Karnataka Voice

Latest Kannada News

“DK” ಸಂಪುಟದಲ್ಲಿ ಎಚ್ಕೆ ಇಲ್ಲಾ… ಎಸ್‌ಎಸ್‌ಎಂ ಇಲ್ಲಾ… ಲಕ್ಷ್ಮೀ ಹೆಬ್ಬಾಳ್ಕರೂ ಇಲ್ಲಾ… ಅಚ್ಚರಿ ಮೂಡಿಸಿದ ಸಚಿವರ ಲಿಸ್ಟ್…!!!

Spread the love

ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯುತ್ತಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಚ್ಚರಿ ಪಡುವಂತಹ ಲಿಸ್ಟ್ ಹೊರ ಬಂದಿದೆ.

ಹಿರಿಯ ನಾಯಕ ಎಚ್.ಕೆ.ಪಾಟೀಲ ಅವರನ್ನ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಆದರೆ, ರೋಣ ಶಾಸಕ ಜಿ.ಎಸ್.ಪಾಟೀಲ ಅವರನ್ನ ಸ್ಪೀಕರ್ ಮಾಡಲಾಗಿದೆ. ಈ ಮೂಲಕ ಜಿಎಸ್‌ಪಿ ಮೊದಲ ಬಾರಿಗೆ ಪ್ರಮುಖ ಹುದ್ದೆಯನ್ನ ಪಡೆದಿದ್ದಾರೆ.

ದಾವಣಗೆರೆಯ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನೂ ಸಂಪುಟದಿಂದ ಕೈಬಿಡಲಾಗಿದೆ. ಮೊದಲ ಬಾರಿಗೆ ಶಾಸಕರಾಗಿರುವ ಮಾಯಕೊಂಡದ ಬಸವಂತಪ್ಪ ಅವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನ ಕೈಬಿಟ್ಟಿದ್ದು ತೀವ್ರ ಅಚ್ಚರಿಗೆ ಕಾರಣವಾಗಿದೆ. ಬಿಜೆಪಿ ಬಿಟ್ಟು ಬಂದಿದ್ದ ಲಕ್ಷ್ಮಣ ಸವದಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.


Spread the love

Leave a Reply

Your email address will not be published. Required fields are marked *

You may have missed