Exclusive ಗರಗದಲ್ಲಿ ಫೈರಿಂಗ್: ಚಿನ್ನದಂಗಡಿ ಮಾಲೀಕನಿಂದ ಇಬ್ಬರ ಮೇಲೆ ಗುಂಡಿನ ದಾಳಿ…
ಧಾರವಾಡ: ಚಿನ್ನದ ಅಂಗಡಿ ಬಳಿ ನಡೆದ ಗಲಾಟೆಯ ಸಮಯದಲ್ಲಿ ಮಾಲೀಕ ಇಬ್ಬರ ಮೇಲೆ ಗುಂಡು ಹಾರಿಸಿರುವ ಪ್ರಕರಣ ನಡೆದಿದ್ದು, ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಗರಗ ಗ್ರಾಮದ ಮೌನೇಶ ಬಡಿಗೇರ ಎಂಬುವವರೇ ಗುಂಡು ಹಾರಿಸಿದ್ದಾರೆಂದು ಹೇಳಲಾಗಿದ್ದು, ಇವರ ಬಳಿ ಚಿನ್ನ ಅಡವಿಟ್ಟು ಮರಳಿ ಬಿಡಿಸಿಕೊಳ್ಳಲು ಬಂದಾಗ ಘಟನೆ ನಡೆದಿದೆಯಂತೆ.
ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ದೌಡಾಯಿಸಿದ್ದು, ಸಂಪೂರ್ಣವಾದ ಮಾಹಿತಿ ಸಿಗಬೇಕಿದೆ. ಗುಂಡು ಹಾರಿಸಿದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
