Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಬಾರ್ ಓಪನ್: ಕಾನೂನು ಇವರಿಗೆ ಅನ್ವಯವಾಗುವುದಿಲ್ಲವೋ…!?

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಮದ್ಯ ಪ್ರಿಯರು ಬೇರೆ ಜಿಲ್ಲೆಗಳಿಗೆ ಹೋಗಿ ತರುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಧಾರವಾಡದ ಜಿಲ್ಲಾಧಿಕಾರಿಯವರು ಮದ್ಯ ಸೇವನೆ ಮಾಡುವವರಿಗೆ ಅನುಕೂಲ ಮಾಡಿಕೊಟ್ಟಿದ್ದು, ಅದಕ್ಕಾಗಿ ಸಮಯವನ್ನೂ ಮೀಸಲು ಮಾಡಿದ್ದಾರೆ. ಆದರೆ, ಹುಬ್ಬಳ್ಳಿಯಲ್ಲಿ ಆ ಸಮಯವನ್ನೂ ಮೀರಿ ಬಾರ್ ಓಪನ್ ಆಗಿರುವುದು ಕಂಡು ಬಂದಿದೆ.

ವೆಲ್ ಕಂ ಬಾರ್ ನಿಗದಿತ ಸಮಯವನ್ನ ಮೀರಿ, ತೆಗೆದಿದ್ದಲ್ಲದೇ ಜಿಲ್ಲಾಡಳಿತ ನೀಡಿರುವ ಸಮಯದ ಬಗ್ಗೆ ಬೇರೆ ಥರದಲ್ಲಿಯೇ ಮಾತನಾಡುತ್ತಿದ್ದಾರೆ. ಇಂತವರಿಗೆ ಕಾನೂನು ಪಾಲನೆ ಎಂಬುದು ದುಸ್ತರವಾಗಿದೆ.

ಜಿಲ್ಲಾಡಳಿತವು ಮದ್ಯ ಪ್ರಿಯರಿಗೆ ಅನುಕೂಲ ಮಾಡಿಕೊಟ್ಟ ಸಮಯವನ್ನ ಮೀರಿ ಮದ್ಯವನ್ನ ತಂದು ಶೇಖರಣೆ ಮಾಡಬಹುದೇ ಎಂಬುದನ್ನ ಸಂಬಂಧಿಸಿದವರೇ ಉತ್ತರ ನೀಡಬೇಕಿದೆ.

Leave a Reply

Your email address will not be published. Required fields are marked *