“ಕೋಟಾ” ಸಚಿವಗಿರಿ ಸಿಗದ ಶಾಸಕರು ರಾಜೀನಾಮೆ ನೀಡಿದ್ರೇ “ತಕ್ಷಣ ತೆಗೆದುಕೊಳ್ಳುವೆ” ಸಿಎಂ ಹೇಳಿಕೆಗೆ ‘ಖೋಂಡಾ ಕೋಟಾ’…
ಧಾರವಾಡ: ತಾಳ್ಮೆ ಇರಬೇಕು. ತಾಳ್ಮೆ ಇದ್ದರೇ ಎಲ್ಲವೂ ಸಿಗತ್ತೆ. ಅದನ್ನ ಮೀರಿಯೂ ರಾಜೀನಾಮೆ ಕೊಟ್ಟರೇ ಕೆಲವೇ ನಿಮಿಷಗಳಲ್ಲಿ ಅಂಗೀಕಾರ ಮಾಡುತ್ತೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ ಅವರು ಖಡಕ್ ಆಗಿ ಹೇಳಿದ್ದರಿಂದ ಹಲವರು ಗಪ್ಚುಪ್ ಮೋಡ್ಗೆ ತಿರುಗಿದ್ದಾರೆಂದು ಹೇಳಲಾಗುತ್ತಿದೆ.

ರೈತ ಕೋಟಾದಲ್ಲಿ ಮಂತ್ರಿಗಿರಿ ಸಿಗತ್ತೆ ಎಂದುಕೊಂಡು ‘ನಂಬುವ’ ಅಮಾಯಕರಿಗೆ ಸುಳ್ಳು ಹೇಳಿದ್ದವರೂ ಕೂಡಾ ರಾಜೀನಾಮೆ ಮಾತು ಹೊರಗೆ ಹಾಕುತ್ತಿಲ್ಲ ಎಂಬುದು ರಹಸ್ಯವಾಗಿ ಉಳಿದಿಲ್ಲ. ಇದಕ್ಕೆ ಕಾರಣ ಸಿಎಂ ಅವರ ಖಡಕ್ ಹೇಳಿಕೆ.
ರಾಜ್ಯದ 224 ಶಾಸಕರು ಕೂಡಾ ಒಂದಿಲ್ಲಾ ಒಂದು ರೀತಿಯಲ್ಲಿ ರೈತ ಕುಟುಂಬದಿಂದ ಬಂದವರೇ ಆಗಿದ್ದಾರೆ ಎಂಬುದು ರಾಜ್ಯದ ಪ್ರಜ್ಞಾವಂತ ನಾಗರಿಕರಿಗೆ ತಿಳಿದಿದೆ. ಆದರೂ, ಕೆಲವರು ‘ಕೋಟಾ’ ಬಯಸಿದ್ದು ನಗೆಗಿಡು ಮಾಡಿತ್ತು.
ಈಗ ಸಿಎಂ ಡಿ. ಕೆ.ಶಿವಕುಮಾರ ಖಡಕ್ ವಾರ್ನಿಂಗ್ ನೀಡಿದ್ದರಿಂದ ಮಂತ್ರಿ ಹೋಗ್ಲಿ ಶಾಸಕ ಸ್ಥಾನ ಉಳಿದ್ರೇ ಸಾಕು ಎಂದುಕೊಳ್ಳುವ ಸ್ಥಿತಿ ಬಂದಿರುವದಂತೂ ಸತ್ಯ… ಅಲ್ಕವೇ…!?
