Tag: anilkumar patil

  • ಅನಿಲಕುಮಾರ ಪಾಟೀಲ “ಬಂಗಾರ ಹರಾಜಿಗೆ” ಬ್ಯಾಂಕ್ ನೋಟಿಸ್…!!

    ಅನಿಲಕುಮಾರ ಪಾಟೀಲ “ಬಂಗಾರ ಹರಾಜಿಗೆ” ಬ್ಯಾಂಕ್ ನೋಟಿಸ್…!!

    ಹುಬ್ಬಳ್ಳಿ: ಸಾಲದ ಹೊಣೆಗಾಗಿ ಅಡಮಾನವಿಟ್ಟ ಬಂಗಾರದ ಆಭರಣಗಳನ್ನ ಹರಾಜು ಹಾಕಲು ಬ್ಯಾಂಕ್ ಆಫ್ ಬರೋಡ ನಿರ್ಧರಿಸಿದ್ದು, ಅದಕ್ಕಾಗಿ ಹಲವರಿಗೆ ಬಹಿರಂಗ ನೋಟಿಸ್ ಜಾರಿ ಮಾಡಿದೆ.

    ಹುಬ್ಬಳ್ಳಿಯ ವಿದ್ಯಾನಗರದ ಶಾಖೆ ಹಾಗೂ ವಿವಿಧ ಶಾಖೆಯಿಂದ ಪ್ರೇಮಕುಮಾರ ಹುಲಿಮಠ, ರೂಪಾರಾಣಿ ಪಾಟೀಲ, ಸಿದ್ಧನಗೌಡ ಜೀವನಗೌಡ ಜೀವನಗೌಡ್ರ, ಅನಿಲಕುಮಾರ ಪಿ. ಪಾಟೀಲ ಹಾಗೂ ಬೆನಕಪ್ಪ ಹನಮಂತಪ್ಪ ತೋಟಕರ ಸಾಲ ಪಡೆದಿರುವ ಬಗ್ಗೆ ನೋಟಿಸ್ ಹೊರ ಹಾಕಲಾಗಿದೆ.

    ಮಾರ್ಚ 17 ರೊಳಗೆ ಹಣ ಮರಳಿಸದೇ ಇದ್ದಲ್ಲಿ ಮಾರ್ಚ 18 ರಂದು ಹರಾಜು ಮಾಡಲಾಗುವುದೆಂದು ಬ್ಯಾಂಕ್ ಆಫ್ ಬರೋಡ ಬಹಿರಂಗ ನೋಟಿಸ್ ಜಾರಿ ಮಾಡಿದೆ.

  • ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಅನಿಲಕುಮಾರ ಪಾಟೀಲ…

    ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಅನಿಲಕುಮಾರ ಪಾಟೀಲ…

    ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಡಾ.ಚಂದ್ರಶೇಖರ ಗುರೂಜಿ ಹತ್ಯೆಯಾದ ಜಾಗ ಮತ್ತೆ ಇದೀಗ ಸದ್ದು ಮಾಡುತ್ತಿದ್ದು, ಅದನ್ನ ಗುರುತಿಸುವ ಚಾಲೆಂಜ್ ನ್ನ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ನೀಡಿದ್ದಾರೆ.

    ಹುಬ್ಬಳ್ಳಿಯ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಕೂತು ವೀಡಿಯೋ ಮಾಡಿಸಿಕೊಂಡಿರುವ ಅನಿಲಕುಮಾರ ಪಾಟೀಲ ಅವರು, ಅದನ್ನ ಸೆಪ್ಟೆಂಬರ್ 8ರಂದು ಅಪ್ಲೋಡ್ ಮಾಡಿದ್ದು, ಅದನ್ನ ಮತ್ತೆ ಇಂದು ಶೇರ್ ಮಾಡಿಕೊಂಡಿದ್ದಾರೆ.

    ಹಾಡುಹಗಲೇ ನಡೆದ ಕೊಲೆಯಿಂದ ಅವಳಿನಗರ ಬೆಚ್ಚಿಬಿದ್ದು, ಪ್ರೆಸಿಡೆಂಟ್ ಹೊಟೇಲನಲ್ಲಿ ಹೋಮ ಹವನಗಳು ನಡೆದಿದ್ದವು. ಇದೀಗ ಪಾಟೀಲರ ಮೂಲಕ ಮತ್ತೆ ಹತ್ಯೆ ಸ್ಥಳ ಸದ್ದು ಮಾಡತೊಡಗಿದೆ. ಇದಕ್ಕೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡಿದ್ದಾರೆ.

  • ಪಪ್ಪಿ ರಾಯನಗೌಡ-ಅನಿಲಕುಮಾರ ಪಾಟೀಲ ನಡುವೆ ಬಡಿದಾಟ: ಪೊಲೀಸ್ ಠಾಣೆಯಲ್ಲಿ ‘ಎಫ್ಐಆರ್’…

    ಪಪ್ಪಿ ರಾಯನಗೌಡ-ಅನಿಲಕುಮಾರ ಪಾಟೀಲ ನಡುವೆ ಬಡಿದಾಟ: ಪೊಲೀಸ್ ಠಾಣೆಯಲ್ಲಿ ‘ಎಫ್ಐಆರ್’…

    ಹುಬ್ಬಳ್ಳಿ: ಪಾಲಿಕೆ ಮಾಜಿ ಸದಸ್ಯ ಪ್ರಫುಲಚಂದ್ರ ರಾಯನಗೌಡ್ರ, ಪುತ್ರ ಪ್ರಭುದೇವ ರಾಯನಗೌಡ್ರ ಹಾಗೂ ಸಂಬಂಧಿ ರಾಜನಗರದ ಅನಿಲಕುಮಾರ ಪಾಟೀಲ ಮಧ್ಯೆ ಭಾನುವಾರ ರಾತ್ರಿ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹ ಬಳಿ ಹೊಡೆದಾಟ ನಡೆದ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

    file

    ಗುರಾಯಿಸಿ ನೋಡಿದ ಕಾರಣಕ್ಕೆ ಪ್ರಫುಲ್ಲಚಂದ್ರ ಅವರ ಪುತ್ರ ಪ್ರಭುದೇವ ಹಾಗೂ ಅನಿಲಕುಮಾರ ಮಧ್ಯೆ ಕಟಿಂಗ್ ಶಾಪ್‌ನಲ್ಲಿ ಜಗಳವಾಗಿ, ಹೊಡೆದಾಟಕ್ಕೆ ತಿರುಗಿತ್ತು.

    ಬಳಿಕ ಮಾಜಿ ಕಾರ್ಪೋರೇಟರ್ ಪ್ರಫುಲಚಂದ್ರ ಮಧ್ಯಪ್ರವೇಶಿಸಿದ್ದರು. ಈ ವೇಳೆ ಅನಿಲಕುಮಾರ ಕತ್ತರಿಯಿಂದ ಪ್ರಫುಲಚಂದ್ರ ಅವರ ಎಡಗೈಗೆ ಹೊಡೆದು ಗಾಯಪಡಿಸಿದ್ದಾರೆ. ಪ್ರಫುಲ್ಲಚಂದ್ರ ಚಾಕುವಿನಿಂದ ಇರಿದು ಗಾಯಪಡಿಸಿದ್ದಾರೆ ಎಂದು ದೂರು, ಪ್ರತಿದೂರಿನಲ್ಲಿ ವರದಿಯಾಗಿದೆ. ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

  • ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮನೆಯಲ್ಲಿ ಬೆಂಕಿ… ತಪ್ಪಿದ ಭಾರೀ ದುರಂತ…

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮನೆಯಲ್ಲಿ ಬೆಂಕಿ… ತಪ್ಪಿದ ಭಾರೀ ದುರಂತ…

    ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿರುವ ಧಾರವಾಡ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರ ಮನೆಯಲ್ಲಿ ವಿದ್ಯುತ್ ಮೀಟರ್ ನಲ್ಲಿ ಬೆಂಕಿ ಹತ್ತಿದ್ದು, ಸಮೀಪದಲ್ಲಿ ಗ್ಯಾಸ್ ಸಿಲೆಂಡರ್ ಯಿದ್ದ ಪರಿಣಾಮ ಆತಂಕಕ್ಕೆ ಕಾರಣವಾಗಿತ್ತು. ಅಗ್ನಿ ಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಬಹುದೊಡ್ಡ ದುರಂತವೊಂದು ತಪ್ಪಿದೆ.

    EXCLUSIVE VIDEO

    ಅನಿಲಕುಮಾರ ಪಾಟೀಲರ ಮನೆಯ ಎರಡು ಮೀಟರ್ ಗಳಲ್ಲಿ ಒಮ್ಮೆಲೆ ಬೆಂಕಿ ಹೊತ್ತಿದೆ. ಇದರಿಂದ ಮನೆಯಲ್ಲಿ ಹೊಗೆ ಸಂಪೂರ್ಣ ಆವರಿಸಿದೆ. ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು, ಹೊತ್ತಿದ ಬೆಂಕಿಯ ಸಮೀಪವಿದ್ದ ಸಿಲೆಂಡರ್ ಗಳನ್ನ ಹೊರಗೆ ಹಾಕಿ ಆಗಬಹುದಾದ ದುರಂತವನ್ನ ತಪ್ಪಿಸಿದ್ದಾರೆ.

    ಅನಿಲಕುಮಾರ ಪಾಟೀಲ ಪ್ರತಿಕ್ರಿಯೆ: ಬೆಂಕಿ ಹೇಗೆ ಹೊತ್ತಿದೆ ಎಂಬುದು ಗೊತ್ತಿಲ್ಲ. ಈಗ ಹೆಸ್ಕಾಂನವರು ಬಂದು ತಪಾಸಣೆ ಮಾಡುತ್ತಿದ್ದಾರೆ. ಮನೆಯಲ್ಲಿ ವಿದ್ಯುತ್ ಅವಘಡದಿಂದ ದೊಡ್ಡ ದುರಂತ ನಡೆಯುವ ಸಾಧ್ಯತೆಯಿತ್ತು. ಅದನ್ನ ಅಗ್ನಿಶಾಮಕ ದಳದವರು ತಪ್ಪಿಸಿದ್ದಾರೆ. ಮನೆಯಲ್ಲಿ ಯಾರಿಗೂ ಏನು ಆಗಿಲ್ಲ. ವಿದ್ಯುತ್ ತೊಂದರೆಯಾಗಿದ್ದರಿಂದ ಎರಡು ದಿನ ಹೊಟೇಲ್ ನಲ್ಲಿ ಉಳಿಯುತ್ತಿದ್ದೇವೆ.

  • ಕಿರೇಸೂರಲ್ಲಿ ಕಾಂಗ್ರೆಸ್ ನ ಸಹಾಯ ಹಸ್ತ..!

    ಕಿರೇಸೂರಲ್ಲಿ ಕಾಂಗ್ರೆಸ್ ನ ಸಹಾಯ ಹಸ್ತ..!

    ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಮಾಜಿ ಸಚಿವ ಹಾಗೂ ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿ ನೇತೃತ್ವದಲ್ಲಿ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಹಾಯ ಹಸ್ತ ಕಾರ್ಯಕ್ರಮ ನಡೆಯಿತು.

    ಧಾರವಾಡ ಜಿಲ್ಲಾ ಗ್ರಾಮೀಣ ವಿಭಾಗದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಮುಂದಾಳತ್ವದಲ್ಲಿ ಗ್ರಾಮದಲ್ಲಿ ಸಹಾಯ ಹಸ್ತಕ್ಕೆ ಚಾಲನೆ ನೀಡಲಾಯಿತು. ಇದೇ ಸಮಯದಲ್ಲಿ ಗ್ರಾಮದಲ್ಲಿ ಕೊರೋನಾ ಸೋಂಕಿನಿಂದ ಸಾವಿಗೀಡಾದ ವೀರಯ್ಯ ಪ್ರಭುಸ್ವಾಮಿಮಠ, ಬಸವರಾಜ ಕೊಂಡಗೋಳಿ, ಟಾಕನಗೌಡ ರಾಯನಗೌಡ, ಪಾರ್ವತೆವ್ವ ರಾಯನಗೌಡ್ರ ಹಾಗೂ ರಾಮಣ್ಣ ಮಂಗೋನಿ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು.

    ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ್ ಪಾಟೀಲ್  ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ನವಲಗುಂದ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರ್ಧಮಾನಗೌಡ ಹಿರೇಗೌಡ್ರ, ಮಂಜುನಾಥ್ ಮಾಯಣ್ಣವರ, ನಾರಾಯಣ ರಂಗರೆಡ್ಡಿ, ದೀಪಕ್ ಮುದಿರೆಡ್ಡಿ, ಅಮನ್ ಮುಲ್ಲಾ, ಮೌನೇಶ ರೇವಣ್ಣವರ, ಮುತ್ತು ದ್ಯಾವನೂರ್,  ಮುಖಂಡರುಗಳಾದ ವಿ.ಎಫ್. ಕಮಡೊಳ್ಳಿ, ಎಚ್.ವಿ. ಚವರಡ್ಡಿ, ಜೆ.ಕೆ. ಕಾಲವಾಡ, ವೈ.ಎಚ್. ಬಣವಿ, ಶುಭಾಷ್ ಅವಣ್ಣವರ, ಶಾಂತಯ್ಯ ಪ್ರಭುಸ್ವಾಮಿಮಠ,  ದೇವಪ್ಪ ಚಾಕರಿ, ಪಿ.ಎಸ್. ಸೋಮನಗೌಡ್ರ  ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಧಾರವಾಡ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನ: ಮುತ್ತಣ್ಣ ಶಿವಳ್ಳಿ- ಕೆ.ಎನ್.ಗಡ್ಡಿ ನಡುವೆ ತೀವ್ರ ಪೈಪೋಟಿ…!

    ಧಾರವಾಡ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನ: ಮುತ್ತಣ್ಣ ಶಿವಳ್ಳಿ- ಕೆ.ಎನ್.ಗಡ್ಡಿ ನಡುವೆ ತೀವ್ರ ಪೈಪೋಟಿ…!

    ಧಾರವಾಡ: ಕಾಂಗ್ರೆಸ್ ಪಕ್ಷದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿದ್ದು, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ಶಹರ ಮತ್ತು ಗ್ರಾಮೀಣ ಭಾಗವೆನ್ನುವ ಮಾತುಗಳು ಮತ್ತೆ ಮುನ್ನಲೆಗೆ ಬಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆ.

    ಹಾಲಿ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರ ಬದಲಾವಣೆ ಆಗುವುದು ಖಚಿತವಾಗಿದ್ದು, ಕೆಲವರು ಪ್ರಯತ್ನ ಮುಂದುವರೆಸಿದ್ದಾರೆ. ದಿವಂಗತ ಮಾಜಿ ಶಾಸಕ ಸಿ.ಎಸ್.ಶಿವಳ್ಳಿ ಅವರ ಸಹೋದರ ಮುತ್ತಣ್ಣ ಶಿವಳ್ಳಿ ಮುಂಚೂಣಿಯಲ್ಲಿದ್ದು, ಮಾಜಿ ಸಚಿವ ಕೆ.ಎನ್.ಗಡ್ಡಿ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.

    ಈಗಾಗಲೇ ಈ ಬಗ್ಗೆ ಪ್ರಮುಖವಾದ ನಾಯಕರು ಮಾತುಕತೆಯನ್ನ ನಡೆಸಿದ್ದು, ಮುತ್ತಣ್ಣ ಶಿವಳ್ಳಿ ಹಾಗೂ ಕೆ.ಎನ್.ಗಡ್ಡಿ ಅವರ ಹೆಸರು ಮುಂಚೂಣಿಯಲ್ಲಿವೆ. ಕಾಂಗ್ರೆಸ್ ಗ್ರಾಮೀಣ ಭಾಗದ ಅಧ್ಯಕ್ಷಗಿರಿಯನ್ನ ಗ್ರಾಮೀಣ ಭಾಗದಲ್ಲಿರುವ ನಾಯಕರಿಗೆ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ.

    ಮುತ್ತಣ್ಣ ಶಿವಳ್ಳಿ ಅವರಿಗೆ ಜಿಲ್ಲೆಯ ಕೆಲವು ನಾಯಕರು ಪತ್ರವನ್ನ ನೀಡಿದ್ದು, ಮಾಜಿ ಸಚಿವ ಕೆ.ಎನ್.ಗಡ್ಡಿ ಅವರನ್ನ ಮಾಡುವಂತೆ ಹಲವರು ರಾಜ್ಯದ ನಾಯಕರನ್ನ ಕೋರಿದ್ದಾರೆ. ಈ ನಡುವೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ಗಡ್ಡಿಯವರ ಜೊತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.

    ಜಿಲ್ಲಾ ಅಧ್ಯಕ್ಷಗಿರಿಯ ಕಾವು ಕಾಂಗ್ರೆಸ್ ನಲ್ಲಿ ಹೆಚ್ಚಾಗಿದ್ದು, ಇದು ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

  • ಕಲಘಟಗಿ ಕಾಂಗ್ರೆಸ್ ಗೊಂದಲ-ಕೆಪಿಸಿಸಿ ನಿರ್ಧಾರ ತೆಗೆದುಕೊಳ್ಳಲಿ: ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ

    ಕಲಘಟಗಿ ಕಾಂಗ್ರೆಸ್ ಗೊಂದಲ-ಕೆಪಿಸಿಸಿ ನಿರ್ಧಾರ ತೆಗೆದುಕೊಳ್ಳಲಿ: ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ

    ಹುಬ್ಬಳ್ಳಿ: ಕಲಘಟಗಿ ಕಾಂಗ್ರೆಸ್ ನಲ್ಲಿ ಎದ್ದಿರುವ ಗೊಂದಲದ ಬಗ್ಗೆ ಕೆಪಿಸಿಸಿಯವರೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.

    ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ವೇಳೆಯಿಂದಲೂ ತಮಗೆ ಅನಾರೋಗ್ಯದ ಕಾರಣ, ಈ ಬಗ್ಗೆ ಯಾರೂ ಏನನ್ನೂ ಕೇಳಿಲ್ಲ. ಆದರೆ, ತಡೆ ಹಿಡಿದಿರುವ ಬಗ್ಗೆ ಹೇಳಿದ್ದರೆಂದು ಅನಿಲಕುಮಾರ ಪಾಟೀಲ ತಿಳಿಸಿದರು.

    ಕಲಘಟಗಿ ಕಾಂಗ್ರೆಸ್ ನಲ್ಲಿರುವ ಗೊಂದಲವನ್ನ ಕೆಪಿಸಿಸಿ ಅವರೇ ಸರಿ ಮಾಡಬೇಕೆಂದು ಇದೇ ಸಮಯದಲ್ಲಿ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.

    ಮಾಜಿ ಸಚಿವ ಸಂತೋಷ ಲಾಡ, ಕ್ಷೇತ್ರದಲ್ಲಿ ಆಹಾರ ಧಾನ್ಯ ಹಂಚಿಕೆ ಮಾಡಲು ಬಂದ ತಕ್ಷಣವೇ ಹಲವು ಗೊಂದಲಗಳನ್ನ ಸೃಷ್ಟಿ ಮಾಡಲಾಗಿತ್ತು. ಇದೇ ವೇಳೆಯಲ್ಲಿಯೇ ಬ್ಲಾಕ್ ಅಧ್ಯಕ್ಷರನ್ನ ಬದಲಾವಣೆ ಮಾಡುವ ಮೂಲಕ, ತಮ್ಮ ಬಣ ಒಂದು ಕೈ ಮೇಲಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನಕ್ಕೀಳಿದಿದ್ದ ವಿಧಾನಪರಿಷತ್ ನ ಮಾಜಿ ಸದಸ್ಯ ನಾಗರಾಜ ಛಬ್ಬಿಯವರಿಗೆ, ಆದೇಶವನ್ನ ತಡೆ ಹಿಡಿಸುವ ಮೂಲಕ ಮಾಜಿ ಸಂತೋಷ ಲಾಡ ಅವರು, ತಮ್ಮ ಕೈ ಮೇಲಿದೆ ಎಂದು ತೋರಿಸಿಕೊಟ್ಟಿದ್ದನ್ನ ಇಲ್ಲಿ ಸ್ಮರಿಸಬಹುದು.

  • ಅಪಘಾತ ಸವಾರರ ಸ್ಥಿತಿ ಗಂಭೀರ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಅನಿಲಕುಮಾರ ಪಾಟೀಲ…!

    ಅಪಘಾತ ಸವಾರರ ಸ್ಥಿತಿ ಗಂಭೀರ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಅನಿಲಕುಮಾರ ಪಾಟೀಲ…!

    ಹುಬ್ಬಳ್ಳಿ: ಉಣಕಲ್ ಕೆರೆಯ ಎದುರಿಗಿರುವ ಪ್ರೆಸಿಡೆಂಟ್ ಹೊಟೇಲ್ ಮುಂಭಾಗದಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತಗಾಗಿ ನಿಂತಿದ್ದ ಪೊಲೀಸರನ್ನ ತಪ್ಪಿಸಿಕೊಂಡು, ಹೋಗಲು ಯತ್ನಿಸಿದ ಬೈಕ್ ಸವಾರರಿಬ್ಬರು ಕಾರಿಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

    ಧಾರವಾಡದಿಂದ ಬರುತ್ತಿದ್ದ ಕಾರಿಗೆ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕಾರಿನ ಮುಂದಿನ ಗಾಜು ಸಂಪೂರ್ಣವಾಗಿ ಹಾಳಾಗಿದ್ದು, ಬೈಕ್ ಸವಾರರಿಬ್ಬರು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದಾಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ತಮ್ಮದೇ ವಾಹನದಲ್ಲಿ ಅವರನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ.

    ತಮ್ಮ ಕೆಲಸವನ್ನ ಬಿಟ್ಟು ಯುವಕರ ಪ್ರಾಣ ಉಳಿಸಲು ಮುಂದಾದ ಅನಿಲಕುಮಾರ ಪಾಟೀಲ ಅವರ ಕಾರ್ಯವನ್ನ ಎಲ್ಲರೂ ಮೆಚ್ಚುವಂತಾಗಿದೆ. ವೀಕೆಂಡ್ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಬಾರದಿರಬಹುದೆಂದು ತಕ್ಷಣ ಜಾಗೃತರಾಗಿದ್ದು, ಪ್ರಶಂಸನೀಯವಾಗಿದೆ.

    ಘಟನಾ ಸ್ಥಳದಲ್ಲಿಯೇ ಇದ್ದ ಉತ್ತರ ಸಂಚಾರಿ ಠಾಣೆಯ ಪೊಲೀಸರು, ಎರಡು ವಾಹನಗಳನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.

    ಬೈಕ್ ಸವಾರರ ಬಳಿ ವಾಹನದ ಡಾಕುಮೆಂಟ್ ಇಲ್ಲದ ಕಾರಣ, ಪೊಲೀಸರಿಗೆ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾಗಲೇ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸರು ಪರಿಶೀಲನೆಯನ್ನ ನಡೆಸುತ್ತಿದ್ದಾರೆ.

  • ನಾಳೆ ಭಾರತ ಬಂದ್- ಹುಬ್ಬಳ್ಳಿ, ಧಾರವಾಡದಲ್ಲೂ ಬೆಂಬಲ…!

    ನಾಳೆ ಭಾರತ ಬಂದ್- ಹುಬ್ಬಳ್ಳಿ, ಧಾರವಾಡದಲ್ಲೂ ಬೆಂಬಲ…!

    ಹುಬ್ಬಳ್ಳಿ: ಕೃಷಿ ಸಂಘಟನೆಗಳು ನೀಡಿರುವ ಭಾರತ ಬಂದ್ ಗೆ ಹುಬ್ಬಳ್ಳಿ-ಧಾರವಾಡದಲ್ಲೂ ಬೆಂಬಲ ನೀಡುವುದಾಗಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮಹಾನಗರ ಸಮಿತಿ ಹೇಳಿದೆ.

    ಈ ಬಗ್ಗೆ ಕಾಂಗ್ರೆಸ್ ಮಾಡಿಕೊಂಡಿರುವ ಮನವಿ ಇಲ್ಲಿದೆ ನೋಡಿ..

    ರೈತ ಹೋರಾಟಕ್ಕೆ ಬೆಂಬಲ

    ಕರಾಳ ಕೃಷಿ ಕಾನೂನು ತಿದ್ದುಪಡಿ ವಿರೋಧಿಸಿ ನಾಳೆ ದಿನಾಂಕ: 26/3/2021 ರಂದು ರೈತ ಸಂಘಟನೆಗಳು ಕರೆ ನೀಡಿರುವ “ಭಾರತ ಬಂದ್” ಗೆ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ.

    ಆದ ಕಾರಣ ನಾಳೆ (26/3/2021) ಬೆಳಿಗ್ಗೆ 10:00 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ನಡೆಯುವ ರೈತರ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಸಮಸ್ತ ಅಭಿಮಾನಿಗಳು ಭಾಗವಹಿಸಿ ಬೆಂಬಲ ಸೂಚಿಸಬೇಕೆಂದು ಕೋರುತ್ತೇವೆ.

    ಅನಿಲಕುಮಾರ್ ಪಾಟೀಲ್

    ಅಧ್ಯಕ್ಷರು

    ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ

    ಅಲ್ತಾಫ್ ಹುಸೇನ್ ಹಳ್ಳೂರ್

    ಅಧ್ಯಕ್ಷರು

    ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ

  • ಮೂರುಸಾವಿರ ಮಠದ ಉನ್ನತ ಸಮಿತಿ ರದ್ದು ಮಾಡಿ: ಅದು ಅಧಿಕೃತವೇ ಅಲ್ಲಾ…!

    ಮೂರುಸಾವಿರ ಮಠದ ಉನ್ನತ ಸಮಿತಿ ರದ್ದು ಮಾಡಿ: ಅದು ಅಧಿಕೃತವೇ ಅಲ್ಲಾ…!

    ಹುಬ್ಬಳ್ಳಿ: ಪ್ರತಿಷ್ಠಿತ ಮೂರುಸಾವಿರ ಮಠದ ಆಸ್ತಿ ಉಳಿಸಲು ಹೋರಾಟವನ್ನ ರೂಪಿಸಲು ಪಕ್ಷಾತೀತವಾದ ಪ್ರಮುಖರು ನಿರ್ಧಾರ ಮಾಡಿದ್ದು, ಕಳೆದು ಹೋಗಿರುವ ಆಸ್ತಿಯನ್ನ ಉಳಿಸಿಕೊಳ್ಳಲು ಮುಂದಾಗುವ ನಿರ್ಧಾರವನ್ನ ಮಾಡಲಾಗಿದೆ.

    ಹುಬ್ಬಳ್ಳಿಯಲ್ಲಿ ನಡೆದ ಪಕ್ಷಾತೀತ ಮುಖಂಡರ ಸಭೆಯಲ್ಲಿ ಮೂರುಸಾವಿರ ಮಠದ ಆಸ್ತಿ ಉಳಿವಿಗಾಗಿ ಹೋರಾಟ ಮಾಡುತ್ತೇವೆ. ನಾವೂ ಯಾರೇ ಹೇಳಿದ್ದಾರೆಂದು ಹೋರಾಟ ಮಾಡುತ್ತಿಲ್ಲ. ಸಮಾಜದ ಪರವಾಗಿ ಹೋರಾಟ ರೂಪಿಸಲಾಗುತ್ತಿದೆ ಎಂದು ಪ್ರಮುಖರು ಹೇಳಿದರು.

    ಸಭೆಯ ನಂತರ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಉನ್ನತ ಮಟ್ಟದ ಸಮಿತಿಯನ್ನ ರದ್ದು ಮಾಡಬೇಕು. ಅವರಿಂದ ಏನೂ ಆಗಿಲ್ಲ. ಅದು ಅಧಿಕೃತವೂ ಅಲ್ಲ. ಅವರಿಗೆ ಅವರದ್ದೆ ಆದ ಕೆಲಸಗಳಿವೆ ಎಂದು ಹೇಳಿದರು.

    ಹೋರಾಟದ ರೂಪುರೇಷೆ ರಚನೆ ಮಾಡುತ್ತೇವೆ. ಆಸ್ತಿ ಉಳಿಸಲು ಬೇರೆ ಯಾರೇ ಸಾಥ್ ನೀಡಿದರೂ, ಅವರು ನಮ್ಮೊಂದಿಗೆ ಬರಲಿ ಎಂದು ಹೇಳಿದರು.