24ತಾಸು ಕೆಲಸ ಮಾಡೋ ಹುಮ್ಮಸ್ಸಿದೆ- ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಚುನಾವಣೆ ಬಗ್ಗೆ ಏನಂತಿದ್ದಾರೆ..?
1 min readಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಅವರಿಗೆ ನಾಲ್ಕು ಜಿಲ್ಲೆಯಲ್ಲೂ ಬೆಂಬಲ ದೊರಕುತ್ತಿದ್ದು, ಇದರಿಂದ ಉತ್ಸಾಹ ಇಮ್ಮಡಿಸಿದೆ ಎನ್ನುತ್ತಿದ್ದಾರೆ ಬಸವರಾಜ ಗುರಿಕಾರ.
ಮಳೆಯಲ್ಲೂ ಕೂಡಾ ನಿರಂತರವಾಗಿ ಪ್ರಚಾರದಲ್ಲಿ ಬೆಂಬಲಿಗರು ತೊಡಗಿರುವುದು ಸಾಕಷ್ಟು ಅಭಿಮಾನ ಮೂಡುತ್ತಿದೆ. ಕೊರೋನಾ ಸಮಯದಲ್ಲಿ ಎಲ್ಲರೂ ಆರೋಗ್ಯ ಕಾಪಾಡಿಕೊಂಡು ಪ್ರಚಾರ ಮಾಡಬೇಕೆಂದು ಪಕ್ಷೇತರ ಅಭ್ಯರ್ಥಿ ಗುರಿಕಾರ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಸಮಯದಲ್ಲಿ ಬಂದಿರುವ ಚುನಾವಣೆಗೆ ಸಾಕಷ್ಟು ತಯಾರಿ ಬೇಕಾಗಿದ್ದು, ಅದನ್ನೇಲ್ಲ ಸ್ನೇಹಿತರು ಮಾಡಿ ಮುಗಿಸುತ್ತಿದ್ದಾರೆ. ಎಲ್ಲ ಭಾಗದಲ್ಲೂ ಬೆಂಬಲ ದೊರಕುತ್ತಿದೆ ಅಂತಾರೆ ಬಸವರಾಜ ಗುರಿಕಾರ.