Karnataka Voice

Latest Kannada News

ಹುಬ್ಬಳ್ಳಿ ಗದಗ ರಸ್ತೆಯಲ್ಲಿ ಹಾಡುಹಗಲೇ ದರೋಡೆ…!

ಹುಬ್ಬಳ್ಳಿ: ಟಾಟಾ ಏಸ್ ವಾಹನದಲ್ಲಿ ಹೊರಟಿದ್ದ ಚಾಲಕನನ್ನ ಬೆದರಿಸಿ ಹಣವನ್ನ ದೋಚಿಕೊಂಡು ಇಬ್ಬರು ಬೈಕ್ ಸವಾರರು ಹಾಡುಹಗಲೇ ಪರಾರಿಯಾಗಿರುವ ಘಟನೆ ಗದಗ ರಸ್ತೆಯಲ್ಲಿ ನಡೆದಿದೆ.

ಟಾಟಾ ಏಸ್ ಚಾಲಕ ಕೃಷ್ಣಾ ಎಂಬುವವರನ್ನ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ತಡೆದಿದ್ದಾರೆ. ತಕ್ಷಣವೇ ಆತನನ್ನ ಬೆದರಿಸಿ, ಆತನ ಬಳಿಯಿಂದ ಮೂವತ್ತು ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ.

ತಕ್ಷಣವೇ ಘಟನೆಯ ಬಗ್ಗೆ ಮಾಹಿತಿಯನ್ನ ಪೊಲೀಸರಿಗೂ ತಿಳಿಸಿದರೂ, ಸುಮಾರು ಹೊತ್ತಾದರೂ ಯಾವುದೇ ಪೊಲೀಸರು ಸ್ಥಳಕ್ಕೆ ಹೋಗದೇ ಇರುವುದರಿಂದ ಆರೋಪಿಗಳ ಬಗ್ಗೆ ಯಾವುದೇ ಸುಳಿವಿಲ್ಲ.

ಈಗಷ್ಟೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆಯನ್ನ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *