Karnataka Voice

Latest Kannada News

ಬ್ಯಾಹಟ್ಟಿ ಜಿಪಂ ಕ್ಷೇತ್ರದಲ್ಲಿ 96 ಕೊರೋನಾ ಪ್ರಕರಣ: ಗ್ರಾಮ ಕೊರೋನಾ ಮುಕ್ತವಾಗಬೇಕು: ಶಾಸಕ ಶಂಕರ ಪಾಟೀಲಮುನೇನಕೊಪ್ಪ…!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮವನ್ನ ಕೊರೋನಾ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ಗ್ರಾಮದಲ್ಲಿ ತಾಲೂಕಿನ ಇಡೀ ಆಡಳಿತವನ್ನೇ ಕರೆದುಕೊಂಡು ವಿಶೇಷ ಸಭೆಯನ್ನ ನಡೆಸಿದ ಸಮಯದಲ್ಲಿ ಮಾತನಾಡಿದ ಶಾಸಕರು, ಗ್ರಾಮದಲ್ಲಿಯೇ ಸರಕಾರಿ ಆಸ್ಪತ್ರೆಯಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದೆ ಬರಬೇಕು. ಸ್ಥಳೀಯವಾಗಿ ತೊಂದರೆಯಾಗದಂತೆ ಪ್ರತಿಯೊಂದು ವ್ಯವಸ್ಥೆಯನ್ನೂ ಮಾಡುತ್ತಿರುವುದಾಗಿ ಹೇಳಿದರು.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ಬ್ಯಾಹಟ್ಟಿ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕವನ್ನ ನೀಡಿದರು. ಹೆಚ್ಚಿಗೆ ಬೇಕಾದರೇ ಅವುಗಳನ್ನೂ ವ್ಯವಸ್ಥೆ ಮಾಡುವುದಾಗಿ ಶಾಸಕರು ಹೇಳಿದರು. ಬ್ಯಾಹಟ್ಟಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ 96 ಪ್ರಕರಣಗಳಿದ್ದು, ಬ್ಯಾಹಟ್ಟಿಯಲ್ಲಿ 27 ಪ್ರಕರಣಗಳು ಜಾಲ್ತಿಯಲ್ಲಿವೆ.

ಈ ಸಮಯದಲ್ಲಿ ತಹಶೀಲ್ದಾರ ನಾಶಿ, ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಮೋದ ಯಡ್ರಾಯಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ ಸೇರಿದಂತೆ  ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *