Karnataka Voice

Latest Kannada News

ಹುಬ್ಬಳ್ಳಿ: ಮಗಾ ಚೆನ್ನಾಗಿರಲಿ ಎಂದ್ಕೊಂಡು 70 ಸಾವಿರ ಕೊಟ್ಟು ಎಮ್ಮೆ ತಂದಿದ್ದ ಅಪ್ಪನ ಎದುರೇ “ಶವವಾದ” ಮಗ…

Spread the love

ಹುಬ್ಬಳ್ಳಿ: ತನ್ನ ಮಗ ಚೆನ್ನಾಗಿರಲಿ ಎಂದುಕೊಂಡು ಅಪ್ಪ  70 ಸಾವಿರ ರೂಪಾಯಿ ಸಾಲ ಮಾಡಿ ಎರಡು ಎಮ್ಮೆಯನ್ನ ತಂದಿದ್ದ. ಹಾಲುಂಡು ಮನೆಯಲ್ಲೇ ಇರಲಿ ಎಂದುಕೊಂಡ ತಂದೆಗೆ ಮಗ ಕೆಲಸಕ್ಕೆ ಹೋಗಿ ಶವವಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಗುರುವಾರ ನಡೆದ ಘಟನೆ ತಂದೆಯ ಪ್ರೀತಿಯನ್ನ ಹೊರ ಹಾಕಿದ್ದು, ಮುಪ್ಪಿನ ವಯಸ್ಸಲ್ಲೂ ಮಗನಿಗಾಗಿ ಮಾಡಿದ್ದು ಎಲ್ಲರಲ್ಲೂ ನೋವು ತರಿಸಿದೆ. ಅಷ್ಟೇ ಅಲ್ಕ, ಎರಡು ಹೆಜ್ಜೆಯಿಟ್ಟಿದ್ದರೇ ಆತ ಉಳಿಯುತ್ತಿದ್ದ ಎಂಬುದನ್ನ ಹೊರ ಹಾಕಿದ್ದಾರೆ.

ಮಲ್ಲಪ್ಪ ಜೋಗಿನ ಹಳ್ಳಿಕೇರಿಯಿಂದ ಬಂದು ಜೀವ ಕಳೆದುಕೊಂಡಿದ್ದಾನೆ. ಅದಕ್ಕೊಂದು ವ್ಯವಸ್ಥಿತವಾದ ವ್ಯವಸ್ಥೆ ನಡೆಯತ್ತೆ. ಮಲ್ಲಪ್ಪನಿಂದಲೇ ಹಾಗಾಗಿದೆ ಅನ್ನೋ ರಿಪೋರ್ಟ್ ಕೂಡಾ ಹೊರಬರಬಹುದು. ಒಂದು ಸಾವಿನ ಹಿಂದೆ ಅಪ್ಪನ ಪ್ರೀತಿ… ಎರಡು ಹೆಜ್ಜೆ ಮತ್ತೂ 70 ಸಾವಿರದ ಎಮ್ಮೆಯ ಹಾಲು ಎಲ್ಲವೂ ಮಲ್ಲಪ್ಪನಂತೆ ಮಣ್ಣಾಗುತ್ತವೆ. ಹೊಸಕಿದವರು ಬದುಕುತ್ತಾರೆ, ಆತನ ಪಾಳಿ ಬರುವತನಕ.


Spread the love

Leave a Reply

Your email address will not be published. Required fields are marked *