Category: ನಮ್ಮೂರು

  • ಕಲಘಟಗಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ: ಸ್ಥಳದಲ್ಲಿ ತ್ವೇಷಮಯ..!

    ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಸರಕಾರಿ ಶಾಲೆಯ ಒಂಬತ್ತನೇಯ ತರಗತಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದ್ದು, ಪಟ್ಟಣದಲ್ಲಿ ಎರಡು ಗಲ್ಲಿಗಳ ಜನರು ಕಾದಾಟಕ್ಕೆ ಇಳಿದ ಪರಿಣಾಮ ಸ್ಥಳದಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ.

    ಮಂಜುನಾಥ ವೆಂಕಪ್ಪ ಲಮಾಣಿ ಎಂಬ ವಿದ್ಯಾರ್ಥಿಗೆ ಕೆಲವರು ಚಾಕುವಿನಿಂದ ಬೆನ್ನು ಮತ್ತು ಹೊಟ್ಟೆಗೆ ಇರಿದಿದ್ದು, ವಿದ್ಯಾರ್ಥಿಯನ್ನ ಹುಬ್ಬಳ್ಳಿಯ ಕಿಮ್ಸಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

    ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗೆ ವೈದ್ಯರು ಉಪಚಾರ ಮಾಡುತ್ತಿದ್ದು, ಸಧ್ಯ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಕಲಘಟಗಿ ಪರಿಸ್ಥಿತಿ ಹತೋಟಿಯನ್ನ ಕಳೆದುಕೊಂಡಿದ್ದು, ಪೊಲೀಸರು ಜನರನ್ನ ಚದುರಿಸಲು ಪ್ರಯತ್ನ ಪಡುತ್ತಿದ್ದಾರೆ.

    ಸಧ್ಯ ಹರಿಜನಕೇರಿ ಮತ್ತು ಲಮಾಣಿ ತಾಂಡಾದ ಗುಂಪುಗಳನ್ನ ಚದುರಿಸಲು ಮುಂದಾಗಿದ್ದು, ಆ ಪ್ರದೇಶದಲ್ಲಿ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

  • ಗಂಡ ಜವಾನನಿರೋ ಪಂಚಾಯತಿಗೆ ಹೆಂಡತಿ ಅಧ್ಯಕ್ಷೆ..!

    ಹಾವೇರಿ: ಗ್ರಾಮ ಪಂಚಾಯತಿಗಳಲ್ಲಿ ಎಲ್ಲರಿಗೂ ಅಧಿಕಾರ ಸಿಗತ್ತೆ. ಅದು ಯಾವತ್ತೂ ಧನಿಕರ ಸ್ವತ್ತಲ್ಲ ಎಂದು ಸಾರುವುದರಲ್ಲಿ ಗ್ರಾಮ ಪಂಚಾಯತಿ ಅಧಿಕಾರ ತೋರಿಸಿಕೊಡತ್ತೆ. ಹಾಗಾಗಿಯೇ ಅಪರೂಪದ ಪ್ರಕರಣಗಳು ಅಲ್ಲಲ್ಲಿ ಕಾಣ ಸಿಗುತ್ತವೆ.

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮ ಪಂಚಾಯತಿಯಲ್ಲಿ ವಿಶೇಷವಾದ ಘಟನೆಯೊಂದು ನಡೆದಿದೆ. ಇದೇ ಪಂಚಾಯತಿಯಲ್ಲಿ ಕಳೆದ 23 ವರ್ಷದಿಂದ ಜವಾನ್ ಕೆಲಸ ಮಾಡುತ್ತಿರುವನ ಮಡದಿಯಿಂದು, ಇದೇ ಪಂಚಾಯತಿಗೆ ಅಧ್ಯಕ್ಷೆಯಾಗಿದ್ದಾಳೆ.

    ಹೌದು.. ಬಸವರಾಜ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಬೈಚವಳ್ಳಿ ಪಂಚಾಯತಿಯಲ್ಲಿ ಜವಾನ್ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗುವಾಗ ಕೂಡಾ ತಾನೂ ಪಂಚಾಯತಿ ಜವಾನ್ ಎಂದು ಹೇಳಿಯೇ ಮದುವೆ ಮಾಡಿಕೊಂಡಿದ್ದ. ಅಂದು ಜವಾನ್ ಬಸವರಾಜ ಮದುವೆಯಾಗಿ ಬಂದ ಬೈಚವಳ್ಳಿ ಗ್ರಾಮದ ಸೊಸೆ, ಇಂದು ಅದೇ ಊರಿನ ಪಂಚಾಯತಿ ಅಧ್ಯಕ್ಷೆಯಾಗಿದ್ದಾಳೆ.

    ಬಸವರಾಜನ ಪತ್ನಿ ಗಂಗಮಾಳವ್ವ ಅಧ್ಯಕ್ಷೆಯಾಗಿದ್ದು, ಗಂಡ ಬಸವರಾಜ ಮಾತ್ರ ನಾನು ಅದೇ ಪಂಚಾಯತಿಯಲ್ಲಿ ಜವಾನ್ ಕೆಲಸ ಬಿಡುವುದಿಲ್ಲ ಎಂದು ಹೇಳುತ್ತಿದ್ದಾನೆ. ಪಂಚಾಯತ್ ರಾಜ್ ವ್ಯವಸ್ಥೆಯೇ ಇದಕ್ಕೇಲ್ಲ ಕಾರಣವಾಗಿದ್ದು ಎನ್ನುವುದನ್ನ ಯಾರೂ ಮರೆಯುವಂತಿಲ್ಲ..

  • ಹುಬ್ಬಳ್ಳಿಯಲ್ಲಿ ಖೋಟಾ ನೋಟು…!

    ಹುಬ್ಬಳ್ಳಿ: ನಗರದಲ್ಲಿ 500 ಮತ್ತು 100 ರೂಪಾಯಿ ಮುಖ ಬೆಲೆಯ ಖೋಟಾನೋಟುಗಳನ್ನ ಪ್ರಿಂಟ್ ಮಾಡಿ ಅಸಲಿ 8 ಸಾವಿರಕ್ಕೆ ನಕಲಿ 10 ಸಾವಿರ ರೂಪಾಯಿ ಕೊಡುತ್ತಿದ್ದ ತಂಡವನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನ ಹುಬ್ಬಳ್ಳಿ ಮೂರುಸಾವಿರ ಮಠದ ಹಿಂಭಾಗದ ಗುರುಶಿದ್ದೇಶ್ವರನಗರದ  ಗೋಪಿನಾಥ ಹಬೀಬ, ಟಿಪ್ಪುನಗರ ಮಾಳೇಕಾರ ಪ್ಲಾಟನ ಶ್ರೀನಿವಾಸ ವಾಸಪ್ಪ ತಟ್ಟಿ, ದೇವರಗುಡಿಹಾಳದ ಮೌಲಾಸಾಬ ಮಕ್ತುಮಸಾಬ ಗುಡಿಹಾಳ ಹಾಗೂ ಹಳೇಹುಬ್ಬಳ್ಳಿ ಸದರಸೋಫಾ ಕೋಳೇಕರ ಪ್ಲಾಟನ ಸಲೀಂ ಇಮಾಮಸಾಬ ಮುಲ್ಲಾ ಎಂದು ಗುರುತಿಸಲಾಗಿದೆ.

    ಬಂಧಿತ ಗೋಪಿನಾಥ ಹಬೀಬ ನೋಟನ್ನ ಪ್ರಿಂಟ್ ಮಾಡಿ ಇನ್ನುಳಿದ ಆರೋಪಿಗಳಿಗೆ ಮಾರಾಟ ಮಾಡಲು ಹಚ್ಚುತ್ತಿದ್ದ ಸಮಯದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಗಳಿಂದ 66500 ರೂಪಾಯಿ ಖೋಟಾ ನೋಟುಗಳನ್ನ ಹಾಗೂ ವಿವಿಧ ಕಂಪನಿಯ 4 ಮೊಬೈಲ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪೊಲೀಸ್ ಕಮೀಷನರ್ ಲಾಬುರಾಮ್ ಮಾರ್ಗದರ್ಶನದಲ್ಲಿ ಕೇಶ್ವಾಪುರ ಠಾಣೆ ಇನ್ಸಪೆಕ್ಟರ್ ಸುರೇಶ ಕುಂಬಾರ, ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಆರ್.ಎಲ್.ರಾಠೋಡ, ವಿ.ಎ.ಅಳಗವಾಡಿ, ಎಚ್.ಆರ್.ರಾಮಾಪೂರ, ಎಸ್.ಡಿ.ಗೌಡರ ಆರೋಪಿಗಳನ್ನ ಝಡಪಿ ರಸ್ತೆಯ ಚರ್ಚ ಬಳಿ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

  • ಮೂರುಸಾವಿರ ಮಠದಲ್ಲಿ ಶ್ರೀ ರುದ್ರಮುನಿ ದೇವರು..!

    ಹುಬ್ಬಳ್ಳಿ: ಮೂರುಸಾವಿರ ಮಠದ ವಿವಾದಗಳು ಹಗಲಿರುಳು ನಡೆಯುತ್ತಲಿದ್ದು, ಇದೀಗ ಮೂರುಸಾವಿರ ಮಠಕ್ಕೆ ತಿಪಟೂರಿನ ಶ್ರೀ ರುದ್ರಮುನಿ ದೇವರು ಆಗಮಿಸಿದ್ದು, ಹಲವು ರೀತಿಯ ಮಾತುಕತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

    ಇಳಿಸಂಜೆ ಮೂರುಸಾವಿರ ಮಠಕ್ಕೆ ಶ್ರೀ ರುದ್ರಮುನಿ ದೇವರು ಆಗಮಿಸಿದ್ದು ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳನ್ನ ಭೇಟಿಯಾಗಿ ಮಾತುಕತೆ ನಡೆಸಿದರೆಂದು ಹೇಳಲಾಗಿದೆ.

    ಮೂರುಸಾವಿರ ಮಠಕ್ಕೆ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಬರುವಾಗ, ಶ್ರೀ ರುದ್ರಮುನಿ ದೇವರಿಗೆ ಒಂದು ಕೋಟಿ ರೂಪಾಯಿ ಕೊಡಬೇಕಾಗಿ ಬಂದಿತ್ತು ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ, ಕೆಎಲ್ಇ ಸಂಸ್ಥೆಗೆ ಯಾವುದೇ ರೀತಿಯಾಗಿ ಜಮೀನು ಕೊಡುವುದು ಬೇಡವೆಂದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಶ್ರೀ ರುದ್ರಮುನಿ ದೇವರು ಆಗಮಿಸಿದ್ದಾರೆ.

    ಕೆಲಕಾಲ ಮೂರುಸಾವಿರ ಮಠದಲ್ಲಿ ಕೆಲವು ಪ್ರಮುಖರು ಹಾಗೂ ಮೂರುಸಾವಿರ ಮಠದ ಹಾಲಿ ಶ್ರೀಗಳೊಂದಿಗೆ ಮಾತನಾಡಿರುವ ಶ್ರೀ ರುದ್ರಮುನಿ ದೇವರು, ಇಂದು ಇಲ್ಲಿಯೇ ತಂಗಲಿದ್ದಾರೆಂದು ಹೇಳಲಾಗಿದೆ.

  • ಯೂಥ್ ಕಾಂಗ್ರೆಸ್: ಅತೀ ಹೆಚ್ಚು ಮತ ಪಡೆದ ಅಬ್ದುಲ್ ದೇಸಾಯಿ..!

    ಹುಬ್ಬಳ್ಳಿ: ಕರ್ನಾಟಕ ಯುವ ಕಾಂಗ್ರೆಸ್ ಸಮಿತಿ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಧಾರವಾಡದ ಯುವ ಮುಖಂಡರೋರ್ವರು ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳನ್ನ ಪಡೆದು ಪ್ರಧಾನ ಕಾರ್ಯದರ್ಶಿ ಸ್ಥಾನವನ್ನ ಪಡೆದಿದ್ದಾರೆ.

    ಆನ್ ಲೈನ್ ಚುನಾವಣೆಯಲ್ಲಿ 28 ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಒಟ್ಟು 98 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ ಯುವ ನಾಯಕ ಅಬ್ದುಲ್ ದೇಸಾಯಿ ಅವರು 8339 ಮತ ಪಡೆದು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

    ಮೊದಲಿಗೆ NSUI ನ ವಿದ್ಯಾರ್ಥಿ ಅಧ್ಯಕ್ಷರಾಗಿ ರಾಜಕೀಯಕ್ಕೆ ಪ್ರವೇಶ ಮಾಡಿ, ನಂತರ 2 ಬಾರಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ.  ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.

  • ಸುಪ್ರೀಂಕೋರ್ಟ್ ತಡೆಯಾಜ್ಞೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದ್ದಲ್ವಂತೆ…!

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ಸುದ್ದಿ ಎಲ್ಲೆಡೆ ಹರದಾಡುತ್ತಿದ್ದು, ಈ ವಿಷಯದಲ್ಲಿ ಜನಸಾಮಾನ್ಯರು ಗೊಂದಲಕ್ಕೆ ಒಳಗಾಗುವುದು ಬೇಡವೆಂದು ಆಮ್ ಆದ್ಮಿ ಹೇಳಿದೆ.

    WP35-20-10-12-2020

    WP49814-19-17-12-2020

    ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ತೀರ್ಪು ವಿಜಯಪುರಕ್ಕೆ ಸಂಬಂಧಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ 35/2020 ಪ್ರಕರಣದಲ್ಲಿ. ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ 49814/2019 ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಕರಣ ಅನ್ವಯವಾಗುವುದು. ಈ ಎರಡು ಪ್ರಕರಣಗಳು ಪ್ರತ್ಯೇಕವಾಗಿದ್ದು, ಸರ್ವೋಚ್ಚ ನ್ಯಾಯಾಲಯ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಹೊರಡಿಸುವ ತಡೆಯಾಜ್ಞೆ ಹು-ಧಾ ಮಹಾನಗರ ಪಾಲಿಕೆಗೆ ಅನ್ವಯಿಸುವುದಿಲ್ಲ.

    ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಪ್ರಮುಖವಾದದ್ದು, ಈ ತರಹದ ವದಂತಿಗಳಿಂದ ಈಗಾಗಲೇ 23 ತಿಂಗಳುಗಳಿಂದ ವಿಳಂಬವಾದ ಹು-ಧಾ ಪಾಲಿಕೆ ಚುನಾವಣೆಯನ್ನ ಇನ್ನಷ್ಟು ಕಾಲಹರಣ ಮಾಡಲು ಸರ್ಕಾರಕ್ಕೆ ಆಸ್ಪದ ಕೊಡಬಾರದೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

  • ರಕ್ಷಾ ರಾಮಯ್ಯ ಯೂಥ್ ಕಾಂಗ್ರೆಸ್ ಯುವರಾಜ…!

    ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯ ತೀವ್ರ ಹಣಾಹಣಿಯ ನಡುವೆ ಕೊನೆಗೆ ಮೊಹ್ಮದ ನಲಪಾಡ್ ತಿರಸ್ಕೃತಗೊಂಡು, ಕೊನೆಯಲ್ಲಿ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಕೆಲವು ದಿನಗಳ ಹಿಂದೆ ನಡೆದಿದ್ದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾಗಿರುವ ರಕ್ಷಾ ರಾಮಯ್ಯ 52271 ಮತಗಳನ್ನ ಪಡೆದು ಜಯಗಳಿಸಿದ್ದಾರೆ. ಆದರೆ, 64203 ಮತಗಳನ್ನ ಪಡೆದಿದ್ದ ಮೊಹ್ಮದ ಹ್ಯಾರೀಸ್ ನಲ್ ಪಾಡ್ ಅವರನ್ನ ಫಲಿತಾಂಶದಲ್ಲಿ ತಿರಸ್ಕೃತಗೊಳಿಸಲಾಗಿದೆ.

    ಯುವ ಕಾಂಗ್ರೆಸ್ ಚುನಾವಣೆಯಲ್ಲಿ 7 ಜನರು ಸ್ಪರ್ಧೆಗಿದ್ದರು. ಇದರಲ್ಲಿ ಮಿಥುನ ರೈ ಹಾಗೂ ಮೊಹ್ಮದ ನಲಪಾಡ್ ಅವರನ್ನ ಡಿಸ್ ಕ್ವಾಲಿಪೈಡ್ ಮಾಡಲಾಗಿದೆ. ಉಳಿದಂತೆ ಮಹಿಳಾ ಉಪಾಧ್ಯಕ್ಷೆಯಾಗಿ ಭವ್ಯಾ.ಕೆ.ಆರ್ ಆಯ್ಕೆಯಾಗಿದ್ದು, 3156 ಮತಗಳನ್ನ ಪಡೆದಿದ್ದಾರೆ. ಸಂದೀಪ ನಾಯಕ 736 ಮತಗಳನ್ನ ಪಡೆದು ಎಸ್ಸಿ/ಎಸ್ಟಿ ಉಪಾಧ್ಯಕ್ಷರಾಗಿದ್ದಾರೆ.

    Foundation of Advanced Management of Elections (FAME) ಇಡೀ ಚುನಾವಣೆಯ ಪ್ರಕ್ರಿಯೆಯನ್ನ ನೋಡಿಕೊಂಡಿತ್ತು. ಆ್ಯಪ್ ಮೂಲಕ ಮೊದಲ ಬಾರಿಗೆ ಮತದಾನ ನಡೆದಿತ್ತು.

  • “ಸರ್ಕಲ್” ದಲ್ಲಾಳಿ ಎಸಿಬಿ ಬಲೆಗೆ: 500 ನೋಟಿನೊಂದಿಗೆ ಸಿಕ್ಕುಬಿದ್ದ ಟೊಪ್ಪಿಗೆ ಹಾಕಿದಾತ..!

    ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಮಹಿಳೆಗೆ ಮನಸ್ವಿನಿ ಯೋಜನೆಯ ಮಾಸಾಶನ ಪಡೆಯಲು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಹಾಗೆ ಕಂದಾಯ ನಿರೀಕ್ಷಕರ ಬಳಿ ಸಹಾಯಕನಾಗಿರುವ (ಸರಕಾರಿ ನೌಕರನಲ್ಲ) ವ್ಯಕ್ತಿಯನ್ನಲಂಚದಣದ ಸಮೇತ ಹಿಡಿಯುವಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ತಮ್ಮ ಚಿಕ್ಕಮ್ಮ ಮಾದೇವಿ ಹಂಚಿನಾಳರಿಗೆ ಮಾಸಾಶನ ಪಡೆಯಲು ಕಂದಾಯ ನಿರೀಕ್ಷಕರು ಹಣ ಕೇಳುತ್ತಿದ್ದಾರೆಂದು ಬೆಟದೂರ ಗ್ರಾಮದ ಯಲ್ಲಪ್ಪ ಶಿವಳ್ಳಿ ಎಸಿಬಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಪೊಲೀಸರು, ಕಂದಾಯ ನಿರೀಕ್ಷಕರ ಬಳಿ ಸಹಾಯಕನಾಗಿ ಕಾರ್ಯನಿರ್ವಹಿಸುವ ಶಿವಾನಂದ ಶಿರಹಟ್ಟಿಯನ್ನ ಬಂಧನ ಮಾಡಿದ್ದಾರೆ.

    ಕಂದಾಯ ನಿರೀಕ್ಷಕ ಸದಾನಂದ ದೇಮಣ್ಣನವರ, ಶಿವಾನಂದನನ್ನ ಭೇಟಿಯಾಗಲು ತಿಳಿಸಿದ್ದರು. ಕೆಲಸ ಮಾಡಿಕೊಡಲು ಮೊದಲು 700ರೂಪಾಯಿ ಕೇಳಿ, 600ಕ್ಕೆ ಒಪ್ಪಿಕೊಂಡಿದ್ದರು. ಇಂದು ಆ ಸಂಬಂಧ 500 ರೂಪಾಯಿ ಕೊಡುವಾಗ, ಎಸಿಬಿ ದಾಳಿ ಮಾಡಿದೆ.

