ಲಕ್ಷ್ಮಣ ಅಲ್ಲೇಗೆ ಹೆಣವಾದ- ಶಿವಲಿಂಗವ್ವ…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಧಾರವಾಡ: ನಗರದ ಕೆಲಗೇರಿ ಕೆರೆಯಲ್ಲಿ ಆಟೋ ತೊಳೆಯಲು ಹೋದ ಆಟೋ ಚಾಲಕನೋರ್ವ ಹೆಣವಾಗಿ ಸಿಕ್ಕ ಘಟನೆ ನಡೆದಿದ್ದು, ನಾಗರಿಕರಲ್ಲಿ ಹಲವು ಅನುಮಾನ ಮೂಡಿಸಿದೆ.
ಶಿವಲಿಂಗವ್ವ ಹೂಲಿಕಟ್ಟಿ ಎನ್ನುವವರಿಗೆ ಸೇರಿದ ಆಟೋವನ್ನ ಲಕ್ಷ್ಮಣ ಡೊಳ್ಳಣನವರ ಚಲಾಯಿಸುತ್ತಿದ್ದ. ನಿನ್ನೆ ಆಟೋ ತೊಳೆಯಲು ಹೋದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಧಾರವಾಡ ಉಪನಗರ ಠಾಣೆಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಲಕ್ಷ್ಮಣನ ಶವವನ್ನ ಹೊರಗೆ ತೆಗೆದಿದ್ದಾರೆ.
ಆಟೋ ಚಾಲಕನೋರ್ವ ಕೆರೆಯ ಬಗ್ಗೆ ಮಾಹಿತಿಯಿಲ್ಲದೇ ಅಲ್ಲಿಗೆ ಹೋದನೇ. ಆತನ ಕಾಲು ಜಾರಿದ್ದು ಹೇಗೆ ಎಂಬ ಅನುಮಾನಗಳಿಗೆ ಪೊಲೀಸರು ಉತ್ತರವನ್ನ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.


