Posts Slider

Karnataka Voice

Latest Kannada News

ಡಾ.ಆರ್.ಎಂ.ಕುಬೇರಪ್ಪ ಗೆಲುವಿಗೆ ಕಂಕಣ ಕಟ್ಟಿದ ಸಂತೋಷ ಲಾಡ ಪಡೆ- ಎಸ್.ಆರ್.ಪಾಟೀಲ ನೇತೃತ್ವ

1 min read
Spread the love

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಸಂತೋಷ ಲಾಡ ಪಡೆ ಸನ್ನದ್ಧವಾಗಿದ್ದು, ಮತದಾರರ ಮನೆ ಮನೆಗೆ ತೆರಳಿ ನಿರಂತರವಾಗಿ ಪ್ರಚಾರ ಕೈಗೊಂಡಿದ್ದಾರೆ.

ಕೆಪಿಸಿಸಿ ಸದಸ್ಯ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಕಲಘಟಗಿ ಪಟ್ಟಣವೂ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿದ ಪ್ರಮುಖರು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮತ ನೀಡಬೇಕೆಂದು ಕೋರಿದರು.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್.ವಿ.ಸಂಕನೂರ ಪದವೀಧರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೇನು. ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಳ್ಳುವವರಿಗೆ ಮತ ಹಾಕಿ ಸಾಧಿಸುವುದಾದರೂ ಏನು. ಸದಾಕಾಲ ಕ್ಷೇತ್ರದ ಸಮೂಹದೊಂದಿಗೆ ಇರುವ ಕುಬೇರಪ್ಪನವರಿಗೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನ ಬಲಪಡಿಸುವ ಜೊತೆಗೆ ಚುನಾವಣೆಯಲ್ಲಿ ಕುಬೇರಪ್ಪನವರು ಗೆಲ್ಲುವಂತೆ ಮಾಡಿ ಎಂದು ಕೆಪಿಸಿಸಿ ಸದಸ್ಯ ಎಸ್.ಆರ್.ಪಾಟೀಲ ಮತದಾರರಿಗೆ ಮನವಿ ಮಾಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ನಿಂಗರೆಡ್ಡಿ ನಡುವಿನಮನಿ, ಬಾಳು ಖಾನಾಪುರ, ಸುಧೀರ ಬೋಳಾರ,  ಸಂತೋಷ ಲಾಡರ ಆಪ್ತ ಸಹಾಯಕರಾದ ಹರೀಶಂಕರ ಮಠದ, ಸೋಮಶೇಖರ ಬೆನ್ನೂರ, ಸಿದ್ದು ತಲೆಬಾಗಿಲ, ಬೋಜಪ್ಪ ಲಮಾಣಿ, ಗುರು ಬೆಂಗೇರಿ, ಮಹಾಂತಯ್ಯ ಚಿಕ್ಕಮಠ, ಶಿವಯ್ಯ ತೇಗೂರಮಠ ಸೇರಿದಂತೆ ಹಲವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *