು…!

    ಹುಬ್ಬಳ್ಳಿ: ಗಬ್ಬೂರು ಬೈಪಾಸ್ ಬಳಿಯಲ್ಲಿರುವ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ವಿನೂತನವಾದ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಲಾಗಿತ್ತು.

    ವೀಡಿಯೋ ಇದೆ ನೋಡಿ..

    32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಕಣ್ಣಿನ ತಪಾಸಣೆಯನ್ನ ಮಾಡಿಸುವ ಕಾರ್ಯಕ್ರಮಕ್ಕೆ ಡಾ.ಅಗರವಾಲ್ ಐ ಹಾಸ್ಪಿಟಲ್ ಸಹಯೋಗ ನೀಡಿತ್ತು.

    ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಹಲವು ಚಾಲಕರಿಗೂ ನೇತ್ರ ತಪಾಸಣೆ ಮಾಡುವ ಮೂಲಕ ವಿಭಿನ್ನವಾಗಿ ರಸ್ತೆ ಸುರಕ್ಷತಾ ಮಾಸಾಚರಣೆಯನ್ನ ನಡೆಸಲು ಅಪ್ಪಯ್ಯ ನಾಲ್ವತವಾಡಮಠ ಅವರು ಮುಂದಾಗಿದ್ದರು.

    ದೇಹದ ಹಲವು ಭಾಗಗಳಿಗೆ ಎಷ್ಟು ಪ್ರಾಮುಖ್ಯತೆ ಇದೇಯೋ ಅದೇಲ್ಲವಕ್ಕೂ ಕಳಶವಿಟ್ಟಂತೆ ಕಣ್ಣಿನ ತಪಾಸಣೆ ಮಾಡುವುದು ಮುಖ್ಯ. ಇಂತಹ ಕಾರ್ಯಕ್ರಮಕ್ಕೆ ಸಪೋರ್ಟ್ ನೀಡಿದ ಎಲ್ಲರಿಗೂ ಧನ್ಯವಾದವನ್ನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.

    ಪ್ರಾದೇಶಿಕ ಕಚೇರಿಯ ಅಧಿಕಾರಿಗಳಾದ ವೈ.ಎನ್.ಮಸರಕಲ್ಲ, ವಿನಾಯಕ ನಾಯಕ, ಕಪ್ಪರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • 10ಲಕ್ಷ ಸಾಲದ ಮದುವೆ-ಕೈ ಕೊಟ್ಟ ಹೆಂಡತಿ: ಪತಿರಾಯ ಲುಂಗಿಯಿಂದ ನೇಣಿಗೆ ಶರಣು..!

    ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮರವೊಂದಕ್ಕೆ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಹಳ್ಳಿಕೇರಿ ಗ್ರಾಮದ ಹನುಮರೆಡ್ಡಿ ಪ್ರಹ್ಲಾದರೆಡ್ಡಿ ಜಕರೆಡ್ಡಿ ಎಂಬಾತನೇ ನೇಣಿಗೆ ಶರಣಾಗಿದ್ದಾನೆ. ತಾನು ಮದುವೆ ಮಾಡಿಕೊಳ್ಳುವಾಗ 10 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಆದರೂ, ಹೆಂಡತಿಯೊಂದಿಗೆ ಸಾಂಸಾರಿಕ ಜೀವನ ನಡೆಸಲು ಆಗಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗಿದೆ.

    35 ವಯಸ್ಸಿನ ಹನುಮರೆಡ್ಡಿ ಮಡದಿಯ ಸಂಬಂಧವಾಗಿ ತೀರಾ ಮನಸ್ಸಿಗೆ ಹಚ್ಚಿಕೊಂಡಿದ್ದ. ತನ್ನ ಪತ್ನಿಯ ಜೊತೆಗೆ ಜೀವನ ನಡೆಸಲು ಆಗಲಿಲ್ಲವೆಂಬ ಕೊರಗು ಆತನನ್ನ ಪದೇ ಪದೇ ಕಾಡುತ್ತಿತ್ತು. ಇದೇ ಕಾರಣಕ್ಕೆ ತನ್ನದೇ ಹೊಲದಲ್ಲಿನ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.

    ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.

  • ಕೊಚ್ಚಿಕೊಂಡೋದ ಧಾರವಾಡದ ಗಾಂಧಿನಗರ ರಸ್ತೆ: ಪೊಲೀಸರಿಲ್ಲದಿದ್ದರೇ…!

    https://www.youtube.com/watch?v=evZGxQ2B_9c

    ಧಾರವಾಡ: ನಗರಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಪೈಪೊಂದು ಒಡೆದ ಪರಿಣಾಮವಾಗಿ ಧಾರವಾಡ ಗಾಂಧಿನಗರದ ಪ್ರಮುಖ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಸಂಚಾರಿ ಠಾಣೆ ಪೊಲೀಸರು ಇಲ್ಲದಿದ್ದರೇ ದೊಡ್ಡದೊಂದು ಅವಘಡವೇ ಸಂಭವಿಸುತ್ತಿತ್ತು.

    ಕಳೆದ ರಾತ್ರಿ ಒಂದೂವರೆ ಸುಮಾರಿಗೆ ಮುಖ್ಯ ಪೈಪ್ ಒಡೆದು ನೀರೆಲ್ಲ ರಸ್ತೆಗೆ ಬಂದು ಗಾಂಧಿನಗರದ ಬಳಿ ಚಿಕ್ಕದೊಂದು ಕೆರೆಯ ನಿರ್ಮಾಣವಾಗಿತ್ತು. ರಭಸವಾಗಿ ನೀರು ಹರಿಯುತ್ತಿದ್ದರಿಂದ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸದ ಸ್ಥಿತಿ ನಿರ್ಮಾಣವಾಗಿತ್ತು.

    ಇದೇ ಕಾರಣದಿಂದ ಸಂಚಾರಿ ಠಾಣೆಯ ಪೊಲೀಸರು, ಸಂಚಾರಿ ಠಾಣೆಯ ಇನ್ಸೆಪೆಕ್ಟರ್ ಮಲ್ಲನಗೌಡ ನಾಯ್ಕರ ಅವರ ಮೂಲಕ  ಮೊದಲು ಜಲಮಂಡಳಿಗೆ ತಿಳಿಸಿ, ನೀರನ್ನ ಬಂದ್ ಮಾಡಿಸೋ ಪ್ರಯತ್ನ ಮಾಡಿದ್ರು. ಆ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೂ ಬೇರೆ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿದ್ರು.

    ನೀರು ನಿಂತು ಯಾವುದೇ ತೊಂದರೆಯಾಗಲಿಕ್ಕಿಲ್ಲ ಎಂದಾಗ ಪೊಲೀಸರು ಅಲ್ಲಿಂದ ಹೊರಟು ನಿಂತರು. ಆಗ ಸಮಯ ಬರೋಬ್ಬರಿ ಬೆಳಗಿನ ಜಾವ ನಾಲ್ಕು ಗಂಟೆ. ಆ ಸಮಯದಲ್ಲೂ ಇನ್ಸಪೆಕ್ಟರ್ ನಾಯ್ಕರ ಎಲ್ಲ ಮಾಹಿತಿಯನ್ನೂ ಪಡೆಯುತ್ತಿದ್ದರು. ಸ್ಥಳದಲ್ಲಿದ್ದ ಎಎಸ್ಐ ಮೇದಾರ, ಮಹಾಂತೇಶ ಶೇಖಸನದಿ, ಮಲ್ಲೇಶಿ ಲಮಾಣಿ ಹಾಗೂ ಬಸು ಲಮಾಣಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಣೆ ಮಾಡಿದ್ರು.

    ಗಾಂಧಿನಗರದ ರಸ್ತೆಯೂ ಪೂರ್ಣವಾಗಿ ಹದಗೆಟ್ಟಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಯಾವುದೇ ಅವಘಡ ಸಂಭವಿಸದಂತಾಗಿದೆ. ಎಲ್ಲ ಸಮಯದಲ್ಲೂ ಜನರ ನೆಮ್ಮದಿಯನ್ನ ಕಾಯುವ ಪೊಲೀಸರಿಗೆ ಜನತೆ ಹ್ಯಾಟ್ಸಾಫ್ ಹೇಳಿದರು.

  • ಹುಬ್ಬಳ್ಳಿ ಔಟರ್ ರಿಂಗ್ ರೋಡ್: ಆಗಲಿದೇಯಾ ಮತ್ತೊಂದು “ಸಾವಿನ ರಸ್ತೆ”..?

    ಹುಬ್ಬಳ್ಳಿ: ನೂರಾರು ಜನರ ಸಾವಿಗೆ ಕಾರಣವಾಗಿದ್ದ ‘ಸಾವಿನ ರಸ್ತೆ’ ಹುಬ್ಬಳ್ಳಿ-ಧಾರವಾಡದ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳ ತಂಡ ವಿಶೇಷ ವರದಿಯನ್ನು ಸಿದ್ದಗೊಳಿಸುವ ಕಾರ್ಯ ಮಾಡುತ್ತಿರುವ ಸಂಧರ್ಭದಲ್ಲೇ, ಇನ್ನೊಂದು ‘ಸಾವಿನ‌ ರಸ್ತೆ’ ತಲೆ ಎತ್ತುತ್ತಿದೆ. ಅದುವೇ.. ಹುಬ್ಬಳ್ಳಿಯ ಔಟರ್ ರಿಂಗ್ ರೋಡ.

    ಸೊಲ್ಲಾಪುರ ರಸ್ತೆಯ ಕುಸುಗಲ್ಲದಿಂದ-ಗದಗ ರಸ್ತೆ-ಗಬ್ಬೂರಕ್ರಾಸ್ ಮೂಲಕ ಪಿಬಿ ರಸ್ತೆ ಕೂಡಿಸುವ ಹಾಗೂ ಹುಬ್ಬಳ್ಳಿ ನಗರದ ವಾಹನದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಈ ರಸ್ತೆ ‘ಸಾವಿನ‌ ರಸ್ತೆಯಾಗಿ‌ ಮಾರ್ಪಾಟುಗೊಳ್ಳುವುದರಲ್ಲಿ ಎರಡನೆ ಮಾತೇಯಿಲ್ಲ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು‌ ಈಗಲೇ ಎಚ್ಚೆತ್ತುಗೊಳ್ಳದಿದ್ದರೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ಯೋಜನೆಗೆ ಶಪಿಸದ ಹಾಗೆ ಔಟರ್ ರಿಂಗ್ ರೋಡ್ ಯೋಜನೆಗೆ ಜನ ಹಿಡಿಶಾಪ ಹಾಕೊ ಹಾಗಾಗುವುದರಲ್ಲಿ ಸಂಶಯವೇ ಇಲ್ಲ.

    ಕೇಂದ್ರ ಮಂತ್ರಿ ಹಾಗೂ ಈ ಭಾಗದ ಜನಪ್ರಿಯ ಸಂಸದ‌ ಪ್ರಲ್ಹಾದ ಜೋಶಿ‌ ಹಾಗೂ ಈ ಭಾಗದ ಮಾಜಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರ ಕನಸಿನ ಕೂಸಾಗಿರುವ ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಮಹಾನಗರಕ್ಕೆ ಕಪ್ಪು ಚುಕ್ಕೆಯಾಗುವ ಮುನ್ನ ಎಲ್ಲ ನಾಯಕರುಗಳು ಎಚ್ಚೆತ್ತು‌ ಒಮ್ಮೆ ಗದಗ ರಸ್ತೆಯಿಂದ ಬಿಡನಾಳ- ಪಿ ಬಿ ರಸ್ತೆ ಗೆ ಸಂಪರ್ಕ ಕಲ್ಪಿಸುವ ಔಟರ್ ರಿಂಗ್ ರಸ್ತೆಗೆ ಭೇಟಿ ನೀಡಿ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಪಡುತ್ತಿರುವ ತೊಂದರೆ ಹಾಗೂ ಮುಂದಿನ ದಿನಗಳಲ್ಲಿ ಪಡಬೇಕಾದ ಕಷ್ಟಗಳನ್ನು ನೋಡಿ ಶಾಶ್ವತ ಪರಿಹಾರವೊಂದನ್ನು ರೂಪಿಸಬೇಕಾಗಿದೆ.

    ಇತ್ತೀಚೆಗೆ ಯುವ ರೈತ ಮುಖಂಡ ಮೋಹನ ಅಸುಂಡಿ ಹುಬ್ಬಳ್ಳಿ ರೈತ ಸಂಘದ ಮುಖಂಡರೆಲ್ಲರನ್ನು ಕರೆದುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ಅಂಡರ್ ಪಾಸ್ ನಿರ್ಮಾಣದ ಬೇಡಿಕೆಗೆ ಹೋರಾಟ ನಡೆಸಿದಾಗಲೇ ಈ ರಸ್ತೆಯೂ ಕೆಲವೇ ದಿನಗಳಲ್ಲಿ ಸಾವಿನ ರಸ್ತೆಯಾಗುವುದರಲ್ಲಿ ಸಂಶಯವೇ ಇಲ್ಲ ಎಂಬ ವಾಸ್ತವ ಮನವರಿಕೆ ಆಗಿದ್ದು.

    ಔಟರ್ ರಿಂಗ್ ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಹಲವಾರು ದಶಕಗಳಿಂದ ಇದ್ದ ರಸ್ತೆಗಳನ್ನೇ ಬಂದ್ ಮಾಡಿಬಿಟ್ಟಿದ್ದಾರೆ. ಬಿಡನಾಳ-ಕುಂದಗೋಳ ರಸ್ತೆ ನೇರ ಸಂಪರ್ಕ ಕಡಿದು ಹಾಕಿರುವ ಅಧಿಕಾರಿಗಳು ಈಗ ರೈತರ ಹೋರಾಟದ ನಂತರ ಎಚ್ಚೆತ್ತುಕೊಂಡು, ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.

    ಅತ್ಯಂತ ಜಾಣ ಚಾಣಾಕ್ಷರೆಂದೇ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿ ಅವರ ಕ್ಷೇತ್ರದಲ್ಲಿಯೇ ಇಂತಹದೊಂದು ಭಾರೀ ಪ್ರಮಾದ ನಡೆದಿರುವುದನ್ನು ಕಂಡು ಎಲ್ಲರೂ ಹುಬ್ಬೇರಿಸುವಂತಾಗಿದೆ.

    ದೆಹಲಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ರಾಜ್ಯದಲ್ಲಿಯ ಪ್ರತಿಪಕ್ಷ ಕಣ್ಣಿದ್ದರೂ ಕುರುಡರಂತೆ ಹಾಗೂ ಕಿವಿಯಿದ್ದರೂ ಕಿವುಡರಂತೆ ವರ್ತಿಸುತ್ತಿರುವುದನ್ನು ಕಂಡರೆ ಈ ರಾಜಕೀಯ ಪಕ್ಷಗಳಿಗೆ ಯಾರಾದರೂ ಸತ್ತ ಮೇಲೆಯೇ ಎಚ್ಚೆತ್ತುಕೊಳ್ಳುವ ರೂಢಿಯೇ ಅಥವಾ ಇವರ ದೃಷ್ಟಿಯಲ್ಲಿ ಮನುಷ್ಯನ ಜೀವದ ಬೆಲೆಯೇ ಇಲ್ಲವೇ..? ಎಂಬ ಪ್ರಶ್ನೆ ಕಾಡುತ್ತಿದೆ.

  • ಅದರಗುಂಚಿಯಲ್ಲಿ ನಿವೃತ್ತ ಎಎಸ್ಐ ಸಾವು…!

    ಹುಬ್ಬಳ್ಳಿ: ತಾಲ್ಲೂಕಿನ ಅದರಗುಂಚಿ ಗ್ರಾಮದ ನಿವಾಸಿ, ನಿವೃತ್ತ ಎ.ಎಸ.ಐ. ನಿಂಗನಗೌಡ ಫ. ಚಿಕ್ಕನಗೌಡ್ರ (75) ಇಂದು ಸಂಜೆ   ನಿಧನರಾದರು. ಮೃತರು ಪತ್ನಿ , ಇಬ್ಬರು ಪುತ್ರರು ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

    ಪಾರ್ಥಿವ ಶರೀರದ ಅಂತ್ಯಕ್ರಿಯೆ  ಫೆ.4 , ಗುರುವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಅದರಗುಂಚಿಯಲ್ಲಿ ಜರುಗಲಿದೆ. ಕುಟುಂಬದ ಸದಸ್ಯರ ಸಂಪರ್ಕ ಸಂಖ್ಯೆ: 7019446328