ಹುಬ್ಬಳ್ಳಿಯ ಕಿಮ್ಸ್ಗೆ “ಬಸ್ ಒಯ್ದರೂ” ಬದುಕುಳಿಯಲ್ಲಿಲ್ಲ ಶಿಕ್ಷಕ… ಸತೀಶ ಎಂಬ ಶಿಕ್ಷಕರಿಗೆ ಬಸ್ಲ್ಲೇ “ಹಾರ್ಟ್ ಅಟ್ಯಾಕ್”…
ಹುಬ್ಬಳ್ಳಿ: ಗುಲಬರ್ಗಾದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಾಯುವ್ತ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಶಿಕ್ಷಕರೋರ್ವರಿಗೆ ಹೃದಯಾಘಾತವಾದ ಘಟನೆ ಬೆಳಗಿನ ಜಾವ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯೂ ವಿಫಲವಾಗಿದೆ.
ಧಾರವಾಡದ ಶಿಕ್ಷಕ ಸತೀಶ ಎಂಬುವವರೇ ಸಾವಿಗೀಡಾದ ದುರ್ಧೈವಿಯಾಗಿದ್ದಾರೆ. ಬಸ್ಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದರಿಂದ ಚಾಲಕ ಬಸ್ನ್ನ ನೇರವಾಗಿ ಕಿಮ್ಸಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಶಿಕ್ಷಕರ ಪ್ರಾಣಪಕ್ಷಿ ಹಾರಿಹೋಗಿದೆ.
ಘಟನೆಯ ಕುರಿತು ಪೊಲೀಸರು ಮಾಹಿತಿ ಪಡೆಯುತ್ತಿದ್ದು, ನಿಖರವಾದ ವಿವರವನ್ನ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
