Karnataka Voice

Latest Kannada News

ಹಾರೋಬೆಳವಡಿಯಲ್ಲಿ ಶಾಸಕ ಅಮೃತ ದೇಸಾಯಿ…!

ಧಾರವಾಡ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕಾಳಜಿ ಕೇಂದ್ರಗಳನ್ನ ತೆಗೆಯಲು ಶಾಸಕ ಅಮೃತ ದೇಸಾಯಿ ಅವರು ಸೂಚನೆ ನೀಡಿದ ಬೆನ್ನಲ್ಲೇ, ಹಾರೋಬೆಳವಡಿಯಲ್ಲಿ ಕಾಳಜಿ ಕೇಂದ್ರ ಆರಂಭವಾಗಿದೆ.

ಹಾರೋಬೆಳವಡಿ ಗ್ರಾಮದಲ್ಲಿ ಆರಂಭಗೊಂಡ ಕಾಳಜಿ ಕೇಂದ್ರವನ್ನ ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿದರು. ಕೊರೋನಾ ಮಹಾಮಾರಿಯನ್ನ ಮಟ್ಟ ಹಾಕಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸಾಧ್ಯವಾದಷ್ಟು ಕ್ರಮವನ್ನ ಜರುಗಿಸಲಾಗುತ್ತಿದೆ. ಜನರು ಇನ್ನಷ್ಟು ಜಾಗೃತರಾಗಬೇಕೆಂದ ಶಾಸಕರು, ಯಾವುದೇ ಕ್ಷಣದಲ್ಲಿಯಾದರೂ ತಾವೂ ಜನರೊಂದಿಗೆ ಸದಾಕಾಲ ಇರುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ ಸಂತೋಷ ಬಿರಾದಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎ.ಎಚ್.ಮನಿಯಾರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ ತಳವಾರ, ಉಪಾಧ್ಯಕ್ಷ ವೀರೇಶ ಕಣಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *