Karnataka Voice

Latest Kannada News

ಹುಬ್ಬಳ್ಳಿ ಹನಮಂತನಗರದಲ್ಲಿ ಕೊಲ್ಕೋತ್ತಾದ ಸತಿಯನ್ನ ಕೊಂದ ಪತಿ…!

ಹುಬ್ಬಳ್ಳಿ: ಲಿಂಗರಾಜನಗರದ ಬಳಿಯ ಹನಮಂತನಗರದ ಮನೆಯೊಂದರಲ್ಲಿ ಕೂಡಿ ಬಾಳೋಣವೆಂದು ಏಳು ಹೆಜ್ಜೆಯನ್ನ ಹಾಕಿದ್ದ ಎರಡನೇಯ ಪತಿಯೇ ತನ್ನ ಸತಿಯನ್ನ ಕೊಲೆ ಮಾಡಿರುವ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಹಾವೇರಿ ಜಿಲ್ಲೆಯ ಬಸನಾಳ ಗ್ರಾಮದ ರೇಣುಕಾ ಕೊಲ್ಕೋತ್ತಾ ಮೂಲದ ಜಗದೀಶನನ್ನ ಮದುವೆಯಾಗಿ ಹೋಗಿದ್ದಳು. ನಂತರ ಹುಬ್ಬಳ್ಳಿಯಲ್ಲಿಯೇ ವಾಸವಾಗಿದ್ದ ರೇಣುಕಾ ಎಂಬ ಮಹಿಳೆ ತನ್ನ ಮೊದಲ ಗಂಡ ಜಗದೀಶ ಬಿಟ್ಟು ಹೋದ ಮೇಲೆ, ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಹುಬ್ಬಳ್ಳಿಯ ಮಹದೇವ ಎಂಬಾತನೇ, ನೇಣು ಬಿಗಿದು ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.

ರೇಣುಕಾ, ತನ್ನ ಮೊದಲ ಪತಿಯನ್ನ ಬಿಟ್ಟು ಹುಬ್ಬಳ್ಳಿಗೆ ಬಂದು ಕಾರು ಚಾಲಕ ಮಹದೇವನೊಂದಿಗೆ ಜೀವನ ನಡೆಸುತ್ತಿದ್ದಳು. ಕಳೆದ ವರ್ಷ ಕಲಘಟಗಿ ತಾಲೂಕಿನ ಬೂದನಗುಡ್ಡದಲ್ಲಿ ಹೋಗಿ ಮದುವೆಯನ್ನ ಮಾಡಿಕೊಂಡು ಬಂದಿದ್ದ ಇಬ್ಬರು, ಕೊಲೆ ನಡೆದಿರುವ ಮನೆಗೆ ಎರಡು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದರೆಂದು ಹೇಳಲಾಗಿದೆ.

ಪತಿ ಮಹದೇವ, ರೇಣುಕಾಳನ್ನ ಕೊಲೆ ಮಾಡಿ ನೇಣು ಹಾಕಿಕೊಂಡಿದ್ದಾಳೆಂದು ಬಿಂಬಿಸುವ ಪ್ರಯತ್ನವನ್ನ ಮಾಡಿದ್ದನೆಂದು ಗೊತ್ತಾಗಿದ್ದು, ಘಟನಾ ಸ್ಥಳಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ತೆರಳಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *