ಧಾರವಾಡ ಜೈಲ್ನಲ್ಲಿ “ಡೆತ್ನೋಟ್” ಬರೆದಿಟ್ಟು ಅನುಮಾನಸ್ಪದ ರೀತಿಯಲ್ಲಿ ವಿಚಾರಣಾಧೀನ ಕೈದಿ ಸಾವು…!?
ಧಾರವಾಡ: ಫೋಕ್ಸೊ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ವಿಚಾರಣಾಧೀನ ಕೈದಿಯೋರ್ವ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಡೆತ್ನೋಟ್ ಬರೆದಿಟ್ಡು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾನೆಂದು ತಿಳಿದು ಬಂದಿದೆ.
ಲಕ್ಷೇಶ್ವರ ತಾಲೂಕಿನ ಗ್ರಾಮವೊಂದರ ಮಹಾಂತೇಶ ನಾಗಪ್ಪ ಕಂಬಾರ ಎಂಬ 29 ವರ್ಷದ ಯುವಕನೇ ಸಾವಿಗೀಡಾಗಿದ್ದು, ಕುಟುಂಬದವರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