    ಟ್ರ್ಯಾಪ್ ತಂಡದ ನೇತೃತ್ವವನ್ನ ಇನ್ಸಪೆಕ್ಟರುಗಳಾದ ಬಿ.ಎ.ಜಾಧವ, ಮಂಜುನಾಥ ಹಿರೇಮಠ ವಹಿಸಿಕೊಂಡಿದ್ದರು. ಸಿಬ್ಬಂದಿಗಳಾದ ಗಿರೀಶ ಮನಸೂರ, ಶ್ರೀಶೈಲ ಕಾಜಗಾರ, ಎಸ್.ಐ.ಬೀಳಗಿ, ಶಿವಾನಂದ ಕೆಲವೆಡಿ, ಲೋಕೇಶ ಬೆಂಡಿಕಾಯಿ, ಕಾರ್ತಿಕ ಹುಯಿಲಗೋಳ, ಆರ್.ಬಿ.ಯರಗಟ್ಟಿ, ಗಣೇಶ ಶಿರಹಟ್ಟಿ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

  • ದಯವಿಟ್ಟು ಬೆರಳು ಜೋಡಿಸಿ.. ಡಬ್ಬಿಯಲ್ಲಿವೆ ನೋಡಿ.. ನಾಗಪ್ಪ ಕಿಮ್ಸನಲ್ಲಿ ರೋಧಿಸುತ್ತಿದ್ದಾನೆ..!

    ಹುಬ್ಬಳ್ಳಿ: ಕಾಂಕ್ರೀಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಬೆರಳುಗಳು ಕಟ್ ಆದ ಹಿನ್ನೆಲೆಯಲ್ಲಿ ಬೆರಳುಗಳನ್ನ ಜೋಡಿಸಬಹುದೆಂಬ ನಂಬಿಕೆಯಿಂದ ಹುಬ್ಬಳ್ಳಿಯ ಕಿಮ್ಸಗೆ ವ್ಯಕ್ತಿಯೋರ್ವ ಚಿಕಿತ್ಸೆಗಾಗಿ ದಾಖಲಾದ ಘಟನೆ ನಡೆದಿದೆ.

    ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಾಲಗಿ ಮರೋಳ ಗ್ರಾಮದಲ್ಲಿ ಕೆಲಸ ಮಾಡುವಾಗ ಈ ದುರ್ಘಟನೆ ನಡೆದಿದ್ದು, ನಾಗಪ್ಪ ಎಂಬಾತ ತನ್ನ ಬೆರಳುಗಳೊಂದಿಗೆ ಕಿಮ್ಸಗೆ ಆಗಮಿಸಿದ್ದಾನೆ.

    ಕಟ್ಟಡ ನಿರ್ಮಾಣ ಮಾಡುವಾಗ ಅವಘಡ ಸಂಭವಿಸಿದೆ. ತಕ್ಷಣವೇ ಜೊತೆಗಿದ್ದ ಕೆಲಸಗಾರರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಿದ್ದಾರೆ. ಇದೇ ಸಮಯದಲ್ಲಿ ನಾಗಪ್ಪ ತನ್ನ ಕಟ್ ಆಗಿರುವ ಬೆರಳುಗಳನ್ನ ಡಬ್ಬಿಯಲ್ಲಿ ಹಾಕಿಕೊಂಡು ಬಂದು, ವೈದ್ಯರಿಗೆ ಬೆರಳು ಜೋಡಿಸಿ ಎಂದು ಅಲವತ್ತುಕೊಳ್ಳುತ್ತಿದ್ದ.

