Posts Slider

Karnataka Voice

Latest Kannada News

ಯಾಕೋ ಹಿಂಗ್ ಮಾಡ್ದೆ- ‘ಗುಲಾಬಿ ಗ್ಯಾಂಗ್’ ಲೀಡರ್ ಹುಬ್ಬಳ್ಳಿಯಲ್ಲಿ ಹೀಗೇಕಂದ್ರು…!

1 min read
Spread the love

ಹುಬ್ಬಳ್ಳಿ: ಅಲ್ಲೋ ನಿಂದ್ ದೊಡ್ಡ ಗಾಡಿ ಐತೀ. ಅದೆಂಗ್ ಹೊಡ್ದ್ಯೋ ಮಾರಾಯ. ಆ ಎರಡ್ ಜೀವಾ ಹೋಗುವಾಗ ಎಷ್ಟು ನರಳಿದ್ವೋ ಏನೋ… ಯಾಕೋ ಹಿಂಗ್ ಮಾಡ್ದೆ.. ಎನ್ನುತ್ತಿದ್ದ ‘ಗುಲಾಬಿ ಗ್ಯಾಂಗ್’ ಖ್ಯಾತಿಯ ಉಮಾಶ್ರೀ ಒಂದೇ ಮಾತಾಡ್ತಾನೆ ಇದ್ರು.


ಅವರ ವಾಹನದಿಂದ ನಡೆದ ಅಪಘಾತ ಉಮಾಶ್ರೀಯವರನ್ನ ಸಾಕಷ್ಟು ನೋವಿಸಿದೆ. ತನ್ನದೇ ಮನೆಯ ಸದಸ್ಯರನ್ನ ಕಳೆದುಕೊಂಡ ಹಾಗೇ ಕಣ್ಣೀರಾಗಿದ್ದಾರೆ. ಅಂತಹದರಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ವಾಹನದ ಚಾಲಕ ಶಿವುಕುಮಾರ ಬಿಡನಾಳರನ್ನ ನೋಡಲು ಕಿಮ್ಸಗೆ ತೆರಳಿದ್ದರು. ಅಲ್ಲಿಯೂ ಕೂಡಾ, ಅವರಿಗಾದ ಆಘಾತವನ್ನ ಮರೆಯದ ಹಾಗೇ ಕಂಡರು.
ಸಣ್ಣಪುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ಚಾಲಕನಿಗೆ ಎಡಬಿಡದೇ ಪ್ರಶ್ನಿಸಿ ತಮಗಾದ ನೋವನ್ನ ಕಡಿಮೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಉಮಾಶ್ರೀ ಮುಂದಾಗಿದ್ದರು.
ಇದೇ ಘಟನೆಯಲ್ಲಿ ತಾಯಿ ಶಾರದಾ ಕಟ್ಟಿಯನ್ನ ಕಳೆದುಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಡಾ.ಸ್ಮಿತಾ ಕಟ್ಟಿಯವರನ್ನ ನೋಡಲು ಖಾಸಗಿ ಆಸ್ಪತ್ರೆಗೆ ಉಮಾಶ್ರೀ ತೆರಳಿದರು. ಅಲ್ಲಿಯೂ ಕೂಡಾ ಅವರ ಕಣ್ಣೀರು ಕಡಿಮೆಯಾಗಿರಲಿಲ್ಲ.
ಮಾಜಿ ಸಚಿವೆಯೂ ಆಗಿರುವ ಉಮಾಶ್ರೀಯವರಿಗೆ ಈ ಅಪಘಾತ ತೀವ್ರ ಆಘಾತವನ್ನುಂಟು ಮಾಡಿರುವುದಂತೂ ಸುಳ್ಳಲ್ಲ.


Spread the love

Leave a Reply

Your email address will not be published. Required fields are marked *

You may have missed