Karnataka Voice

Latest Kannada News

ಹುಬ್ಬಳ್ಳಿ: ಸಂಕ್ರಾಂತಿ ಇಸ್ಪೀಟ್ ದಾಳಿ

ಹುಬ್ಬಳ್ಳಿ;  ಸಂಕ್ರಾಂತಿಯ ಸಡಗರವನ್ನ ಜೂಜಾಟವಾಡುತ್ತ ಕಳೆಯುತ್ತಿದ್ದವರ ಮೇಲೆ ದಾಳಿ ಮಾಡಿರುವ ಪೊಲೀಸರು ಒಬ್ಬನನ್ನ ಬಂಧಿಸಿದ್ದು, ಐವರು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಟ್ನೂರ್ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಕೆರೆಯ ದಂಡೆಯ ಹತ್ತಿರ ಇಸ್ಪೀಟ್ ಆಡುತ್ತಿದ್ದ ಆರೋಪಿಯನ್ನ  ಹಿಡಿಯುವಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು ಓರ್ವನನ್ನ ಬಂಧಿಸಿದ್ದು, ಇನ್ನುಳಿದ ಐವರು ಪರಾರಿಯಾಗಿದ್ದಾರೆ. ಬಂಧಿತನನ್ನ ಶಬ್ಬೀರ ಅಹ್ಮದ್ ಸಾಬ್ ಅರಳಿಕಟ್ಟಿ ಎಂದು ಗುರುತಿಸಲಾಗಿದೆ. ಪರಾರಿಯಾಗಿರು ರವಿ, ವಾಸೀಮ್, ರವಿ ಚವ್ಹಾಣ್, ಮುದುಕಪ್ಪ, ಯಲ್ಲಪ್ಪ ಎಂದು ಗುರುತಿಸಲಾಗಿದೆ.

ಬಂಧಿತನಿಂದ 7400ರೂಪಾಯಿ ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆದಿರುವ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಐವರ ಪತ್ತೆಗಾಗಿ ಜಾಲ ಬೀಸಿದ್ದಾರೆ.

Leave a Reply

Your email address will not be published. Required fields are marked *