    ಬೆರಳುಗಳನ್ನ ಜೋಡಿಸಲು ಆಗುವುದಿಲ್ಲವೆಂದ ವೈಧ್ಯರು, ಕೈಗೆ ಚಿಕಿತ್ಸೆಯನ್ನ ನೀಡಿದ್ದು, ನಾಗಪ್ಪ ಬೆರಳುಗಳು ಕಟ್ ಆದ ನೋವಿನಿಂದ ಬಳಲುತ್ತಿದ್ದಾನೆ. ಜೀವನಕ್ಕೆ ಕೆಲಸವೇ ಆದಾರವಾಗಿದ್ದ ನಾಗಪ್ಪನ, ಬೆರಳುಗಳು ಕಟ್ ಆಗಿರುವುದು ಮತ್ತಷ್ಟು ಕಷ್ಟವಾಗಲಿದೆ.

  • ಫೇಸ್ ಬುಕ್ ಗೆಳತಿ “ಸುಷ್ಮಾ ಸುಸು” ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ್ ವಿಜಯ ಬಿರಾದಾರ..!

    ಧಾರವಾಡ: ಯುವತಿಯ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಹಣ ವಂಚನೆ ಮಾಡಿದ್ದ ಆರೋಪಿಯನ್ನ ಹಾಸನ ಜಿಲ್ಲೆಯಲ್ಲಿ ಬಂಧನ ಮಾಡುವಲ್ಲಿ ಧಾರವಾಡದ ಇನ್ಸಪೆಕ್ಟರ್ ವಿಜಯ ಬಿರಾದಾರ ತಂಡ ಯಶಸ್ವಿಯಾಗಿದೆ.

    ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬುವವರಿಗೆ ಸುಷ್ಮಾ ಸುಸು ಎಂಬ ಹೆಸರಿನಲ್ಲಿ ಫೇಸ್ ಬುಕ್ ಪ್ರೆಂಡ್ ರಿಕ್ವೆಸ್ಟ್ ಕಳಿಸಿ, ನಂತರ ವಾಟ್ಸಾಫ್ ನಂಬರ ಪಡೆದು, ನಿಮ್ಮನ್ನ ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಹಾಸನ ಜಿಲ್ಲೆಯ ಪ್ರತಾಪ ಡಿ.ಎಂ ಎಂಬಾತನನ್ನ ಬಂಧನ ಮಾಡಲಾಗಿದೆ.

    ಮದುವೆ ಮಾಡಿಕೊಳ್ಳುವ ಆಮಿಷವೊಡ್ಡಿ ಹಲವಾರು ಜನರ ಬಳಿ 14ರಿಂದ 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ ಪ್ರತಾಪ, ದೊಡ್ಡಗಿಣಿಗೇರ ಗ್ರಾಮದಲ್ಲಿ ಕಂಪ್ಯೂಟರ್ ರಿಪೇರಿ ಕೆಲಸವನ್ನ ಮಾಡುತ್ತಾನೆಂದು ಗೊತ್ತಾಗಿದೆ. ಬಂಧಿತ ಆರೋಪಿಯಿಂದ 1ಲಕ್ಷ 25 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

    ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ, ಧಾರವಾಡ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಿಜಯ ಬಿರಾದಾರ, ಸಿಬ್ಬಂದಿಗಳಾದ ಎಎಸ್ಐಗಳಾದ ವ್ಹಿ.ಎಸ್.ಬೆಳಗಾಂವಕರ, ಪಿ.ಜಿ.ಕಾಳಿ, ಆರ್.ಎಸ್.ಜಾಧವ, ಹವಾಲ್ದಾರಗಳಾದ ಎ.ಎ.ಕಾಕರ, ಬಿ.ಎನ್.ಬಳಗಣ್ಣನವರ, ಎ.ಎಂ.ನವಲೂರ, ಆರ್.ಎನ್.ಕಮದೊಡ, ಪಿ.ಜಿ.ಪಾಟೀಲ, ಸಿಬ್ಬಂದಿಗಳಾದ ಆರ್.ಎ.ಕಟ್ಟಿ, ಯು.ಎಂ.ಅಗಡಿ, ಬಿ.ಎಸ್.ದೇಮಕ್ಕನವರ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.