Exclusive ಹುಬ್ಬಳ್ಳಿ: ಬಸ್ ಕಿಟಕಿಯಲ್ಲಿ ತಲೆ ಹಾಕಿದವನ “ರುಂಡ ಕಟ್”- ಬಸ್ಸಲ್ಲಿ ದೇಹ… ಹೊಲದಲ್ಲಿ ತಲೆ…. ಭೀಕರ ಘಟನೆ…
ಬಸ್ ಕಿಟಕಿಯಿಂದ ತಲೆ ಹೊರಹಾಕಿದ್ದೇ ಅಪರಾಧ: ಉಗುಳಲು ಹೋದವನ ರುಂಡ ಕಟ್!
ಕುಂದಗೋಳ: ಚಲಿಸುವ ಬಸ್ನ ಕಿಟಕಿಯಿಂದ ತಲೆ ಹೊರಹಾಕಿ ಉಗುಳಲು ಯತ್ನಿಸಿದ ಪ್ರಯಾಣಿಕನೊಬ್ಬನ ತಲೆ ಕತ್ತರಿಸಿ ಭೀಕರವಾಗಿ ಸಾವನ್ನಪ್ಪಿರುವ ಧೃತರಾಷ್ಟ್ರನಂತಹ ಘಟನೆ ಇಲ್ಲಿನ ಶೆರೇವಾಡ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಶೆರೇವಾಡ ಕಡೆಗೆ ಚಲಿಸುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮೃತ ವ್ಯಕ್ತಿ ಪ್ರಯಾಣದ ವೇಳೆ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಎನ್ನಲಾಗಿದೆ. ಬಸ್ ಚಲಿಸುತ್ತಿರುವಾಗ ವಾಂತಿ ಅಥವಾ ಉಗುಳುವ ಉದ್ದೇಶದಿಂದ ಅವರು ತಮ್ಮ ತಲೆಯನ್ನು ಕಿಟಕಿಯಿಂದ ಹೊರಗೆ ಹಾಕಿದ್ದಾರೆ.
ಅದೇ ಸಮಯದಲ್ಲಿ ಅದೇ ದಿಕ್ಕಿನಿಂದ ಅತಿ ವೇಗವಾಗಿ ಬಂದ ಮತ್ತೊಂದು ಬಸ್, ಈ ಬಸ್ನ ಅತ್ಯಂತ ಸಮೀಪದಲ್ಲೇ ಓವರ್ಟೇಕ್ ಮಾಡಲು ಯತ್ನಿಸಿದೆ. ಈ ವೇಳೆ ಉಂಟಾದ ಭೀಕರ ಘರ್ಷಣೆಯಿಂದಾಗಿ, ಕಿಟಕಿಯಿಂದ ಹೊರಗಿದ್ದ ಪ್ರಯಾಣಿಕನ ರುಂಡ (ತಲೆ) ಕ್ಷಣಾರ್ಧದಲ್ಲಿ ಕತ್ತರಿಸಿ ಹೋಗಿದೆ.
ಕಿಟಕಿ ಒಳಗೆ ಧಡ್, ಹೊಲದಲ್ಲಿ ರುಂಡ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ವ್ಯಕ್ತಿಯ ಮುಂಡ (ಮೃತದೇಹ) ತಾನು ಪ್ರಯಾಣಿಸುತ್ತಿದ್ದ ಬಸ್ನ ಸೀಟಿನಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಕತ್ತರಿಸಿದ ರುಂಡವು ಪಕ್ಕದಲ್ಲಿ ವೇಗವಾಗಿ ಹಾದುಹೋದ ಇನ್ನೊಂದು ಬಸ್ನ ಭಾಗದಲ್ಲಿ ಸಿಲುಕಿಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ನಲ್ಲಿದ್ದ ಸಹಪ್ರಯಾಣಿಕರು ಈ ಘೋರ ದೃಶ್ಯವನ್ನು ಕಂಡು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಉಭಯ ಬಸ್ಗಳ ಚಾಲಕರು ತಕ್ಷಣವೇ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಲಿಸುವ ವಾಹನಗಳಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಕೈ-ತಲೆ ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಕಣ್ಣಿಡುವಂತಾಗಿದೆ.
