Karnataka Voice

Latest Kannada News

“ಹುಬ್ಬಳ್ಳಿಯಾಕೆಯ” ಪ್ರೆಂಡ್ ಆಗಿ ಹಣ ದೋಚಿದ ಸಚಿನಕುಮಾರ…!

ಹುಬ್ಬಳ್ಳಿ: ಹಾಯ್… ಹೇಗಿದ್ದೀಯಾ… ನಾನೂ ನಿನ್ನ ಭಾಳ ಹಚ್ಚಕೊಂಡೇನಿ ಎಂದು ಶುರುವಾಗಿದ್ದು, ನಿನ್ನ ಕ್ರೆಡಿಟ್ ಕಾರ್ಡ್ ನಂಬರ ಕೊಡು ಎನ್ನುವವರೆಗೆ ಇದ್ದ ಗೆಳೆತನ, ಹಣ ವರ್ಗಾವಣೆ ಆದ ತಕ್ಷಣವೇ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಗೆಳೆತನಕ್ಕೆ ತೀಲಾಂಜಲಿಯಿಟ್ಟ ಪ್ರಕರಣವೊಂದು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರ ಕಾರ್ಯಾಚರಣೆಯಿಂದ ಬಯಲಾಗಿದೆ.

ಬೆಂಗಳೂರಿನ ಕೃಷ್ಣಯ್ಯನ ಪಾಳ್ಯದ ಸಚಿನಕುಮಾರ ಎಂಬಾತ ಹುಬ್ಬಳ್ಳಿಯ ಯುವತಿಯ ಜೊತೆಗೆ ಫೇಸ್ ಬುಕ್ ಮೂಲಕ ಗೆಳೆತನ ಮಾಡಿಕೊಳ್ಳುತ್ತಾನೆ. ಆ ಗೆಳೆತನ ಚಾಟಿಂಗ್ ನಲ್ಲೂ ಮುಂದುವರೆಯುತ್ತದೆ. ಮತ್ತದೇ ನಂಬಿಕೆ.

ಅದೇ ನಂಬಿಗೆಯಿಂದ ಹುಬ್ಬಳ್ಳಿಯ ಶಾಣ್ಯಾ ಯುವತಿ ಸಚಿನಕುಮಾರ ಎಂಬ ಫೇಸ್ ಬುಕ್ ಗೆಳೆಯನಿಗೆ ಕ್ರೆಡಿಟ್ ಕಾರ್ಡ್ ನಂಬರ್ ಕೊಟ್ಟಿದ್ದಾಳೆ. ಆತ ತಡ ಮಾಡದೇ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಆಗ ಯುವತಿ ಹೈರಾಣಾಗಿ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ದೂರನ್ನ ಪಡೆದಿದ್ದ ಪೊಲೀಸರು,  ಪೊಲೀಸ್ ಕಮೀಷನರ್ ಲಾಬುರಾಮ್ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಸತೀಶ ಮಾಳಗೊಂಡ, ಪಿಎಸ್ಐ ಎಂ.ಎಸ್.ಹೂಗಾರ, ಎಂ.ಬಿ.ಅಣ್ವೇಕರ, ಎಸ್.ಎಚ್.ತಿಮ್ಮಾಪುರ, ಎಸ್.ವಿ.ಅಕ್ಕಿಗುಂದಮಠ, ವಿ.ಎಚ್.ವಗ್ಗರ, ಮೋಹನ ಈಳಿಗೇರ ಸೇರಿದಂತೆ ಹಲವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *