Posts Slider

Karnataka Voice

Latest Kannada News

ನವಲಗುಂದ ಕ್ಷೇತ್ರಕ್ಕೆ “ಆಪ್”ನಿಂದ ಲಿಂಗಾಯತ ಕ್ಯಾಂಡಿಟೇಟ್ ಫಿಕ್ಸ್…

1 min read
Spread the love

ಧಾರವಾಡ: ವಿಧಾನಸಭಾ ಚುನಾವಣೆಯ ರಣಕಣ ರಂಗೇರುತ್ತಿರುವ ಸಮಯದಲ್ಲಿ ಅಖಾಡಾ ಸಿದ್ಧಗೊಳಿಸಲಾಗುತ್ತಿದೆ. ಆಮ್ ಆದ್ಮಿ ಪಕ್ಷ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದು, ನವಲಗುಂದ ಕ್ಷೇತ್ರಕ್ಕೆ ಪ್ರಬಲ ಲಿಂಗಾಯತ ಕೋಮಿನ ಅಭ್ಯರ್ಥಿಯನ್ನ ಕಣಕ್ಕೀಳಿಸಲು ಮುಂದಾಗಿದೆ.

ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯೂ ಸೇರಿದಂತೆ ಹಲವರ ಜೊತೆ ಪರಿಚಯ ಹೊಂದಿರುವ ನಿವೃತ್ತ ಪ್ರೋಪೆಸರ್ ಕಣಕ್ಕೀಳಿಯಲಿದ್ದಾರೆಂದು ಹೇಳಲಾಗಿದೆ. ಇವರು ಹಲವು ಗುತ್ತಿಗೆದಾರರ ಒಡನಾಡಿಯೂ ಆಗಿದ್ದಾರೆಂದು ಹೇಳಲಾಗಿದೆ.

ಕ್ವಾಲಿಟಿ ಕಂಟ್ರೋಲ್‌ ಅಧಿಕಾರಿಯೂ ಕಾರ್ಯನಿರ್ವಹಿಸಿದ್ದ ಇವರನ್ನ ಆಪ್ ಮೂಲಕ ನವಲಗುಂದ ಕ್ಷೇತ್ರದಲ್ಲಿ ಹೊಸ ದೆಸೆ ಸೃಷ್ಟಿಸಲು ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ರಿದೆ.


Spread the love

Leave a Reply

Your email address will not be published. Required fields are marked *