Posts Slider

Karnataka Voice

Latest Kannada News

ದಿ. ಅನಂತಕುಮಾರ ಸಹೋದರ-ಸಚಿವ ಪ್ರಲ್ಹಾದ ಜೋಶಿ ಪತ್ನಿಯವರ ಒಡೆತನದ ವಿಭವಗೆ ಬೆಂಕಿ- 3ಕೋಟಿಗೂ ಹೆಚ್ಚು ಹಾನಿ

1 min read
Spread the love

ಹುಬ್ಬಳ್ಳಿ: ತಾಲೂಕಿನ ಶೆರೆವಾಡ ಗ್ರಾಮದ ಬಳಿಯಿರುವ ವಿಭವ ಇಂಡಸ್ಟ್ರೀಯಲ್ಲಿ ಹೊತ್ತಿರುವ ಬೆಂಕಿ ಸುಮಾರು 10 ತಾಸಿಗೂ ಹೆಚ್ಚು ಕಾಲ ಉರಿದಿದ್ದು, ಸುಮಾರು 3 ಕೋಟಿಗೂ ಹೆಚ್ಚು ವಸ್ತುಗಳು ನಾಶವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದಿವಂಗತ ಅನಂತಕುಮಾರ ಸಹೋದರ ನಂದಕುಮಾರ, ಅಚುತ್ ಲಿಮ್ಹೆ, ಉದಯ ಬಾಡಕರ ಹಾಗೂ ಸಂಸದ ಹಾಗೂ ಕೇಂದ್ರದ ಸಚಿವ ಪ್ರಲ್ಹಾದ ಜೋಶಿಯವರ ಪತ್ನಿ ಸೇರಿ ಒಟ್ಟು ನಾಲ್ಕು ಮಾಲೀಕರ ಒಡೆತನದಲ್ಲಿರುವ ಪ್ಯಾಕ್ಟರಿಗೆ ಸರಿಸುಮಾರು ನಿನ್ನೆ ಇಳಿಸಂಜೆ ನಾಲ್ಕು ಗಂಟೆಗೆ ಬೆಂಕಿ ತಗುಲಿತ್ತು.

ಅಂದಾಜು 10ಸಾವಿರ ಚದರ ಅಡಿಯಲ್ಲಿ ಹಬ್ಬಿದ ಬೆಂಕಿ ಕಚ್ಚಾವಸ್ತುಗಳಿಗೆ ಮೊದಲು ತಗುಲಿ ನಂತರ ಧಗಧಗನೆ ಉರಿಯಲಾರಂಭಿಸಿತು. ಬೆಂಕಿ ತಗುಲಿದ್ದು ಮೊದಲೇ ಗೊತ್ತಾಗದೇ ಇದ್ದಿದ್ದರಿಂದ ಕೆಲವೇ ಸಮಯದಲ್ಲಿ ಪ್ಯಾಕ್ಟರಿಯಲ್ಲಿ ಪೂರ್ತಿಯಾಗಿ ವ್ಯಾಪಿಸಿದೆ.

ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಿನಿಂದಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ಮುಳುಗಿದ್ದರೂ ಸುಮಾರು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದಾಗ ಬೆಂಕಿ ತಹಬದಿಗೆ ಬಂದಿದೆ. ಯಾವೊಬ್ಬ ನೌಕರರಿಗೂ ಯಾವುದೇ ತೊಂದರೆ ಆಗಿಲ್ಲ. ಬೆಂಕಿ ತಗುಲುವ ಕೆಲವೇ ಸಮಯದ ಹಿಂದ ಅನೇಕರು ಇದೇ ಪ್ಯಾಕ್ಟರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.

ಬೆಂಕಿಯ ಕೆನ್ನಾಲೆ ಬಹಳ ದೂರದವರೆಗೂ ಹಬ್ಬಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.


Spread the love

Leave a Reply

Your email address will not be published. Required fields are marked *

You may have missed