Karnataka Voice

ರಾಜ್ಯದ 11 ಜಿಲ್ಲೆ ಲಾಕ್- ಇನ್ನುಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್…!

ಬೆಂಗಳೂರು: ರಾಜ್ಯದಲ್ಲಿ ಜೂನ್ 14ರಂದು ಲಾಕ್ ಡೌನ್ ಮುಗಿಯಲಿದ್ದು, ಸಿಎಂ ಯಡಿಯೂರಪ್ಪ ಅವರು ಇಂದು ಮಹತ್ವವಾದ ಸಭೆಯನ್ನ ನಡೆಸಿದ ಹೊಸದಾಗಿ ರಾಜ್ಯದಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಮಾಹಿತಿಯನ್ನ ನೀಡಿದರು.

ಸಿಎಂ ನಡೆಸಿದ ಸಭೆಯಲ್ಲಿ ಎಲ್ಲ ರೀತಿಯ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದ್ದು, ಕೆಲವು ನಿರ್ದೇಶನಗಳನ್ನ ನೀಡಲಾಗಿದೆ. ಶೇಕಡಾ ಐವತ್ತರಷ್ಟು ಕಾರ್ಮಿಕರೊಂದಿಗೆ ಕಾರ್ಯವನ್ನ ಮಾಡಲು ನಿರ್ಧಾರವಾಗಿದೆ. ಸಾರಿಗೆ ಇಲಾಖೆಯ ಬಸ್ ಸಂಚಾರವನ್ನ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಎಲ್ಲ ಕಾರ್ಖಾನೆಗಳು ಶೇಕಡಾ ಐವತ್ತರಷ್ಟು ಹಾಜರಾತಿ ಅವಕಾಶ, ಗಾರ್ಮೆಂಟ್ ಗಳು ಶೇಕಡಾ ಮೂವತ್ತರಷ್ಟು ಮಾತ್ರ.

ಮದ್ಯಾಹ್ನ 2 ಗಂಟೆಯವರೆಗೆ ಮಾರುಕಟ್ಟೆಗೆ ಅವಕಾಶ. ಸಿಮೆಂಟ್, ಕಬ್ಬಿಣದ ಅಂಗಡಿಗಳು ತೆರೆಯುವುದು. ಪಾರ್ಕ್ ಬೆಳಿಗ್ಗೆ ಐದರಿಂದ 10 ಗಂಟೆಯವರೆಗೆ. ಬೆಳಿಗ್ಗೆ 6 ರಿಂದ ಮದ್ಯಾಹ್ನ 2ರ ವರೆಗೆ. ಆಟೋದಲ್ಲಿ ಇಬ್ಬರು ಹೋಗಬಹುದು. ವಾರಾಂತ್ಯದ ಕರ್ಪ್ಯೂ ಇರತ್ತೆ.

ಶುಕ್ರವಾರ ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಗಿನ ಜಾವ ಐದು ಗಂಟೆಯವರೆಗೆ ವೀಕೆಂಡ್ ಕರ್ಪ್ಯೂವನ್ನ ಮುಂದುವರೆಸಲಾಗಿದೆ. ಲಾಕ್ ಡೌನ್ ಮಾಡುವ ಮುನ್ನವಿದ್ದಂತೆ, ನಡೆಸಲು ತೀರ್ಮಾನ ಮಾಡಲಾಗಿದೆ. ಮದ್ಯ ಮಾರಾಟಕ್ಕೆ ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವನ್ನ ನೀಡಲಾಗಿದೆ.

ಬೆಂಗಳೂರಿನಲ್ಲಿ ಪ್ರತಿ ದಿನವೂ ಸಂಜೆ 7 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಪ್ಯೂ ವಿಧಿಸಲಾಗುತ್ತಿದೆ. ಜೊತೆಗೆ ವಾರಾಂತ್ಯದ ಕರ್ಪ್ಯೂ ಕೂಡಾ ಇರತ್ತೆ. ಅಂತರ್ ಜಿಲ್ಲೆಗಳಿಗೆ ಹೋಗಲು ಯಾವುದೇ ತೊಂದರೆಯಿಲ್ಲವೆಂದು ಹೇಳಿರುವ ಸಿಎಂ ಯಡಿಯೂರಪ್ಪನವರು, ನಿಯಮಗಳನ್ನ ಉಲ್ಲಂಘನೆ ಮಾಡಬಾರದೆಂದು ಹೇಳಿದ್ದಾರೆ.

ಬೀದಿ ಬದಿಯ ವ್ಯಾಪಾರವೂ ಸೇರಿದಂತೆ ಕಿರಾಣಿ ಅಂಗಡಿ ವ್ಯಾಪಾರಕ್ಕೂ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶವನ್ನ ನೀಡಲಾಗಿದೆ. ಚಾಮರಾಜನಗರ, ಕೊಡಗು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಶಿವಮೊಗ್ಗ, ಹಾಸನ ಲಾಕ್

Comments

Leave a Reply

Your email address will not be published. Required fields are marked *