Posts Slider

Karnataka Voice

Latest Kannada News

ನವಲಗುಂದ ಕ್ಷೇತ್ರದಿಂದ “ಮೋದಿ ಕಾರ್ಯಕ್ರಮ”ಕ್ಕೆ 25 ಸಾವಿರ ಕಾರ್ಯಕರ್ತರು…!!!

1 min read
Spread the love

ನವಲಗುಂದ: ಧಾರವಾಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ನವಲಗುಂದ ಮತಕ್ಷೇತ್ರದಿಂದ 25 ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ.

ಧಾರವಾಡದ ಐಐಟಿ ಸೇರಿದಂತೆ ಸುಮಾರು ಐದು ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಚಾಲನೆಯನ್ನ ಪ್ರಧಾನಿಯವರು ನೀಡಲಿದ್ದು, ನವಲಗುಂದ ಕ್ಷೇತ್ರದ ತುಪ್ಪರಿಹಳ್ಳದ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ. ಹೀಗಾಗಿ ಸ್ವತಃ ಮುತುವರ್ಜಿ ವಹಿಸಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಗಮನವನ್ನ ಹಬ್ಬವನ್ನಾಗಿ ಆಚರಿಸುವ ಕಾರ್ಯಕರ್ತರ ಮನೋಭಾವನೆಯನ್ನ ಅರಿತಿರುವ ಸಚಿವರು, ಮೋದಿಯವರ ಕಾರ್ಯಕ್ರಮಕ್ಕೆ ಹೋಗುವ ಕಾರ್ಯಕರ್ತರ ಮನೋಭಿಲಾಸೆ ಈಡೇರಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *