Karnataka Voice

Latest Kannada News

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಫೀಲ್ಡಿಗಿಳಿದಿದ್ದಾರೆ ಪೊಲೀಸ್ ಕಮೀಷನರ್ ಲಾಬುರಾಮ್…!

ಹುಬ್ಬಳ್ಳಿ: ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಶುಕ್ರವಾರ ಸ್ವತಃ ಪೀಲ್ಡಿಗೆ ಇಳಿದಿದ್ದು, ಮೈಚಳಿ ಬಿಟ್ಟು ತಿರುಗುತ್ತಿದ್ದವರೇ ಶಾಕ್ ನೀಡುತ್ತಿದ್ದಾರೆ.

ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚತ್ತಿದ್ದರೂ ವಾಹನ ಸವಾರರು ಮಾತ್ರ ಸುಖಾಸುಮ್ಮನೆ ತಿರುಗಾಡುತ್ತಿದ್ದು, ಇದರಿಂದ ಲಾಕ್ ಡೌನ್ ಇದೇಯೋ ಇಲ್ಲವೋ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ಸ್ವತಃ ಲಾಬುರಾಮ್ ಅವರೇ ಫೀಲ್ಡಿಗೆ ಇಳಿದು, ಸುಖಾಸುಮ್ಮನೆ ತಿರುಗುತ್ತಿದ್ದ ವಾಹನಗಳನ್ನ ವಶಕ್ಕೆ ಪಡೆದರು.

ಕೊರೋನಾ ನಿಯಾಮಳಿಗಳನ್ನ ಪಾಲನೆ ಮಾಡಿ ಎಂದು ಎಷ್ಟೇ ಹೇಳಿದರೂ, ಜನ ಮಾತ್ರ ತಮ್ಮ ನಿರ್ಲಕ್ಷ್ಯವನ್ನ ಮುಂದುವರೆಸಿದ್ದು, ಯಾವುದೇ ರೀತಿಯ ಬದಲಾವಣೆಯಾಗುತ್ತಿಲ್ಲ. ಹೀಗಾಗಿಯೇ ಪೊಲೀಸ್ ಕಮೀಷನರ್ ಫೀಲ್ಡಿಗೆ ಇಳಿದಿದ್ದಾರೆ.

ಪೊಲೀಸ್ ಕಮೀಷನರೇ ಬಂದಿದ್ದರಿಂದ ಇನ್ನುಳಿದ ಸಿಬ್ಬಂದಿಗಳು ಕೂಡಾ ಸಾಕಷ್ಟು ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದರು. ಕಮೀಷನರ್ ಮಾತ್ರ ತಪ್ಪು ಮಾಡಿದವರನ್ನ ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನ ಮುಂದುವರೆಸಿದ್ದರು.

Leave a Reply

Your email address will not be published. Required fields are marked *