Posts Slider

Karnataka Voice

Latest Kannada News

ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ: ಸರಕಾರಿ ಶಾಲೆ ಶಿಕ್ಷಕರ ಮಗಳು

1 min read
Spread the love

ಶಿವಮೊಗ್ಗ: ತಾನು ಕಲಿತದ್ದು ಕಡಿಮೆಯಾಗಿದ್ದು, ತನ್ನ ಕನಸನ್ನ ನನಸು ಮಾಡುತ್ತಾಳೆಂದು ಮಗಳನ್ನ  ಮೆಡಿಕಲ್ ಕಲಿಸಿದ್ದ ಶಿಕ್ಷಕನೋರ್ವ ಮಗಳ ಆತ್ಮಹತ್ಯೆಯಿಂದ ಕಂಗಾಲಾದ ಪ್ರಸಂಗ ನಡೆದಿದೆ.

ಭದ್ರಾವತಿ ಮೂಲದ ವೆಂಕಟೇಶ ಎಂಬುವವರ ಮಗಳೇ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕೊನೆಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ, ತಾನಿರುವ ಜಾಗದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಮಗಳ ಸಾವಿನಿಂದ ಕುಟುಂಬ, ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಶಿಕ್ಷಕ ವೆಂಕಟೇಶ ಅವರು ಮೊದಲಿಂದಲೂ ಮಗಳ ಆಸೆಗೆ ನೀರೆರೆಯುತ್ತ ಬಂದಿದ್ದರು. ಅವಳೇ ಇಷ್ಟಪಟ್ಟ ಮೆಡಿಕಲ್ ಕಲಿಯೋಕೆ ಪ್ರೋತ್ಸಾಹ ನೀಡಿದರು. ಪ್ರತಿವರ್ಷವೂ ಒಳ್ಳೆಯ ಅಂಕ ಪಡೆದು, ಮಗಳು ಎದುರಿಗೆ ನಿಂತಾಗ ತಂದೆ ವೆಂಕಟೇಶ ಗರ್ವದಿಂದ ಮಗಳ ಬೆನ್ನು ಚಪ್ಪರಿಸುತ್ತಿದ್ದರು.

ಶಿಕ್ಷಕರಿಗೆ ತಮ್ಮದೇ ಆದ ಲಿಮಿಟ್ಸ್ ಹೊಂದಿರುತ್ತಾರೆ. ಅದನ್ನ ಮೀರಿ ಮಕ್ಕಳನ್ನ ಬೆಳೆಸುತ್ತಾರೆ. ಆದರೆ, ಇಂತಹ ಘಟನೆಗಳಿಂದ ಜೀವನಪೂರ್ತಿ ನೋವಿನಲ್ಲೇ ಕಳೆಯುವಂತಾಗುತ್ತದೆ. ಅಕ್ಷರ ಕಲಿತ ಮಕ್ಕಳು ಹೀಗೆ ಮಾಡಿಕೊಳ್ಳಬಾರದಲ್ಲವೇ..


Spread the love

Leave a Reply

Your email address will not be published. Required fields are marked *

You may have missed