Posts Slider

Karnataka Voice

Latest Kannada News

ಹೊಡೆದಾಕೆ ಒಡಹುಟ್ಟಿದಾಕೆ: ಮದುವೆಯಾಗಲೂ ಬಿಡಲ್ಲವೆಂದು ಹಲ್ಲೆ- ಆ ಪ್ಯಾಮಿಲಿಯಲ್ಲಿ ’84’ ಹೆಚ್ಚು

1 min read
Spread the love

ಹುಬ್ಬಳ್ಳಿ: ದೇಶಪಾಂಡೆನಗರದಲ್ಲಿ ಭಗ್ನ ಪ್ರೇಮಿಯೊಬ್ಬ ಯುವತಿಗೆ ತಲ್ವಾರ ಹಾಕಿದ ಪ್ರಕರಣ ನಡೆದ ಬೆನ್ನಲ್ಲೇ ಕುಡುಕ ಅಣ್ಣನ ವಿರುದ್ಧ ಯುವತಿಯೋರ್ವಳು ರಣಚಂಡಿಯಾದ ಪ್ರಕರಣ ಹುಬ್ಬಳ್ಳಿ-ಸುಳ್ಳ ರಸ್ತೆಯಲ್ಲಿ ನಡೆದಿದೆ.


ಹಲವು ದಿನಗಳಿಂದ ನಿರಂತರವಾಗಿ ತೊಂದರೆ ಅನುಭವಿಸುತ್ತಿರುವ ಯುವತಿ, ಕಲ್ಲಿನಿಂದ ಹೊಡೆದು ತೀವ್ರ ಗಾಯಗೊಳಿಸಿದ್ದು, ಕುಡುಕ ಸಹೋದರ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ. ಘಟನೆಯನ್ನ ನೋಡಿದ ಸ್ಥಳೀಯರು, ಆಕೆಯನ್ನು ಬಿಡಿಸಲು ಹೋದಾಗ, ‘ಬಿಡ್ರೀ ಅವನ್ ಕೊಲೆ ಮಾಡ್ತೇನಿ. ಭಾಳ್ ತ್ರಾಸ್ ಕೊಡ್ತಾನ್’ ಎನ್ನುತ್ತಲೇ ಅಣ್ಣನ ಮೇಲೆ ಆಕ್ರೋಶವ್ಯಕ್ತಪಡಿಸುತ್ತಿದ್ದಳು.
ಸಹೋದರಿಯ ಕಲ್ಲಿನೇಟಿನಿಂದ ರಕ್ತಸಿಕ್ತವಾಗಿದ್ದ ಸಹೋದರ, ಅಂಬ್ಯುಲೆನ್ಸ್ ಕರೆಸಿ ಎಂದು ಗೋಗೆರೆಯುತ್ತಿದ್ದ.
ಹುಬ್ಬಳ್ಳಿಯಿಂದ ಸುಳ್ಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಪಾದಗಟ್ಟಿಯ ಬಳಿ ಘಟನೆ ನಡೆದಿದೆ.
ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸಹೋದರ ಮಹಾಶಯನನ್ನ ಕಿಮ್ಸಗೆ ರವಾನೆ ಮಾಡಿದ್ದಾರೆ.
ಹುಬ್ಬಳ್ಳಿಯ ಬಸವೇಶ್ವರ ಪಾರ್ಕನ್ ಪ್ರಿಯದರ್ಶಿನಿ ಪಾಟೀಲ ಎಂಬುವಳೇ ಆತನ ಸಹೋದರ ಸಿದ್ಧಲಿಂಗಯ್ಯನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಕುಟುಂಬದಲ್ಲಿ ಮಾನಸಿಕ ಅಸ್ವಸ್ಥರು ಹೆಚ್ಚಾಗಿದ್ದಾರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *