Karnataka Voice

Latest Kannada News

ಕಲಘಟಗಿ ಬಳಿ ಲಾರಿಗೆ ಕಾರು ಡಿಕ್ಕಿ ಧಾರವಾಡದ ಯುವಕ, ಹೊನ್ನಾವರದ ವಿದ್ಯಾರ್ಥಿನಿ ಸಾವು…

Spread the love

ಧಾರವಾಡ: ಲಾರಿ ಹಾಗೂ ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಕಲಘಟಗಿ ಬಳಿ ನಡೆದಿದೆ.

ಅಪಘಾತದಲ್ಲಿ ಹೊನ್ನಾವರದ ವಿದ್ಯಾರ್ಥಿನಿ  ಜ್ಯೋತಿ ರವೀಂದ್ರ ಗೌಡ (23) ಹಾಗೂ ಧಾರವಾಡ ಸಪ್ತಾಪುರದ  ರಾಹುಲ ವಿಶ್ವನಾಥ ಅಂಗಡಿ (23) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಜ್ಯೋತಿ ದೇವಪ್ಪ ಉಮಚಗಿ (25), ಸೌಮ್ಯ ಶಿವಮೂರ್ತಯ್ಯ  ಹಿರೇಮಠ (24), ಕಸ್ತೂರಿ ಅಶೋಕ ಕಳಕಟ್ನವರ (24), ಪ್ರಜ್ವಲ ಮುದುವಪ್ಪ ಹಸಬಿ (23), ಶಿವ @ ಶಿವರಾಜ ತಂದೆ ಸಿದ್ದಪ್ಪ ಹೊಸಮನಿ (24) ಹಾಗೂ ಉಮೇಶ ಯಲ್ಲಪ್ಪ ತೇಗೂರ (25) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಲ್ಲಿ ಕೆಎ-16-ಜಿ-8479 ಸಂಖ್ಯೆಯ ಲಾರಿ, ಕೆಎ-63-ಟಿ-0649 ಹಾಗೂ ಕೆಎ-26-ಎನ್-7389 ಸಂಖ್ಯೆಯ ಎರಡು ಕಾರುಗಳು ಭಾಗಿಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Spread the love

Leave a Reply

Your email address will not be published. Required fields are marked *