Karnataka Voice

Latest Kannada News

ಉಸ್ತಾದ ಅಬ್ದುಲ ಕರೀಂ ಖಾನ್ ಸಾಹೇಬ್ ಸ್ಮರಣೆ: ಹುಬ್ಬಳ್ಳಿಯಲ್ಲಿ “27ರಂದು” ಸ್ವರ ಶ್ರದ್ಧಾಂಜಲಿ…!!!

27ರಂದು ‘ಸ್ವರ ಶ್ರದ್ಧಾಂಜಲಿ’ ಸಂಗೀತ ಕಾರ್ಯಕ್ರಮ

ಹುಬ್ಬಳ್ಳಿ: ಪರಂಪರಾ ಸಂಗೀತ ಪ್ರತಿಷ್ಠಾನ, ಹುಬ್ಬಳ್ಳಿ
ಮತ್ತು ಸಂಗೀತ ಗ್ರಾಮ, ಧಾರವಾಡ ಪ್ರಸ್ತುತ ಪಡಿಸುವ
‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮವನ್ನು ಸಂಗೀತ ರತ್ನ ಉಸ್ತಾದ ಅಬ್ದುಲ್ ಕರೀಮ್ ಖಾನ್ ಸಾಹೇಬರ ಸ್ಮರಣೆಯಲ್ಲಿ ಏರ್ಪಡಿಸಲಾಗಿದೆ.

ಹುಬ್ಬಳ್ಳಿಯ ರೇಲ್ವೇ ಸ್ಟೇಶನ್ ಹತ್ತಿರದ ಈಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 27 ಸಂಜೆ 5:00ಕ್ಕೆ ಸಂಗೀತ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಕಲಾವಿದರಾದ ಪಂ ಸೋಮನಾಥ ಮರಡೂರ ಅವರನ್ನು ಸನ್ಮಾನಿಸಲಾಗುವುದು.


ಮುಖ್ಯ ಅತಿಥಿಗಳಾಗಿ ಭಾರತಿ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ಡಾ. ಉದಯಕುಮಾರ ದೇಸಾಯಿ, ಡಾ. ಶ್ರೀಕಾಂತ ಖೋನಾಪುರ, ಲಕ್ಷ್ಮಣ ಒಕ್ ಆಗಮಿಸಲಿದ್ದು, ಪ್ರದ್ಯುಮ್ನ ಕರ್ಪೂರ ಅವರಿಂದ ತಬಲಾ ಸೋಲೊ, ಪ್ರವೀಣ ಹೂಗಾರ ಅವರಿಂದ ಸಿತಾರ ವಾದನ, ಕುಮಾರ ಮರಡೂರ, ಕೃಷ್ಣೇಂದ್ರ ವಾಡಿಕರ, ಐಶ್ವರ್ಯಾ ದೇಸಾಯಿ, ಮಂದಾರ ಚಿತಳೆ, ಶ್ರೀನಿಧಿ ಕಾಮತ ಅವರಿಂದ ಗಾಯನ ಜರುಗಲಿದೆ. ಸಹ ಕಲಾವಿದರಾಗಿ ವಿಠ್ಠಲ ಕಟ್ಟೆಣ್ಣವರ ಉದಯರಾಜ ಕರ್ಪೂರ, ಶ್ರೀಧರ ಮಾಂಡ್ರೆ, ಪ್ರಸಾದ ಮಡಿವಾಳರ, ಬಸು ಹಿರೇಮಠ, ಸುಧೀಂದ್ರ ಸಿದ್ದಾಪುರ ಪಾಲ್ಗೊಳ್ಳಲಿದ್ದಾರೆ ಎಂದು ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ವಿಷ್ಣು ಕಟ್ಟೆಣ್ಣವರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *