Category: ನಮ್ಮೂರು

  • Exclusive-ಯರಿಕೊಪ್ಪ ಬಳಿ ಸಾರಿಗೆ ಬಸ್ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ- ಈಗಷ್ಟೇ ನಡೆದ ಘಟನೆ

    ಧಾರವಾಡ: ಮೂವತ್ತರಿಂದ ನಲ್ವತ್ತು ಜನರೊಂದಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಯರಿಕೊಪ್ಪದ ಬಳಿ ಪಲ್ಟಿಯಾಗಿದ್ದು, ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.

    ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮಹಿಳೆಯರು ಮಕ್ಕಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ಯರಿಕೊಪ್ಪದ ಕ್ರಾಸ್ ಬಳಿ ನಡೆದಿರುವ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರನ್ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲು ಆರಂಭಿಸಲಾಗಿದೆ.

    ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸುವಲ್ಲಿ ನಿರತರಾಗಿದ್ದಾರೆ. ಅನೇಕರ ಬಟ್ಟೆಗಳು ರಕ್ತಸಿಕ್ಕವಾಗಿದ್ದು, ಯಾವ ಮಟ್ಟದ ಗಾಯಾಗಳಾಗಿವೆ ಎಂಬುದು ಇನ್ನೂ ಮಾಹಿತಿ ಬರಬೇಕಿದೆ.

  • ‘108’ರಲ್ಲೇ ಹೆರಿಗೆ- ಸುಮಿತ್ರಾ ಮಗು ಕ್ಷೇಮ: ಹೀಗೂ ಆಗತ್ತೆ..!

    ಧಾರವಾಡ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಗರ್ಭಿಣಿ ಮಹಿಳೆಯೋವರ್ಳು 108 ಅಂಬ್ಯುಲೆನ್ಸನಲ್ಲಿ ಗಂಡು ಮಗುವಿಗೆ ಜನ್ಮ‌ ನೀಡಿದ ಘಟನೆ ಧಾರವಾಡ ಬೆಳಗಾವಿ ರಸ್ತೆಯಲ್ಲಿನ ಹೈಕೋರ್ಟ್ ಬಳಿ‌ ನಡೆದಿದೆ.

    ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದ ಸುಮಿತ್ರಾ ಶಿಗಳ್ಳಿ ಎಂಬ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಗುತ್ತಿತ್ತು. ಆದ್ರೆ ಮಾರ್ಗಮದ್ಯದಲ್ಲಿ ಗಂಡು‌ ಮಗುವಿಗೆ ಜನ್ಮ ನೀಡಿದ್ದಾರೆ.

    108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ಇದೀಗ ತಾಯಿ ಮತ್ತು ಮಗು ಆರಾಮಾಗಿದ್ದಾರೆ. ಹೆರಿಗೆ ನೋವು ಅತಿಯಾದ ಪರಿಣಾಮ ಅಲ್ಲಿಯೇ ಅಂಬ್ಯುಲೆನ್ಸ್ ನಿಲ್ಲಿಸಿ, ಕೆಲಸ ಸಮಯದ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಅಂಬ್ಯಲೆನ್ಸನಲ್ಲಿ ಶುಶ್ರೂಶಕ ಮಂಜುನಾಥ ಮುಂದಿನಮನಿ ಹಾಗೂ ದೇವೇಂದ್ರ ಎಸ್ ಗಂಗಾಧರ ಎಂಬುವವರಿದ್ದು, ಯಾವುದೇ ತೊಂದರೆಯಿಲ್ಲದ ಹಾಗೇ ಹೆರಿಗೆ ಮಾಡಿಸಿ, ಕರ್ತವ್ಯವನ್ನ ನಿಭಾಯಿಸಿದ್ದಾರೆ.

  • ಕೇಂದ್ರ ಸಚಿವ ‘ಜೋಶಿ’ ಕಚೇರಿ ಪಕ್ಕದಲ್ಲೇ ಸ್ಪೋಟವಾದರೂ…! ಇಷ್ಟೊಂದು ನಿರ್ಲಕ್ಷ್ಯ.. !

    ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಕಚೇರಿಗೆ ಕೂಗಳತೆ ದೂರದಲ್ಲೇ ಸಿಲೆಂಡರ್ ಸ್ಪೋಟಗೊಂಡರೂ ಇನ್ನೂವರೆಗೂ ಸಂಬಂಧಿಸಿದ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಇರುವುದು, ಅಧಿಕಾರಿಗಳ ನಿರ್ಲಕ್ಷ್ಯವನ್ನ ತೋರಿಸುತ್ತಿದೆ.

    ಅರ್ಮಾನ ಮಲ್ಲಿಕ್ ಹೆಸರಿನ ಗ್ಯಾರೇಜ್ ನಲ್ಲಿ ಗ್ಯಾಸ್ ವೆಲ್ಡಿಂಗ್ ಮಾಡುವಾಗ ಸ್ಪೋಟಗೊಂಡಿದ್ದು, ಈ ಭಾಗದಲ್ಲಿ ಆತಂಕವನ್ನ ಸೃಷ್ಟಿ ಮಾಡಿತ್ತು. ಅಷ್ಟೇ ಅಲ್ಲ, ಅಬ್ಬಾಸ್ ಮೇಸ್ತ್ರಿಗೂ ಏನೋ ಆಗಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದ್ರೆ, ಅಲ್ಲಿನ ಸಿಲೆಂಡರ್ ಸ್ಪೋಟಗೊಂಡಿತ್ತು.

    ಕಳೆದ ಮೂರು ಗಂಟೆಯ ಹಿಂದೆ ಘಟನೆ ನಡೆದರೂ ಇಲ್ಲಿಯವರೆಗೆ ಸಂಬಂಧಿಸಿದ ಇಲಾಖೆ ಯಾರೋಬ್ಬರು ಹೋಗದೇ ಇರುವುದು, ನಗರದಲ್ಲಿ ಆಡಳಿತ ಎಷ್ಟೊಂದು ಚುರುಕಾಗಿ ನಡೆಯುತ್ತಿದೆ ಎಂಬುದನ್ನ ತೋರಿಸುತ್ತಿದೆ.

    ಕೇಂದ್ರ ಸಚಿವರ ಕಚೇರಿಯ ಪಕ್ಕವೇ ನಡೆದರೂ, ಈ ಸ್ಥಿತಿ ಇರುವಾಗ ಸಾಮಾನ್ಯ ಸ್ಥಳದಲ್ಲಿ ನಡೆದರೇ ಮುಂದೇನು ಗತಿ ಎನ್ನುವಂತಾಗಿದೆ. ಯಾವುದಕ್ಕೂ ಅಧಿಕಾರಿಗಳ ಮನಸ್ಥಿತಿಯ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿವರೇ ಏನಾದರೂ ಮಾಡಬೇಕಷ್ಟೇ..!

  • ಹುಬ್ಬಳ್ಳಿ ಬೋಲೆರೋ “ಗೋವಾ ಮಾಲ್” ವಶ: ಇಬ್ಬರ ಬಂಧನ

    ಹುಬ್ಬಳ್ಳಿ:  ಕೊರೋನಾ ಲಾಕ್ ಡೌನ್ ನಿಯಮಗಳನ್ನ ಸಡಿಲಗೊಳ್ಳುತ್ತಿದಂತೆ ಮೊದಲು ನಡೆಯುತ್ತಿದ್ದ ದಂಧೆಗಳು ಮತ್ತೆ ಆರಂಭಗೊಂಡಿವೆ. ಗೋವಾಗೆ ಹೋಗಿ ಬರಲು ಅವಕಾಶ ಕೊಟ್ಟಿದ್ದೇ ತಡ, ಗೋವಾ ಡ್ರಿಂಕ್ ನಗರದೊಳಗೆ ಬರಲಾರಂಭಿಸಿದೆ.

    ಗೋವಾದಿಂದ ಮಹೇಂದ್ರ ಬೊಲೇರೋ ವಾಹನದಲ್ಲಿ ತರುತ್ತಿದ್ದ 18 ಲೀಟರ್ ಬಾಟಲಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇನ್ಸ್ ಪೆಕ್ಟರ್ ಸಂಜೀವರೆಡ್ಡಿ, ಸಿಬ್ಬಂದಿಗಳಾದ ಜಾನ್ ವರ್ಗೀಸ್, ಪಿ.ವೈ.ಮುಳಗುಂದ, ಎನ್.ಎಂ.ಶೇಖ ದಾಳಿಯನ್ನ ಮಾಡಿ, ಆರೋಪಿಗಳು ಬಂಧಿಸಿದ್ದಾರೆ.

    ಗೋವಾದಿಂದ ತಂದ ಮದ್ಯವನ್ನ ದಾವಣಗೆರೆಯ ಎಂ.ಗುರುಮೂರ್ತಿ ಹಾಗೂ ಮುಂಡರಗಿಯ ಆನಂದ ಬಳಗೇರ ಬೇರೆಡೆ ಸಾಗಾಟ ಮಾಡುತ್ತಿದ್ದಾಗ ಗಬ್ಬೂರ ಬೈಪಾಸ್ ಬಳಿ, ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

  • ಸರ್ಚ್ ಸಂಗಾತಿ ಗೂಗಲ್ ಗೆ ಇಂದು 22 ನೇ ವರ್ಷದ ಹುಟ್ಟುಹಬ್ಬ, ನೀವು ವಿಶ್ ಮಾಡಿ.

    ಇಡೀ ಬ್ರಹ್ಮಾಂಡವೇ ಗುರುತ್ವ ಬಲವನ್ನು ನಂಬಿ ನಡೆಯುತ್ತಿರುವಾಗ. ಇಲ್ಲಿ ಪರಸ್ಪರ ಅವಲಂಬನೆ ಅನಿವಾರ್ಯ ಸಂಗತಿ. ಮನುಷ್ಯನ ಜ್ಞಾನ ವಿಸ್ತಾರಗೊಳ್ಳುತ್ತಾ ಸಾಗಿದಂತೆ ಹೊಸ ಹೊಸ ಆವಿಷ್ಕಾರವು ಅನಿವಾರ್ಯವಾಗಿತ್ತಾ ಸಾಗಿತು… ಆ ಪರಿಣಾಮವಾಗಿ ಇಂದು ಸಾವಿರಾರು ಮೈಲಿ ದೂರದಲ್ಲಿರುವ ಸ್ನೇಹಿತರೊಂದಿಗೆ ಬಂಧುಗಳೊಂದಿಗೆ ಸಂಪರ್ಕ ಹೊಂದುವ ಸಾಮರ್ಥ್ಯ ನಮಗೆ ದೊರೆತಿದೆ.
    ಇನ್ನೂ, ಮಾಹಿತಿ ತಂತ್ರಜ್ಞಾನ ಅದರ ಇನ್ನೊಂದು ಮುಖ.


    ಪರಿಚಯವಿಲ್ಲದೆ ಇರುವವರನ್ನು ಪರಿಚಯಿಸುವ, ದೂರವಿದ್ದವರನ್ನೂ ಆತ್ಮೀಯನನ್ನಾಗಿಸುವ, ಭಾಷೆ,ಗಡಿ,ಮೇಲೂ ಕೀಳು ಎಲ್ಲವನ್ನೂ ಮೀರಿಸಿ ನಮ್ಮನ್ನೆಲ್ಲ ಬೆಸೆಯುವ ಕೊಂಡಿಯಾಗಿ ಈ ಮಾಹಿತಿ ತಂತ್ರಜ್ಞಾನ ಕೆಲಸ ಮಾಡುತ್ತಿದೆ. ಆದರೆ ಮಾಹಿತಿ ತಂತ್ರಜ್ಞಾನದ ಮೂಲ ನಾನೇ, ಎಂಬಂತೆ ಬೆಳೆದು ನಿಂತಿರುವ ಗೂಗಲ್ ಗೆ ಇಂದು 22 ನೇ ವರುಷದ ಹುಟ್ಟುಹಬ್ಬ.
    ಹಾಗಾದರೆ ಬನ್ನಿ ತಿಳಿಯೋಣ ಜಗತ್ತಿನ ಅತಿದೊಡ್ಡ ಸರ್ಚ್ ಎಂಜಿನ್ ಕುರಿತು.  ಹೌದು ಗೂಗಲ್ ಜಗತ್ತಿನ ಅತಿ ದೊಡ್ಡ ಮಾಹಿತಿ ಹುಡುಕುವ ಸಂಗಾತಿ. ವಿಶೇಷ ಎಂದರೆ ಇನ್ನೂ ಜಗತ್ತನ್ನೆ ಸರಿಯಾಗಿ ಕಂಡಿರದ ಪುಟ್ಟ ಮಗುವಿನಿಂದ ಹಿಡಿದು ಪೋಲಿ ಮುದುಕರವರೆಗೂ ಗೂಗಲ್ ಅತ್ಯಂತ ಆಪ್ತ ಮತ್ತು ಗುಪ್ತ ಮಿತ್ರ ಎಂದರೆ ತಪ್ಪೇನಲ್ಲ. ಅಷ್ಟೊಂದು ಜನಮಿಳಿತವಾಗಿ ಹೋಗಿದೆ ಗೂಗಲ್.


    ಮರೆತು ಹೋದ ದಾರಿಯನ್ನು ನೆನಪಿಸುವ, ಆಪ್ತರಿಗೆ ಪ್ರೀತಿಯ ಸಂದೇಶ ಕಳುಹಿಸಲು ಸಹಾಯ ಮಾಡುವ, ಕಳೆದವರನ್ನು ಹುಡುಕಿ ಕೊಡುವ, ನಿಮ್ಮ ಅಡುಗೆ ಕೊಣೆ, ಶೌಚಾಲಯ, ಬೆಡ್ ರೂಮಿಗೂ ದಾರಿ ಹುಡುಕಿಕೊಡು ಎಂದರೆ ಚಾಚು ತಪ್ಪದೆ ನಿಮ್ಮ ಸಹಾಕ್ಕೆ ನಿಲ್ಲುವ ಏಕೈಕ ಆಪ್ತ ಮಿತ್ರ ಈ ಗೂಗಲ್.
    ಇಂದಿನ ಅತಿ ವೇಗದ ಜೀವನ ಶೈಲಿಯಲ್ಲಿ ಕೇಳಿದ್ದೆಲ್ಲವನ್ನೂ, ಸಿಗಲಾರದ್ದೆಲ್ಲವನ್ನೂ, ಕ್ಷಣಾರ್ಧದಲ್ಲಿ ಸಿಗುವಂತೆ ಮಾಡುವಲ್ಲಿ ಈ ಸರ್ಚ್ ಎಂಜಿನ್ ಬಹಳ ಸಹಾಯಕಾರಿಯಾಗಿ ಬೆಳೆದಿದೆ.  ಕೃತಕ ಬುದ್ದಿಮತ್ತೆಯ ತಂತ್ರಜ್ಞಾನ ಬಂದ ನಂತರವಂತೂ ಈ ಗೂಗಲ್ ನಾವು ಕೇಳದೆ ಇರುವುದನ್ನು ಕೂಡ ನಮ್ಮ ಕಣ್ಣೆದುರಿಗೆ ತಂದಿಡುವ ಸಾಮರ್ಥ್ಯವನ್ನು ಹೊಂದಿದೆ.

    ಗೂಗಲ್ ಇತಿಹಾಸ:
    ಇಂದಿಗೆ ಬರೋಬ್ಬರಿ 22 ವರ್ಷಗಳ ಹಿಂದೆ ಅಂದರೆ 27 ಸೆಪ್ಟೆಂಬರ್ 1998 ರಲ್ಲಿ ಕ್ಯಾಲಿಫೊರ್ನಿಯಾದ ಸ್ಟ್ಯಾನಫೋರ್ಡ್ ವಿವಿಯ ಪಿಹೆಚ್.ಡಿ ಸಂಶೋಧಕರಾಗಿದ್ದ ಲ್ಯಾರಿ ಪೇಜ್ ಮತ್ತು ಸರ್ಜಿ ಬಿನ್ ಎಂಬೆರಡು ಸಂಶೋಧನಾ ವಿದ್ಯಾರ್ಥಿಗಳಿಂದ ಸ್ಥಾಪನೆಯಾದ ಸಂಸ್ಥೆ.

    ಗೂಗಲ್ ಕೇಂದ್ರ ಕಛೇರಿ:

    ಇದೀಗ ಇದರ ಕೇಂದ್ರ ಕಛೇರಿ ಮೌಂಟೇನ್ ವ್ಹಿವ್ ಕ್ಯಾಲಿಫೋರ್ನಿಯಾದಲ್ಲಿದೆ. ಇದನ್ನು ರೂಡಿಯಲ್ಲಿ ಗೂಗಲ್ ಪ್ಲೇಕ್ಸ್ ಎಂದು ಕರೆಯಲಾಗುತ್ತದೆ.

    ಗೂಗಲ್ ಮುಖ್ಯಸ್ಥ ಭಾರತೀಯ:

    ಪ್ರಸ್ತುತ ಭಾರತೀಯ ಮೂಲದ ಅಮೆರಿಕಾ ಉದ್ಯಮಿಯಾಗಿರುವ ಸುಂದರ್ ಪಿಚೈ ಗೂಗಲ್ ಸಂಸ್ಥೆಯ ಮುಖ್ಯಸ್ಥ.

    ಗೂಗಲ್ ಎಂದರೆ ಎನು:

    ಅಂದಹಾಗೆ ಗೂಗಲ್ ಎಂದರೆ ಇಂಗ್ಲೀಷ್ ಪದದ googol ನ ಅನ್ವರ್ಥ ನಾಮ ಆಂಗ್ಲ ಭಾಷೆಯ googol ಎಂದರೆ ಹತ್ತರ ಮುಂದೆ ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ.

                                       10¹⁰⁰.

    ಇನ್ನೂ ಈ ಗೂಗಲ್ ಸಂಸ್ಥೆ ಇರುವ ಸ್ಥಳದ ಹೆಸರು ಗೂಗಲ್ ಪ್ಲೆಕ್ಸ್. ಇಲ್ಲಿ ಗೂಗಲ್ ಪ್ಲೆಕ್ಸ್ ಎಂದರೆ ಹತ್ತರ ಮುಂದೆ ಹತ್ತು ಸೊನ್ನೆ ಬರೆದು ಆ ಸಂಖ್ಯೆಯ ಎದುರು ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ ಎಂದರ್ಥ.

    ಇಷ್ಟೊಂದು ಮಾಹಿತಿಯನ್ನು ಯಾವ ತೊಂದರೆ ಇಲ್ಲದೆ ತನ್ನ ಚಿಕ್ಕ ಚಿಪ್ ಒಂದರಲ್ಲಿ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನ ಇದಕ್ಕೆ ಇದೆ ಎಂಬುದನ್ನು ಗೂಗಲ್ ಪ್ರತಿನಿಧಿಸುತ್ತದೆ.
    ಒಟ್ಟಿನಲ್ಲಿ …ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಗೆಳೆಯ ಗೂಗಲ್ ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ …ನೀವು ವಿಶ್ ಮಾಡಬಹುದು….

    #ಹ್ಯಾಪಿ ಬರ್ತಡೆ ಗೂಗಲ್.

  • ಧಾರವಾಡದಲ್ಲಿಂದು 232 ಪಾಸಿಟಿವ್- 118 ಗುಣಮುಖ: 4ಸೋಂಕಿತರು ಸಾವು

    ಧಾರವಾಡದಲ್ಲಿಂದು 232 ಪಾಸಿಟಿವ್- 118 ಗುಣಮುಖ: 4ಸೋಂಕಿತರು ಸಾವು

    ಧಾರವಾಡದಲ್ಲಿಂದು 232 ಪಾಸಿಟಿವ್- 118 ಗುಣಮುಖ: 4ಸೋಂಕಿತರು ಸಾವು

    ಧಾರವಾಡ ಜಿಲ್ಲೆಯಲ್ಲಿ 232 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ 16917 ಪಾಸಿಟಿವ್ ಸಂಖ್ಯೆಗಳಾಗಿವೆ. ಜಿಲ್ಲೆಯಲ್ಲಿ ಇಂದು 118 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 13847 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕಿನಿಂದ 479 ಸಾವಿಗೀಡಾಗಿದ್ದಾರೆ. ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ..

  • ಎಲ್ಲ ಲಾಬಿಗಳ ನಡುವೆ ‘ಕೆ.ಬಿ.ಗುಡಸಿ’ ಕವಿವಿ ‘ಕುಲಪತಿ’ ನೇಮಕ

    ಧಾರವಾಡ: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಕರ್ನಾಟಕವ ವಿಶ್ವವಿದ್ಯಾಲಯದ ಖಾಯಂ ಕುಲಪತಿಯ ಆಯ್ಕೆಗೆ ಇಂದು ತೆರೆ ಬಿದ್ದಿದೆ. ಹಲವು ಕುತೂಹಲಗಳಿಂದ ಕೂಡಿದ್ದ ಕುಲಪತಿಗಳ ಆಯ್ಕೆ ಒಂದಿಲ್ಲೊಂದು ವಿವಾದದಿಂದಾಗಿ ಹಿಂದುಳಿದಿತ್ತು.

    ಜಾತಿಯ ಸೋಂಕು, ಆಯ್ಕೆಯಲ್ಲಿ ಲಾಬಿ ರಾಜಕಾರಣ ಸೇರಿದಂತೆ ಖಾಯಂ ಕುಲಪತಿಯ ನೇಮಕ ಕಗ್ಗಂಟಾಗಿಯೇ ಉಳಿದಿತ್ತು. ಆದರೆ ಇದೀಗ ರಾಜ್ಯಪಾಲರ ಕಛೇರಿಯಿಂದ ಹೋರ ಬಿದ್ದಿದೆ ಎನ್ನಲಾದ ಆದೇಶ ಪ್ರತಿಯೊಂದರ ಅನ್ವಯ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಹಳ ಆಯ್ಕೆಗೆ ನೇಮಿಸಿದ್ದ ಆಯ್ಕೆ ಸಮಿತಿಯ ವರದಿಯನ್ನು ಆಧರಿಸಿ ಇಂದು ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೋ. ಕೆ.ಬಿ.ಗುಡಸಿ ಯವರನ್ನು ಮುಂದಿನ ನಾಲ್ಕು ವರ್ಷಗಳ ಕಾಲ ಕವಿವಿಯ ಕುಲಪತಿಯನ್ನಾಗಿ  ನೇಮಿಸಿರುವ ಕುರಿತು ಆದೇಶ ಹೊರಬಂದಿದೆ.

    ಈ ಹುದ್ದೆಗೆ ಒಟ್ಟು 96 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅರ್ಹತೆಗಳನ್ನು ಆಧರಿಸಿ 25 ಜನರನ್ನು ಅನರ್ಹರೆಂದು ತಿರಸ್ಕರಿಸಲಾಗಿತ್ತು. ಉಳಿದವರಲ್ಲಿ 3 ಜನರ ಹೆಸರನ್ನು  ಶೋಧನಾ ಸಮಿತಿಯು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅಂತಿಮವಾಗಿ ಕಳೆದ 15 ತಿಂಗಳುಗಳಿಂದ ಖಾಲಿ ಇರುವ ಕವಿವಿಯ ಕುಲಪತಿ ಕುರ್ಚಿಗೆ ಹಿಡಿದಿದ್ದ ಗ್ರಹಣ ಇಂದು ಸರಿದಂತಾಗಿದೆ.

    ಪ್ರೊ. ಕೆ.ಬಿ.ಗುಡಸಿ ಪ್ರಸ್ತುತ ಕವಿವಿ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿದ್ದರು. ತಮ್ಮ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ನಾಡಿನ ಜನರ ಮೆಚ್ಚುಗೆಯನ್ನು ಗಳಿಸಿದ್ದರು.

    ವಿಜ್ಞಾನ ಕೇಂದ್ರಕ್ಕೆ ಜನಪ್ರಿಯತೆಯನ್ನು ತಂದುಕೊಟ್ಟ ಪ್ರೊಫೆಸರ್

    ಸಮರ್ಥ ಆಡಳಿತಗಾರರಾಗಿ ಅವರು ವಿಜ್ಞಾನ ಕೇಂದ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಂದ ನಂತರ ಜನ ಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವ ಕಾರ್ಯಕ್ಕೆ ಬಲ ದೊರೆತಿತ್ತು.
    ಸ್ವತಃ ಒಬ್ಬ ವಿಜ್ಞಾನಿಯಾಗಿದ್ದರೂ ತಮ್ಮ ಈ ಕಾರ್ಯಾವಧಿಯಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಿಕ್ಷಕರು, ವಿದ್ಯಾರ್ಥಿಗಳ ಜೊತೆ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದರು.
    ಅವರು ಇತ್ತಿಚಿಗೆ ಆಯೋಜಿಸಿದ್ದ ವಿಜ್ಞಾನ ಸಮ್ಮೇಳನ , ಸೇರಿದಂತೆ ವಿಜ್ಞಾನ ಮತ್ತು ಧರ್ಮದ ಕುರಿತು ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡದ ಹೆಸರನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡಿದ್ದರು. ಅವರ ಆಡಳಿತ ಶೈಲಿ ಅವರ ವಾಕ್ ಚಾತುರ್ಯ, ಅವರ ವಿಶಿಷ್ಟ ಕನ್ನಡ ಮಾತನಾಡುವ ಪರಿ, ಎಲ್ಲವೂ ವಿಜ್ಞಾನ ಕೇಂದ್ರಕ್ಕೆ ಬೇಟಿ ನೀಡಿದವರನ್ನು ಆಕರ್ಶಿಸಿದ್ದವು.
    ಪ್ರೊ. ಗುಡಸಿ ಅವರ ನೇತ್ರತ್ವದಲ್ಲಿ ವಿಜ್ಞಾನ ಕೇಂದ್ರದಲ್ಲಾದ ಬದಲಾವಣೆಗಳು ಮತ್ತು ನಾವೀನ್ಯತೆಯಿಂದಾಗಿ ಧಾರವಾಡದಲ್ಲಿ ಮತ್ತೊಂದು ಪ್ರವಾಸಿಗರನ್ನು ಆಕರ್ಶಿಸುವ ತಾಣವಾಗಿ ವಿಜ್ಞಾನ ಕೇಂದ್ರ ಮನ್ನಣೆಗಳಿಸಿರುವುದು ವಿಶೇಷ.

    ಇಂದು ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ.ಕೆ ಬಿ ಗೂಢಸಿ ಅವರು ನೇಮಕ ಆಗಿದ್ದಾರೆ…ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇರುವ `#ಅಮರ್_ಜವಾನ’ ಸ್ಮಾರಕಕ್ಕೆ ನಮನ ಸಲ್ಲಿಸುವ ಮುಖಾಂತರ ಅಧಿಕಾರ ವಹಿಸಿಕೊಂಡು #ರಾಷ್ಟ್ರೀಯತೆ ಮೆರೆದ ಕರ್ನಾಟಕ ರಾಜ್ಯದ ಮೊದಲ ಕುಲಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.. ಸಿಂಡಿಕೇಟ್ ಸದಸ್ಯರಾದ ರವಿ ಮಾಳಗೇರ, ಅಧ್ಯಕ್ಷ ಅಮಿತ್ ಶಿಂಧೆ, ಡಾ.ಶಿವು ಭಜಂತ್ರಿ , ಡಾ. ಕಿರಣ್ ಹೊಂಬಾಳ, ಡಾ. ಸಂತೋಷ್ ಉಪಸ್ಥಿತರಿದ್ದರು…

                              ಧನ್ಯವಾದಗಳೊಂದಿಗೆ

    ಮಂಜು ಹೊಂಗಲದ
    ಗೌರವಾಧ್ಯಕ್ಷರು,
    ಕರ್ನಾಟಕ ವಿಶ್ವವಿದ್ಯಾಲಯ
    ಸಂಶೋಧನಾ ವಿದ್ಯಾರ್ಥಿಗಳ ಸಂಘ
    ಧಾರವಾಡ

  • ಸೋಮವಾರ ಬಂದ್ ಹಿನ್ನೆಲೆ: ಬಿಎ/ಬಿಕಾಂ ಪರೀಕ್ಷೆ ಮುಂದೂಡಿಕೆ: ಕವಿವಿ

    ಧಾರವಾಡ: ಸೋಮವಾರ ರೈತರ ಪ್ರತಿಭಟನೆ ಇರುವುದರಿಂದ ಅಂದು ನಡೆಯಬೇಕಾಗಿದ್ದ ಸ್ನಾತಕ ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ತಿಳಿಸಿದೆ.

    ಈ ಬಗ್ಗೆ ಸುತ್ತೋಲೆಯನ್ನ ಹೊರಡಿಸಿರುವ ಕವಿವಿ, ಕರ್ನಾಟಕ ರಾಜ್ಯದ ವಿವಿಧ ರೈತ ಸಂಘಟನೆಗಳು ಸೆಪ್ಟಂಬರ್ 28ರಂದು ರಸ್ತೆ ತಡೆ ಹಾಗೂ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ ಸಂಭವಿದೆಯಾದ್ದರಿಂದ ಅಂದು ನಡೆಯಬೇಕಿದ್ದ ಸ್ನಾತಕ/ದೂ ಸಂಪರ್ಕ ಶಿಕ್ಷಣದಡಿ ಬರುವ ಬಿ.ಎ/ಬಿಕಾಂ ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ತಿಳಿಸಿದೆ.

    ಮುಂದೂಡಿದ ವಿಷಯದ ಪರೀಕ್ಷೆಗಳ ದಿನಾಂಕವನ್ನ ಸಧ್ಯದಲ್ಲೇ ತಿಳಿಸಲಾಗುವುದೆಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯ ಮಾಪಾನ ವಿಭಾಗ ತಿಳಿಸಿದೆ.

  • ಕುಂದಗೋಳದ ಬಳಿ ಕಾರು-ಬಸ್ ಡಿಕ್ಕಿ-ಇಬ್ಬರಿಗೆ ಗಂಭೀರ ಗಾಯ

    ಧಾರವಾಡ: ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಬಸ್ ಗೆ ಹಾಗೂ ಕುಂದಗೋಳದಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ಕಾರಿನ ಮುಂಭಾಗಕ್ಕೆ ಬಸ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರಿಗೆ ತೀವ್ರ ಥರದ ಗಾಯಗಳಾಗಿದ್ದು, ಇಬ್ಬರನ್ನೂ ಕಿಮ್ಸಗೆ ರವಾನೆ ಮಾಡಲಾಗಿದೆ.

    ಯರೇಬೂದಿಹಾಳ ಕ್ರಾಸ್ ಬಳಿ ನಡೆದ ಘಟನೆಯಲ್ಲಿ ಗಾಯಗೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದ್ದು, ಪ್ರಕರಣ ಕುಂದಗೋಳ ಠಾಣೆಯಲ್ಲಿ ದಾಖಲಾಗಿದೆ. ಬಸ್ ಚಾಲಕನಿಂದ ಅಪಘಾತದ ಬಗ್ಗೆ ಮಾಹಿತಿಯನ್ನ ಪಡೆಯಲಾಗುತ್ತಿದೆ.

  • “ಚಹಾ” ಮಾರೋ ವೇಷ- ಕಾಲಿ”ಮಿರ್ಜಿ” ಕಾರ್ಯಾಚರಣೆ- ಮಾರೋರ ರಾಬರಿ ಬಯಲು..!

    ಹುಬ್ಬಳ್ಳಿ: ನೀವೂ ಟ್ರೇನನಲ್ಲಿ ಹೋಗುತ್ತಿದ್ದರೇ ಚಾ.. ಚಾ.. ಚಾ.. ಎಂದು ಧ್ವನಿಯನ್ನ ಕೇಳಿಯೇ ಇರುತ್ತೀರಿ. ಹಾಗೇ ಬಂದು ಹೋಗುವವರೇ ನಿಮ್ಮ ಬ್ಯಾಗನ್ನೂ ಎಗರಿಸಿ ಹೋಗುತ್ತಿದ್ದರೆಂಬ ಸತ್ಯವನ್ನ ರೇಲ್ವೆ ಪೊಲೀಸರು ಬಯಲು ಮಾಡಿದ್ದು, ಆರೋಪಿಗಳಿಬ್ಬರನ್ನ ಬಂಧನ ಮಾಡಿದ್ದಾರೆ.

    ಚಲಿಸುವ ರೇಲ್ವೆಯಲ್ಲಿ ಚಹಾ ಮಾರಾಟ ಮಾಡುತ್ತಲೇ ಮಹಿಳೆಯರನ್ನ ಬ್ಯಾಗನ್ನ ಕದ್ದು ಹೊರಗೆ ಎಸೆದು ಕಳ್ಳತನ ಮಾಡುತ್ತಿದ್ದ ಮಂಟೂರ ರಸ್ತೆಯ ಯೋಹಾನಕುಮಾರ ಪ್ರಾನ್ಸಿಸ್ ಕೂಂದರ್ತಿ ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟುವನ್ನ ಬಂಧನ ಮಾಡಲಾಗಿದೆ.

    ಬಂಧಿತರಿಂದ ಸುಮಾರು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

    ಚಾಲಾಕಿ ಕಳ್ಳರು, ಮಹಿಳೆಯರ ಬ್ಯಾಗನ್ನ ಕದ್ದು ಹೊರಗೆ ಒಗೆದು ಆ ಜಾಗವನ್ನ ಗುರುತು ಮಾಡಿಕೊಳ್ಳುತ್ತಿದ್ದರು. ನಂತರ ಮುಂಬರುವ ನಿಲ್ದಾಣದಲ್ಲಿಳಿದು ನಡೆದುಕೊಂಡು ಬಂದು ಬ್ಯಾಗಿನಲ್ಲಿದ್ದ ಎಲ್ಲವನ್ನೂ ದೋಚಿ, ಬ್ಯಾಗನ್ನ ಅಲ್ಲಿಯೇ ಒಗೆದು ಹೋಗುತ್ತಿದ್ದರು.

    ರೇಲ್ವೆ ಠಾಣೆಯ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ, ಪಿಎಸೈ ಎಂ.ಸತ್ಯಪ್ಪ, ಸಿಬ್ಬಂದಿಗಳಾದ ಪ್ರವೀಣ ಪಾಟೀಲ, ರಮೇಶ ಲಮಾಣಿ, ಸುಭಾಸ ದಳವಾಯಿ, ರಮೇಶಕುಮಾರ ಕಟಗಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.