ಮೇಜರ್ ಸಿದ್ಧಲಿಂಗಯ್ಯ ಕಂ ಬ್ಯಾಕ್..!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಧಾರವಾಡ: ಕಳೆದ ಎರಡು ದಿನದ ಹಿಂದೆ ವರ್ಗಾವಣೆಯಾಗಿದ್ದ ಆದೇಶವನ್ನ ಮತ್ತೆ ರದ್ದು ಮಾಡಿರುವ ಸರಕಾರ, ಇಬ್ಬರು ಅಧಿಕಾರಿಗಳಿಗೆ ಮೊದಲಿನ ಜಾಗದಲ್ಲೇ ಮುಂದುವರೆಯುವಂತೆ ಆದೇಶ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಯಾಗಿದ್ದ ರಮೇಶ ದೇಸಾಯಿ ಅವರನ್ನ ಧಾರವಾಡದಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಪರ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಇಲ್ಲಿದ್ದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರಿಗೆ ಯಾವುದೇ ಜಾಗವನ್ನ ತೋರಿಸಿರಲಿಲ್ಲ.
ಸರಕಾರ ಮತ್ತೆ ಎರಡೇ ದಿನದಲ್ಲಿ ಹೊಸದೊಂದು ಆದೇಶ ಹೊರಡಿಸಿದ್ದು, ಇಬ್ಬರು ಅಧಿಕಾರಿಗಳು ಮೊದಲಿನ ಜಾಗದಲ್ಲಿಯೇ ಮುಂದುವರೆಯುವಂತೆ ಸೂಚನೆ ನೀಡಿದೆ.
ಶಿಕ್ಷಣ ಇಲಾಖೆಯ ಮಹತ್ವದ ಹುದ್ದೆಯಲ್ಲೂ ಸರಕಾರ ಇಂತಹ ದ್ವಂದ್ವ ನೀತಿಯನ್ನ ಅನುಸರಿಸುತ್ತಿರುವುದು ಸೋಜಿಗವೆನಿಸುತ್ತಿದೆ. ಹೀಗೆ ಮಾಡುವ ಮುನ್ನವೇ ಸರಕಾರ ಸ್ಪಷ್ಟವಾದ ನಿಲುವಿಗೆ ಏಕೆ ಇರುವುದಿಲ್ಲವೆನ್ನುವುದು ಹಲವರ ಪ್ರಶ್ನೆಯಾಗಿದೆ.


