Karnataka Voice

Latest Kannada News

ತಂದೆಯ ಅಂತ್ಯ ಸಂಸ್ಕಾರಕ್ಕೂ ಮುನ್ನ ಆಸ್ತಿಗಾಗಿ “ಶವವನ್ನ” ತಹಶೀಲ್ದಾರ್ ಕಚೇರಿಗೆ ತಂದ ಇಬ್ಬರ ಹೆಂಡೀರ ಮಕ್ಕಳು…

Spread the love

ಅಂತ್ಯಸಂಸ್ಕಾರಕ್ಕೂ ಮುನ್ನ ಜಮೀನಿನ ಹಕ್ಕಿಗಾಗಿ ಕುಟುಂಬದ ತಿಕ್ಕಾಟ

ಬಾಗಲಕೋಟೆ: ತಂದೆಯೊಬ್ಬರು ಮೃತಪಟ್ಟ ಬಳಿಕ ಅವರ ಅಂತ್ಯಸಂಸ್ಕಾರ ಮಾಡುವ ಬದಲು, ಇಬ್ಬರು ಪತ್ನಿಯರ ಮಕ್ಕಳು ಆಸ್ತಿ ಹಕ್ಕಿಗಾಗಿ ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.

Exclusive Video

ಮೃತ ವ್ಯಕ್ತಿಯನ್ನು ಯಲ್ಲಪ್ಪ ವಾಗೆನ್ನವರ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಅವರಿಗೆ ಇಬ್ಬರು ಪತ್ನಿಯರಿದ್ದು, ಇಬ್ಬರು ಕುಟುಂಬಗಳ ಮಕ್ಕಳ ನಡುವೆ ಆಸ್ತಿ ವಿಚಾರವಾಗಿ ತೀವ್ರ ಕಲಹ ಉಂಟಾಗಿದೆ.

ಯಲ್ಲಪ್ಪ ವಾಗೆನ್ನವರ ಅವರು ತಮ್ಮ ಹೆಸರಿನ ಜಮೀನನ್ನು ತೌಸಿಕ್ ಪಾರ್ತಹಳ್ಳಿ ಎಂಬುವರ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 5, 2026ರಂದು ಜಮೀನಿನ ಖರೀದಿ ಪತ್ರ ಮಾಡಿಕೊಟ್ಟಿದ್ದು, ಅದರ ಮರುದಿನ ಯಲ್ಲಪ್ಪ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಮಖಂಡಿ ಪಟ್ಟಣದ ಹೊರವಲಯದಲ್ಲಿರುವ ಸುಮಾರು 2 ಎಕರೆ 17 ಗುಂಟೆ ಜಾಗೆ ವಿಚಾರವಾಗಿ ಕುಟುಂಬದೊಳಗೆ ತಿಕ್ಕಾಟ ನಡೆದಿದೆ. ಲಕ್ಷ್ಮಣ ವಾಗೆನ್ನವರ ಮತ್ತು ಪ್ರಕಾಶ ವಾಗೆನ್ನವರ ಸಹೋದರರ ನಡುವೆ ಆಸ್ತಿ ಹಕ್ಕಿನ ವಿವಾದ ಉಂಟಾಗಿದೆ ಎಂದು ತಿಳಿದುಬಂದಿದೆ.

ತಂದೆಯ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದೆ ಕುಟುಂಬಸ್ಥರು ಜಮಖಂಡಿಯ ಎಸಿ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. “ನಮಗೆ ತಿಳಿಸದೇ ಆಸ್ತಿಯನ್ನು ಹೇಗೆ ವರ್ಗಾವಣೆ ಮಾಡಲಾಗಿದೆ? ನಮಗೂ ಆಸ್ತಿಯಲ್ಲಿ ಹಕ್ಕು ಬೇಕು” ಎಂದು ಇಬ್ಬರು ಪತ್ನಿಯರ ಮಕ್ಕಳು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಕುರಿತು ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯದ ಮೊರೆ ಹೋಗುವಂತೆ ಅಧಿಕಾರಿಗಳು ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರೆ. ಅಧಿಕಾರಿಗಳ ಸಲಹೆಯ ಬಳಿಕ ಕುಟುಂಬಸ್ಥರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.


Spread the love

Leave a Reply

Your email address will not be published. Required fields are marked *