Posts Slider

Karnataka Voice

Latest Kannada News

ಜೆಎಸ್ ಎಸ್ ಕಾಲೇಜ್ ಬಳಿ ಮೊಪೇಡ್ ಸ್ಕೀಡ್: ಕರಿಯಪ್ಪನ ಸ್ಥಿತಿ ಗಂಭೀರ

1 min read
Spread the love

ಧಾರವಾಡ: ಟಿವಿಎಸ್ ಮೋಪೇಡ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ತೀವ್ರವಾದ ಗಾಯಗಳಾದ ಘಟನೆ ವಿದ್ಯಾಗಿರಿಯ ಜೆಎಸ್ ಎಸ್ ಕಾಲೇಜು ಬಳಿ ಸಂಭವಿಸಿದ್ದು, ಗಾಯಾಳುವನ್ನ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಧಾರವಾಡ ತಾಲೂಕಿನ ಲೋಕೂರ ಗ್ರಾಮದ ಕರಿಯಪ್ಪ ಮಹದೇವಪ್ಪ ಗೊರವನಕೊಳ್ಳ ಎಂಬ ವ್ಯಕ್ತಿಯೇ ತೀವ್ರವಾಗಿ ಗಾಯಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗೌಂಡಿ ಕೆಲಸ ಮಾಡುವ ಕರಿಯಪ್ಪ ಎಂದಿನಂತೆ ತನ್ನ ಟಿವಿಎಸ್ ಮೊಪೇಡನಲ್ಲಿ ಗಾಂಧಿನಗರದತ್ತ ಹೊರಟಿದ್ದ. ಸಡನ್ನಾಗಿ ಆಯತಪ್ಪಿ ಬಿದ್ದ ಪರಿಣಾಮ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ತೀವ್ರವಾದ ರಕ್ತಸ್ರಾವವಾಗಿತ್ತು.

ಘಟನೆಯ ಬಗ್ಗೆ ದೂರು ದಾಖಲು ಮಾಡಿಕೊಂಡಿರುವ ಸಂಚಾರಿ ಠಾಣೆಯ ಪೊಲೀಸರು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.


Spread the love

Leave a Reply

Your email address will not be published. Required fields are marked *