Karnataka Voice

Latest Kannada News

ಸಚಿವ ಪ್ರಲ್ಹಾದ ಜೋಶಿ ಮನೆ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನ.. ಎಕ್ಸಕ್ಲೂಸಿವ್ ಕಣ್ಣೀರಿನ ಕಥೆ ಇಲ್ಲಿದೆ ನೋಡಿ..

ಹುಬ್ಬಳ್ಳಿ: ಮನೆ ಬಿದ್ದು ಅಲೆದು ಅಲೆದು ಸುಸ್ತಾದ ಕುಟುಂಬವೊಂದರ ಮಹಿಳೆಯೋರವಳು ಇಂದು ಡೆತ್ ನೋಟ್ ಬರೆದಿಟ್ಟೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆಯದುರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿರುವ ಮಹಿಳೆ ಸಾವು-ಬದುಕಿನ ನಡುವೆ ಕಿಮ್ಸನಲ್ಲಿ ಹೋರಾಟ ನಡೆಸುತ್ತಿದ್ದಾಳೆ.

ಧಾರವಾಡ ತಾಲೂಕಿನ ಗರಗ ಶ್ರೀದೇವಿ ವೀರಪ್ಪ ಕಮ್ಮಾರ ಎಂಬ ಮಹಿಳೆ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದಕ್ಕೆ ಕಾರಣವನ್ನೂ ಆಕೆಯ ಪತಿ ಹೇಳುತ್ತಿರುವುದನ್ನ ನೀವೇ ಕೇಳಿ..

ವೀಡಿಯೋ ಇಲ್ಲಿದೆ ನೋಡಿ..

https://www.youtube.com/watch?v=-H3dL79L3XY

ಕಳೆದ ಐದು ತಿಂಗಳಿಂದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹತ್ತಿರ ಹೋಗಿ ಕೇಳಿದರೂ, ಅವರು ಸಂಸದರ ಕಡೆ ಹೋಗಲು ಹೇಳ್ತಾರೆ. ಇವರ ಹತ್ತಿರ ಬಂದರೇ, ಅವರ ಬಳಿ ಹೋಗಲು ಹೇಳುತ್ತಾರೆ ಎನ್ನುವ ಕುಟುಂಬ ಸ್ಥಿತಿ ಹೀಗಾಗಿದೆ.

ವಿಷ ಸೇವಿಸಿರುವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *